ETV Bharat / state

ಪ್ರೀತಿಸಿ ಮದುವೆಯಾದ ಕೆಲ ದಿನಗಳಲ್ಲೇ ನವ ವಿವಾಹಿತ ಹೇಮಾವತಿ ನದಿಯಲ್ಲಿ ಶವವಾಗಿ ಪತ್ತೆ!

author img

By

Published : Nov 15, 2019, 2:56 PM IST

ನವ ವಿವಾಹಿತನ ಶವ ಹೇಮಾವತಿ ನದಿಯಲ್ಲಿ ಪತ್ತೆ

ನಾಪತ್ತೆಯಾಗಿದ್ದ ನವ ವಿವಾಹಿತನೋರ್ವ ಶವವಾಗಿ ಪತ್ತೆಯಾಗಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರದ ಹೇಮಾವತಿ ನದಿಯಲ್ಲಿ ನಡೆದಿದೆ.

ಮಂಡ್ಯ: ನಾಪತ್ತೆಯಾಗಿದ್ದ ನವ ವಿವಾಹಿತನೋರ್ವ ಶವವಾಗಿ ಪತ್ತೆಯಾದ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರದ ಹೇಮಾವತಿ ನದಿಯಲ್ಲಿ ನಡೆದಿದೆ.

ಮಂಜು (29) ಎಂಬಾತ ಮೃತ ವ್ಯಕ್ತಿ. ಈತ, ಮಂಡ್ಯ ಜಿಲ್ಲೆಯ ಸಿದ್ಧಯ್ಯನಕೊಪ್ಪಲು ಗ್ರಾಮದ ನಿವಾಸಿ. ಸೆ.18 ರಂದು ತನ್ನದೇ ಊರಿನ ಯುವತಿವೋರ್ವಳನ್ನು ಪ್ರೀತಿಸಿ, ಶಿವಮೊಗ್ಗದ ಶಿಕಾರಿಪುರದಲ್ಲಿ ಮದುವೆ ಮಾಡಿಕೊಂಡಿದ್ದ. ಹುಡುಗಿ ವಿರೋಧ ಇದ್ದರೂ ಆಕೆಗೆ ಮದ್ದೂರಿನ ರುದ್ರಾಕ್ಷಿಪುರದ ಕಿರಣ್ ಎಂಬುವನ ಜೊತೆ ಪೋಷಕರು ನಿಶ್ಚಿತಾರ್ಥ ಮಾಡಿದ್ದರು. ಜೊತೆಗೆ ಅದ್ಧೂರಿ ಮದುವೆಗೆ ಸಿದ್ದತೆ ಸಹ ನಡೆಸಿದ್ದರು. ಅದರಂತೆ ಅಕ್ಟೋಬರ್ 23-24 ರಂದು ಮದುವೆ ದಿನಾಂಕ ನಿಗದಿ ಮಾಡಿದ್ದರು. ಇದಕ್ಕೂ ಮುನ್ನವೇ ಅಂದ್ರೆ ಸೆಪ್ಟಂಬರ್ 18 ರಂದು ಶಿಕಾರಿಪುರದಲ್ಲಿ ಮಂಜು ಹಾಗೂ ಆ ಯುವತಿ ಗುಟ್ಟಾಗಿ ಮದ್ವೆಯಾಗಿ ಮಂಡ್ಯದಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ನವೆಂಬರ್ 9 ರ ಸಂಜೆ ಹಾಲು ತರೋದಾಗಿ ಹೇಳಿ ಹೋಗಿದ್ದ ಮಂಜು ಅವತ್ತಿನಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ದೂರು ದಾಖಲಾಗಿತ್ತು. ನಿನ್ನೆ ಹೊಳೆನರಸೀಪುರ ನದಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಎರಡು ಕೈಯ್ಯಲ್ಲಿದ್ದ ಹಚ್ಚೆಯಿಂದ ಈತನ ಶವ ಗುರುತಿಸಲಾಗಿದೆ.

ಕುತ್ತಿಗೆ ಕುಯ್ದು ಕೊಲೆ ಮಾಡಿ, ದೇಹಕ್ಕೆ ಹಗ್ಗ ಬಿಗಿದು ನದಿಗೆ ಎಸೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮಂಜು ಪತ್ನಿ ತನ್ನ ಕುಟುಂಬಸ್ಥರ ಮೇಲೆ ಅನುಮಾನ ವ್ಯಕ್ತಪಡಿಸಿರುವ ಹಿನ್ನೆಲೆ ಇತ್ತ ಮೃತನ ಪೋಷಕರು ದೂರು ನೀಡಿದ್ದಾರೆ.

Intro:ಮಂಡ್ಯ: ನಾಪತ್ತೆಯಾದ ನವ ವರ ಶವವಾಗಿ ಪತ್ತೆಯಾದ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರದ ಹೇಮಾವತಿ ನದಿಯಲ್ಲಿ ಪತ್ತೆಯಾಗಿದೆ.
ಮಂಜು (29) ಶವವಾಗಿ ಸಿಕ್ಕ ವ್ಯಕ್ತಿಯಾಗಿದ್ದು, ಮಂಜು ಮಂಡ್ಯ ಜಿಲ್ಲೆ ಸಿದ್ಧಯ್ಯನಕೊಪ್ಪಲು ಗ್ರಾಮದ ನಿವಾಸಿಯಾಗಿದ್ದಾನೆ.

ಸೆ.18ರಂದು ತನ್ನದೇ ಊರಿನ ಅರ್ಚನಾರಾಣಿ ಎಂಬುವರನ್ನು ಪ್ರೀತಿಸಿ ಶಿವಮೊಗ್ಗದ ಶಿಕಾರಿಪುರದಲ್ಲಿ ಮದುವೆ ಮಾಡಿಕೊಂಡಿದ್ದ. ಇಬ್ಬರ ಪ್ರೀತಿ ವಿರೋಧಿಸಿ ಅರ್ಚನಾಳಿಗೆ ಮದ್ದೂರಿನ ರುದ್ರಾಕ್ಷಿಪುರದ ಕಿರಣ್ ಎಂಬುವರ ಜೊತೆ ಪೋಷಕರು ನಿಶ್ಚಿತಾರ್ಥ ಮಾಡಿದ್ದರು.
ನಿಶ್ಚಿತಾರ್ಥ ಬಳಿಕ ಅದ್ದೂರಿ ಮದುವೆಗೆ ಸಿದ್ದತೆ ನಡೆಸಲಾಗಿತ್ತು. ಅದರಂತೆ ಅಕ್ಟೋಬರ್ 23-24 ರಂದು ಮದುವೆ ದಿನಾಂಕ ನಿಗಧಿಮಾಡಿದ್ದರು. ಆದರೆ ಸೆಪ್ಟಂಬರ್ 18ರಂದು ಶಿಕಾರಿಪುರದಲ್ಲಿ ಗುಟ್ಟಗಿ ಮದ್ವೆಯಾಗಿ ಮಂಡ್ಯದಲ್ಲಿ ವಾಸವಾಗಿದ್ದರು.
ನವೆಂಬರ್ 9ರ ಸಂಜೆ ಹಾಲು ತರೋದಾಗಿ ಹೇಳಿ ಹೋದ ಮಂಜು ನಾಪತ್ತೆಯಾಗಿದ್ದನು. ಈ ಬಗ್ಗೆ ದೂರು ನೀಡಲಾಗಿತ್ತು. ನಿನ್ನೆ ಹೊಳೆ ನರಸೀಪುರ ನದಿಯಲ್ಲಿ ಶವಪತ್ತೆಯಾಗಿದ್ದು, ಎರಡು ಕೈಗಳಲ್ಲಿದ್ದ ಅಚ್ಚೆಯಿಂದ ಮಂಜು ಶವ ಗುರುತಿಸಿದ ಪತ್ನಿ ಕೊಲೆ ದೂರು ನೀಡಿದ್ದಾರೆ.

ಕುತ್ತಿಗೆ ಕುಯ್ದು ಕೊಲೆಮಾಡಿ ದೇಹಕ್ಕೆ ಹಗ್ಗ ಬಿಗಿದು ನದಿಗೆ ಎಸೆಯಲಾಗಿತ್ತು. ಅರ್ಚನಾ ಕುಟುಂಬಸ್ಥರ ಮೇಲೆ ಅನುಮಾನ ವ್ಯಕ್ತಪಡಿಸಿದ ಮೃತ ಮಂಜು ಪೋಷಕರು ದೂರು ನೀಡಿದ್ದಾರೆ.Body:ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.