ETV Bharat / state

ನಿಜಾಮುದ್ದೀನ್​​ ಸಭೆಗೆ ಮಂಡ್ಯದಿಂದ ಹೋಗಿದ್ದು ಒಬ್ಬರೇ: ಭಯ ಬೇಡ ಎಂದ ಎಸ್ಪಿ

author img

By

Published : Apr 1, 2020, 4:47 PM IST

ದೆಹಲಿಯ ನಿಜಾಮುದ್ದೀನ್​ನಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಜಿಲ್ಲೆಯ ಒಬ್ಬ ವ್ಯಕ್ತಿ ಮಾತ್ರ ಭಾಗಿಯಾಗಿದ್ದಾನೆ. ಯಾರೂ ಆತಂಕಗೊಳ್ಳುವುದು ಬೇಡ ಎಂದು ಎಸ್‌ಪಿ ಪರಶುರಾಮ್ ತಿಳಿಸಿದರು.

nijamuddin issuie
ನಿಜಾಮುದ್ದಿನ್ ಭಯ ಬೇಡ

ಮಂಡ್ಯ: ದೆಹಲಿಯ ನಿಜಾಮುದ್ದೀನ್​ನಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಜಿಲ್ಲೆಯ ಒಬ್ಬ ವ್ಯಕ್ತಿ ಮಾತ್ರ ಭಾಗಿಯಾಗಿದ್ದಾನೆ. ಯಾರೂ ಆತಂಕಗೊಳ್ಳುವುದು ಬೇಡ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪರಶುರಾಮ್ ತಿಳಿಸಿದರು.

ನಾಗಮಂಗಲದ ನೂರುಲ್ಲಾ ಎಂಬ ವ್ಯಕ್ತಿ ಬಿಟ್ಟರೆ ಮಂಡ್ಯದಿಂದ ಯಾರೂ ಕೂಡ ನಿಜಾಮುದ್ದೀನ್​ ಪ್ರಾರ್ಥನೆಯಲ್ಲಿ ಪಾಲ್ಗೊಂಡಿರುವ ಮಾಹಿತಿ ಇಲ್ಲ. ಸರ್ಕಾರ ಕೊಟ್ಟಿರುವ ಪಟ್ಟಿಯಲ್ಲಿ ಮಂಡ್ಯದ 8 ಜನರು ಇದ್ದಾರೆ. ನಾವು ಪರಿಶೀಲನೆ ಮಾಡಿದ್ದೇವೆ. ವಿಳಾಸ ಮಂಡ್ಯದ್ದಿದೆ. ಆದರೆ ಅವರೆಲ್ಲಾ ಬೇರೆ ಕಡೆ ವಾಸವಿದ್ದಾರೆ. ಒಬ್ಬರ ಫೋನ್ ಮಾರ್ಚ್ 24ರಿಂದ ಸ್ವಿಚ್ ಆಫ್ ಆಗಿದೆ. ಕೊನೆಯ ಲೊಕೇಶನ್ ಉತ್ತರಪ್ರದೇಶದಲ್ಲಿ ತೋರಿಸುತ್ತಿದೆ ಎಂದರು.

ಜಿಲ್ಲೆಯಲ್ಲಿ ಗುಜರಾತಿನ ಧಾರ್ಮಿಕ ಬೋಧನೆ ಮಾಡುವ ವ್ಯಕ್ತಿಗಳು ಬೇರೆ ಬೇರೆ ಮಸೀದಿಗಳಲ್ಲಿದ್ದಾರೆ. ಅವರು ಪ್ರಸ್ತುತ 25 ದಿನಗಳನ್ನು ಕಳೆದಿದ್ದಾರೆ. ಅವರಿಗೆ ಎಲ್ಲರಿಗೂ ಆರೋಗ್ಯ ಇಲಾಖೆಯಿಂದ ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ. ಆದ್ರೂ ಅವರನ್ನ ಹೋಂ ಕ್ವಾರಂಟೈನ್​​ನಲ್ಲಿ ಇಡಲಾಗಿದೆ ಎಂದರು.

24 ಜನ ಬೇರೆ ಜಿಲ್ಲೆಯ ವ್ಯಕ್ತಿಗಳು ನಮ್ಮಲ್ಲಿ ಇದ್ದಾರೆ. ಅವರನ್ನೂ ಕೂಡ ತಪಾಸಣೆ ಮಾಡಲಾಗಿದೆ. ಯಾವುದೇ ತೊಂದರೆ ಇಲ್ಲ. ಅವರನ್ನು ಕೂಡ ಹೋಂ ಕ್ವಾರಂಟೈನ್​​​​ನಲ್ಲಿ ಇಡಲಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.