ETV Bharat / state

ಮಂತ್ರಾಲಯ ಶ್ರೀಮಠಕ್ಕಾಗಿ ಏರೋಡ್ರೋಮ್ ಯೋಜನೆ ತರಬೇಕೆನ್ನುವ ಆಸೆಯಿದೆ: ಜಗ್ಗೇಶ್

author img

By

Published : Aug 13, 2022, 8:07 PM IST

ಮಂತ್ರಾಲಯದ ಶ್ರೀಮಠಕ್ಕಾಗಿ ಏರೋಡ್ರೋಮ್ ಯೋಜನೆ ತರಬೇಕೆನ್ನುವ ಆಸೆಯಿದೆ ಎಂದು ಜಗ್ಗೇಶ್ ತಿಳಿಸಿದ್ದಾರೆ.

jaggesh
ರಾಜ್ಯಸಭಾ ಸದಸ್ಯ ಜಗ್ಗೇಶ್

ರಾಯಚೂರು: ಮಂತ್ರಾಲಯದ ಶ್ರೀಮಠಕ್ಕಾಗಿ ಏರೋಡ್ರೋಮ್ ಯೋಜನೆ ತರಬೇಕೆನ್ನುವ ಬಹುದೊಡ್ಡ ಆಸೆಯಿದೆ ಎಂದು ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿದ್ದಾರೆ. ಮಂತ್ರಾಲಯದ ಶ್ರೀಗುರು ರಾಯರ 351ನೇ ಆರಾಧನಾ ಮಹೋತ್ಸವದ‌ಲ್ಲಿ ಭಾಗಿಯಾಗಿ, ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಈಗಿನ ಪೀಠಾಧಿಪತಿಗಳ ನೇತೃತ್ವದಲ್ಲಿ ಮಠದ ಘನತೆ ಹೆಚ್ಚುತ್ತಿದೆ. ನನಗೆ ವೈಯಕ್ತಿಕವಾಗಿ ಇರುವ ದೊಡ್ಡ ಆಸೆ ಎಂದರೆ ಮಠಕ್ಕೆ ಒಂದು ಏರೋಡ್ರೋಮ್ ಬರಬೇಕು. ನಾವೇನು ಮಾಡುವುದಿಲ್ಲ, ರಾಯರೇ ಅದನ್ನೇ ಮಾಡಿಸುತ್ತಾರೆ. ರಾಯರ ಮೇಲೆ ಭಾರ ಹಾಕಿ ನಾನು ಈ ವಿಷಯವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದರು.

ಅಧಿಕಾರ ಬಂದಾಗ ಯಾರೂ ತಮ್ಮ ಕೈ ಗಲೀಜು ಮಾಡಿಕೊಳ್ಳುತ್ತಾರೋ ಅವರನ್ನು ರಾಯರು ಕ್ಷಮಿಸಲ್ಲ. ಅಂಥವರು ಮುಂದೆ ಬೆತ್ತಲಾಗಿ ನಿಲ್ಲಬೇಕಾಗುತ್ತದೆ. ಸದ್ಭಾವವನೆಯಿಂದ ಕೆಲಸ ಮಾಡಬೇಕು. ನನ್ನ ಬಳಿ 39 ರೂಪಾಯಿ ಬಸ್ ಚಾರ್ಜ್​​ಗೂ ಹಣವಿರಲಿಲ್ಲ. ಈಗ ದೊಡ್ಡ ನಟನಾಗಿ, ರಾಜ್ಯಸಭಾ ಸದಸ್ಯನಾಗಿದ್ದೇನೆ. ಅದಕ್ಕೆ ರಾಯರ ಆಶೀರ್ವಾದವೇ ಕಾರಣ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ಜಗ್ಗೇಶ್

ಎಷ್ಟೋ ಯೋಜನೆಗಳ ಬಗ್ಗೆ ಸರಿಯಾಗಿ ಯಾರೂ ಓದಿ ತಿಳಿದುಕೊಳ್ಳುವುದಿಲ್ಲ. ಎಷ್ಟೋ ಅನುದಾನಗಳುಗಳು ವಾಪಸ್ ಹೋಗಿವೆ. ಹೀಗಾಗಿ ಯೋಜನೆಗಳ ಲಾಭ ಪಡೆಯಲು ಆಗುತ್ತಿಲ್ಲ. ಯೋಜನೆ ಬಗ್ಗೆ ಓದಿ ತಿಳಿದುಕೊಳ್ಳಬೇಕು. ನಮಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್​ ಸಂತೋಷ್ ಮಾರ್ಗದರ್ಶನ ಮಾಡುತ್ತಾರೆ. ಇಡೀ ವಿಶ್ವದಲ್ಲಿ ಯುದ್ಧಗಳು ನಿಲ್ಲಬೇಕು ಅಂದ್ರೆ ಪ್ರಧಾನಿ ನರೇಂದ್ರ ಮೋದಿಯಂತಹ ಸಮರ್ಥ ನಾಯಕ ಬೇಕು. ಅಮೆರಿಕ, ರಷ್ಯಾ, ಚೀನಾ ಮೂರು ದೇಶಗಳೊಂದಿಗೆ ಮಾತನಾಡಿ ಅವರನ್ನು ಸಾತ್ವಿಕರನ್ನಾಗಿ ಮಾಡುವ ಶಕ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗಿದೆ ಎಂದು ಜಗ್ಗೇಶ್​ ಬಣ್ಣಿಸಿದರು.

ಇದನ್ನೂ ಓದಿ: ಹಿಂದೂ ಮತ್ತು ಮುಸ್ಲಿಂ ಬಾಂಧವ್ಯಕ್ಕೆ ಸಾಕ್ಷಿಯಾದ ವಿಭಜನೆಯ ದುರಂತದ ಸ್ಮರಣೆಯ ದಿನ

ಹರ್ ಘರ್ ತಿರಂಗಾದಿಂದ ಪ್ರತಿಯೊಬ್ಬರಲ್ಲೂ ದೇಶ ಭಕ್ತಿ ಬರುತ್ತದೆ. ಚಿಕ್ಕಮಕ್ಕಳು ಸಹ ಬಾವುಟ ಕೈಯಲ್ಲಿ ಹಿಡಿಯುವುದರಿಂದ ಅವರಿಗೆ ಸ್ವಾತಂತ್ರ್ಯದ ಪೂರ್ವ ತಿಳಿಯುತ್ತದೆ. ಮೇಧಾವಿಯಾದ ಮೋದಿ ರಾಷ್ಟ್ರಭಕ್ತಿ ಹೆಚ್ಚಿಸಲು ಈ ಯೋಚನೆ ಮಾಡಿದ್ದಾರೆ ಎಂದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.