ETV Bharat / state

ಲೋಕಸಭಾ ಚುನಾವಣೆಗೆ ಸ್ಪರ್ಧೆ ವಿಚಾರ : ಈಟಿವಿ ಭಾರತ ಸಂದರ್ಶನದಲ್ಲಿ ಊಹಾಪೋಹಗಳಿಗೆ ತೆರೆ ಎಳೆದ ರಾಜವಂಶಸ್ಥ ಯದುವೀರ್

author img

By

Published : Aug 7, 2023, 8:04 PM IST

ಯದುವೀರ್​ ಕೃಷ್ಣದತ್ತ ಚಾಮರಾಜ್ ಒಡೆಯರ್
ಯದುವೀರ್​ ಕೃಷ್ಣದತ್ತ ಚಾಮರಾಜ್ ಒಡೆಯರ್

ಪ್ರತಿ ಬಾರಿಯಂತೆ ಈ ಸಲವೂ ಅರಮನೆಯಲ್ಲಿ ಶರವನ್ನವರಾತ್ರಿ ನಡೆಯಲಿದೆ ಎಂದು ರಾಜವಂಶಸ್ಥ ಯದುವೀರ್​ ಕೃಷ್ಣದತ್ತ ಚಾಮರಾಜ್ ಒಡೆಯರ್ ಅವರು ತಿಳಿಸಿದ್ದಾರೆ.

ಯದುವೀರ್​ ಕೃಷ್ಣದತ್ತ ಚಾಮರಾಜ್ ಒಡೆಯರ್ ಅವರ ಸಂದರ್ಶನ

ಮೈಸೂರು : ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತೇನೆ ಎಂಬುದು ಬರೀ ಊಹಾಪೋಹ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಿಳಿಸಿದ್ದಾರೆ. 'ಈಟಿವಿ ಭಾರತ' ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ವಿಚಾರ ಮಾಧ್ಯಮಗಳಿಂದಲೇ ನನಗೆ ಗೊತ್ತಾಗಿರುವುದು. ಈ ವಿಚಾರಕ್ಕೆ ಸಂಬಂಧಿಸಿದಂತೆ ನನ್ನ ಕಡೆಯಿಂದ ಯಾವುದೇ ಚರ್ಚೆ ನಡೆದಿಲ್ಲ. ಈ ಬಗ್ಗೆ ಸದ್ಯ ಯಾವುದೇ ಆಲೋಚನೆ ಮಾಡಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವುದು ಕೇವಲ ಊಹಾಪೋಹ. ನಾನು ದೆಹಲಿಗೆ ಹೋಗುವುದು ಸೈಬರ್ ಸೆಕ್ಯೂರಿಟಿ ವಿಚಾರವಾಗಿ ಚರ್ಚೆ ಮಾಡಲು ಅಷ್ಟೇ. ನಾನು ಪ್ರಧಾನಿಯವರನ್ನು ಭೇಟಿ ಆಗಿಲ್ಲ. ಸದ್ಯಕ್ಕೆ ರಾಜಕೀಯಕ್ಕೆ ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್​​ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಕುರಿತು ಸ್ವತಃ ಯದುವೀರ್ ಈಟಿವಿ ಭಾರತ ಜೊತೆ ಮಾತನಾಡಿ ಊಹಾಪೋಹಗಳಿಗೆ ತೆರೆಎಳೆದಿದ್ದಾರೆ.

ಪ್ರತಿ ಬಾರಿಯಂತೆ ಈ ಸಲವೂ ಅರಮನೆಯಲ್ಲಿ ಶರನ್ನವರಾತ್ರಿ ನಡೆಯಲಿದೆ. ಅರಮನೆಯಲ್ಲಿ ನವಮಿ ದಿನದ ನವರಾತ್ರಿಯಿಂದ ದಶಮಿ ದಿನದ ದಸರಾದವರೆಗೆ ಪ್ರತಿ ವರ್ಷದಂತೆ ಸಾಂಪ್ರದಾಯಿಕವಾಗಿ ಜರುಗಲಿದೆ. ಸರ್ಕಾರದ ದಸರಾ ಸರ್ಕಾರವೇ ಮಾಡುತ್ತದೆ. ನಮ್ಮ ಸಲಹೆಗಳೇನು ಅವರಿಗೆ ಅವಶ್ಯಕತೆ ಇಲ್ಲ ಎಂದು ಯದುವೀರ್ ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು - ಮೈಸೂರು ಹೆದ್ದಾರಿ ನಾಮಕರಣ : ಸರ್ಕಾರದ ನಿರ್ಧಾರಕ್ಕೆ ನಾವು ಬದ್ಧ ಎಂದ ಯದುವೀರ್

ಸೈಬರ್ ಜಾಗೃತಿ ಬಗ್ಗೆ ಯದುವೀರ್ ಹೇಳಿದ್ದೇನು?: ಜಗತ್ತು ಇಂದು ಡಿಜಿಟಲ್ ಯುಗವಾಗಿದ್ದು, ಇತ್ತೀಚಿಗೆ ಬಹುತೇಕ ಅಪರಾಧಗಳು ಡಿಜಿಟಲ್ ರೂಪದಲ್ಲಿಯೇ ಇರಲಿದೆ. ಈ ಬಗ್ಗೆ ಜಾಗೃತಿ ಅವಶ್ಯಕವಾಗಿದೆ. ಹೀಗಾಗಿ ಮೈಸೂರಿನ ರಾಜಮನೆತನ ಸೈಬರ್ ಪ್ರತಿಷ್ಠಾನವನ್ನು ಕಳೆದ ನಾಲ್ಕು ವರ್ಷಗಳ ಹಿಂದೆ ಆರಂಭಿಸಿದೆ. ಈ ಸಂಸ್ಥೆ ಮೂಲಕ ಸಮಾಜದಲ್ಲಿ ಸೈಬರ್ ಭದ್ರತೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: 48 ವರ್ಷಗಳ ನಂತರ ಹೊರಬಂದ ಜಯಚಾಮರಾಜ ಒಡೆಯರ್ ಜೀವಚರಿತ್ರೆ

ಇಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೆ ತರಬೇತಿ ನೀಡಿ, ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ಅದರಿಂದ ಹೇಗೆ? ಎಚ್ಚರಿಕೆ ವಹಿಸಬಹುದು ಎಂಬ ಬಗ್ಗೆ ನಮ್ಮ ಸಂಸ್ಥೆ ಮೂಲಕ ಮಾಡುತ್ತಿದ್ದೇವೆ. ಪ್ರತಿಯೊಬ್ಬರು ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಹೊಂದುವುದು ಹಾಗೂ ಈ ಅರಿವು ಪಡೆಯುವುದು ಅವಶ್ಯಕವಾಗಿದೆ‌. ಈ ನಿಟ್ಟಿನಲ್ಲಿ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಯಾವುದೇ ಪ್ರಚಾರವಿಲ್ಲದೆ ಕಳೆದ ನಾಲ್ಕು ವರ್ಷಗಳಿಂದ ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇವರು ಡಿಜಿಟಲ್ ಪ್ರಪಂಚದಲ್ಲಿ ಸೈಬರ್ ಅಪರಾಧ, ಅವುಗಳಿಂದ ರಕ್ಷಣೆ ಎಂಬ ಬಗ್ಗೆ ಜಾಗೃತಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮೈಸೂರು ಮೃಗಾಲಯದಲ್ಲಿ ಹೈಟೆಕ್ ಶಿಶು ಆರೈಕೆ ಕೇಂದ್ರ ಉದ್ಘಾಟಿಸಿದ ಯದುವೀರ್ ದಂಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.