ಮೈಸೂರು: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಆಟೋಚಾಲಕರಿಗೆ 3 ಸಾವಿರ ರೂಪಾಯಿ ಪರಿಹಾರವನ್ನು ಸಿಎಂ ಘೋಷಣೆ ಮಾಡಿದ್ದು, ಈ ಬಗ್ಗೆ ಆಟೋಚಾಲಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
3 ಸಾವಿರ ರೂಪಾಯಿಯಿಂದ ಯಾವುದೇ ನಿರ್ವಹಣೆಯನ್ನು ಮಾಡಲು ಸಾಲುವುದಿಲ್ಲ. ಬದಲಾಗಿ ಹೆಚ್ಚುವರಿಯಾಗಿ ಪರಿಹಾರದ ಮೊತ್ತವನ್ನು ಕನಿಷ್ಟ 10 ರಿಂದ 14 ಸಾವಿರವಾದರೂ ನೀಡಬೇಕಾಗಿತ್ತು ಎಂದು ಆಟೋ ಚಾಲಕರ ಅಭಿಪ್ರಾಯವಾಗಿತ್ತು.
ಕಳೆದ ಬಾರಿ ಘೋಷಣೆ ಮಾಡಿದ್ದ ಹಣವೇ ಸರಿಯಾಗಿ ಇನ್ನೂ ಬಂದಿಲ್ಲ. ಈ ಬಾರಿ ಘೋಷಣೆ ಮಾಡಿರುವ ಪರಿಹಾರ ಹಣವು ಬೇಗ ಬಂದರೆ ಒಳ್ಳೆಯದು ಎಂದು ಕೆಲವು ಆಟೋಚಾಲಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಒಟ್ನಲ್ಲಿ ಸಿಎಂ ಘೋಷಣೆ ಮಾಡಿರುವ ಪ್ಯಾಕೇಜ್ ಬಗ್ಗೆ ಆಟೋ ಚಾಲಕರು ಬೇಸರ ವ್ಯಕ್ತಪಡಿಸಿರುವುದಂತೂ ನಿಜ.