ETV Bharat / state

ಮೈಸೂರು : ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಹುಟ್ಟುಹಬ್ಬದ ಪ್ರಯುಕ್ತ ಸಹಪಂಕ್ತಿ ಭೋಜನ

author img

By

Published : Jun 27, 2021, 5:05 PM IST

ಪ್ರಗತಿಪರ ಚಿಂತಕ ಪ್ರೊ.ಭಗವಾನ್‌ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಜನರ ಕೆಲಸ ಮಾಡಿದ್ದಾರೆ. ಅವರಂತೆ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಕೂಡ ಕೆಲಸ ಮಾಡಲಿ ಎಂದು ಹೇಳಿದರು..

lunch-programme-for-yathindra-birthday-party-in-mysore
ಶಾಸಕ ಯತೀಂದ್ರ ಹುಟ್ಟುಹಬ್ಬದ ಪ್ರಯುಕ್ತ ಸಹಪಂಕ್ತಿ ಭೋಜನ

ಮೈಸೂರು : ವರುಣಾ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹುಟ್ಟುಹಬ್ಬ ಹಿನ್ನೆಲೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ವೇದಿಕೆಯಿಂದ ಸಹಪಂಕ್ತಿ ಭೋಜನ ಆಯೋಜನೆ ಮಾಡಲಾಗಿತ್ತು. ರಾಮಕೃಷ್ಣ ನಗರದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಪಕ್ಕದಲ್ಲಿ ಪೌರಕಾರ್ಮಿಕರು, ಒಕ್ಕಲಿಗರು,ಮುಸ್ಲಿಮರು,ಲಿಂಗಾಯತ, ಹಿಂದುಳಿದ ವರ್ಗ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು, ಸಹಪಂಕ್ತಿ ಭೋಜನಾದಲ್ಲಿ ಪಾಲ್ಗೊಂಡು ಜಾತಿಗಳ ‌ನಡುವೆ ಸಾಮರಸ್ಯ ಮುಖ್ಯವೆಂದು ತೋರಿಸಿದರು.

ಶಾಸಕ ಯತೀಂದ್ರ ಹುಟ್ಟುಹಬ್ಬದ ಪ್ರಯುಕ್ತ ಸಹಪಂಕ್ತಿ ಭೋಜನ

ಕಾರ್ಯಕ್ರಮದ ಆಯೋಜಕ ಕೆ ಎಸ್ ಶಿವರಾಮ್ ಮಾತನಾಡಿ, ಜಾತಿಗಳ ನಡುವೆ ಸಾಮಾಜಿಕ ಅಂತರ ಕಡಿಮೆಯಾಗಿ, ಸಾಮರಸ್ಯದಿಂದ ಬಾಳಬೇಕು ಎಂಬ ಸಂದೇಶ ರವಾನೆಯಾಗಬೇಕು. ಕೊರೊನಾ ಓಡಿಸಲು ಸಾಮಾಜಿಕ ಅಂತರ ಕಾಪಾಡಿ, ಸಾಮರಸ್ಯದಿಂದ ದೂರವಾಗಬಾರದು ಎಂದರು.

ಪ್ರಗತಿಪರ ಚಿಂತಕ ಪ್ರೊ.ಭಗವಾನ್‌ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಜನರ ಕೆಲಸ ಮಾಡಿದ್ದಾರೆ. ಅವರಂತೆ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಕೂಡ ಕೆಲಸ ಮಾಡಲಿ ಎಂದು ಹೇಳಿದರು.

ಓದಿ: ಖಾಸಗಿ ಬಸ್ ಸಂಚಾರಕ್ಕೆ ಸರ್ಕಾರ ಅಸ್ತು : ಆದ್ರೂ ರಸ್ತೆಗೆ ಬಸ್ ಇಳಿಸಲು ಮಾಲೀಕರು ಹಿಂದೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.