ETV Bharat / state

ಏಯ್​​ ಹೋಗೋ...ಬಾರೋ: ಹಾಲಿ - ಮಾಜಿ ಶಾಸಕರ ಜಟಾಪಟಿ!

author img

By

Published : Sep 25, 2019, 11:55 PM IST

ಹಾಲಿ- ಮಾಜಿ ಶಾಸಕರ ಜಟಾಪಟಿ

ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಸರ್ವಸದಸ್ಯರ ಸಭೆಯಲ್ಲಿ ಇಬ್ಬರು ಹಾಲಿ ಮತ್ತು ಮಾಜಿ ಶಾಸಕರುಗಳ ಪ್ರತಿಷ್ಠೆಯಿಂದ ರೈತರ ಹಿತಕಾಯುವ ಕುರಿತು ನಡೆಯಬೇಕಿದ್ದ ಚರ್ಚೆ ಇಬ್ಬರ ವೈಯಕ್ತಿಕ ಜಟಾಪಟಿಯಲ್ಲಿ ಅಂತ್ಯವಾಗಿದೆ.

ಕೋಲಾರ : ಏಹ್..​ ಹೋಯ್​.. ನಮ್ಮ ಎಂಎಲ್​ಎ ಬಗ್ಗೆ ಮಾತಾಡ್ತಿಯಾ, ಆ ಯೋಜನೆ ತಂದಿದ್ದು ನಾನು, ಈ ಯೋಜನೆಯಲ್ಲಿ ನಿಮ್ಮದೇನು ಪಾತ್ರ ಇಲ್ಲ, ಸಭೆಗೆ ಆಹ್ವಾನವಿಲ್ಲದೇ ಸಭೆಗೆ ಬಂದಿದ್ದೀರಾ ಹೀಗೆ ಹಾಲಿ ಮತ್ತು ಮಾಜಿ ಶಾಸಕರುಗಳ ನಡುವೆ ವಾದ - ಪ್ರತಿವಾದ ನಡೆಯುತ್ತಿದ್ರೆ, ಅಲ್ಲೇ ಅವರ ಬೆಂಬಲಿಗರ ನಡುವೆ ಮಾರಾಮಾರಿ ಸಹ ನಡೆಯಿತು. ಅಂದ ಹಾಗೆ ಈ ಮಾರಾಮಾರಿ ದೃಶಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದಲ್ಲಿ.

ಏಯ್​​ ಹೋಗೋ... ಬಾರೋ: ಹಾಲಿ- ಮಾಜಿ ಶಾಸಕರ ಜಟಾಪಟಿ!

ಹೌದು ಇವತ್ತು ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯನ್ನು ಟಿಎಪಿಸಿಎಂಎಸ್​ ಆವರಣದಲ್ಲಿ ಕರೆಯಲಾಗಿತ್ತು. ಈ ಸಭೆಯಲ್ಲಿ ಹಾಜರಿದ್ದ ಹಾಲಿ ಶಾಸಕ ಎಸ್.​ಎನ್​ ನಾರಾಯಣಸ್ವಾಮಿ ಹಾಗೂ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ನಡುವೆ ಭಾಷಣ ಮಾಡುವ ವೇಳೆ ವೇದಿಕೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವೆ ಜಟಾಪಟಿಗೆ ಕಾರಣವಾಯ್ತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಹಾಲಿ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ, ಸಭೆಗೆ ಸಂಬಂಧ ಪಡದ ವಿಷಯಗಳನ್ನು ಮಾತನಾಡುತ್ತಾ ತಮ್ಮ ವೈಯಕ್ತಿಕ ಸಾಧನೆಗಳನ್ನು ಹೇಳಿಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಅವರ ಬೆಂಬಲಿಗರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ರು. ಅಲ್ಲದೇ, ಜಿಲ್ಲೆಯ ಕೆಸಿ ವ್ಯಾಲಿ ಯೋಜನೆಯಲ್ಲಿ ಇವರ ಪಾತ್ರ ಏನೂ ಇಲ್ಲ ಅದೆಲ್ಲ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಅವರ ಶ್ರಮ ಎಂದು ಕಾರ್ಯಕ್ರಮದ ವಿಷಯವನ್ನು ಬಿಟ್ಟು ಬೇರೆ ವಿಷಯವನ್ನು ಮಾತನಾಡಿದ್ದು ಗಲಾಟೆಗೆ ಕಾರಣವಾಯ್ತು.

ಒಟ್ಟಾರೆ ವರ್ಷಕ್ಕೊಮ್ಮೆ ನಡೆಯುವ ರೈತರ ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಸಭೆ ಇವತ್ತು ಇಬ್ಬರು ಹಾಲಿ ಮತ್ತು ಮಾಜಿ ಶಾಸಕರುಗಳ ಪ್ರತಿಷ್ಠೆ ಹಾಗೂ ಜಟಾಪಟಿಗೆ ಬಲಿಯಾಗಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ.

Intro:ಸ್ಲಗ್​: ಹಾಲಿ-ಮಾಜಿ ಪೈಟ್​..

ಆಂಕರ್​: ಅಲ್ಲಿ ರೈತರ ಹಿತ ಕಾಯುವ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಸರ್ವಸದಸ್ಯರ ಸಭೆ ನಡೆಯುತ್ತಿತ್ತು,ಆದ್ರೆ ಇಬ್ಬರು ಹಾಲಿ ಮತ್ತು ಮಾಜಿ ಶಾಸಕರುಗಳ ಪ್ರತಿಷ್ಠೆಯಿಂದ ರೈತರ ಹಿತಕಾಯುವ ಕುರಿತು ನಡೆಯಬೇಕಿದ್ದ ಚರ್ಚೆ ಇಬ್ಬರ ವೈಯಕ್ತಿಕ ಜಟಾಪಟಿಯಲ್ಲಿ ಅಂತ್ಯವಾಯ್ತು..
Body:ಏಹ್​ ಹೋಯ್​ ನಮ್ಮ ಎಂಎಲ್​ಎ ಬಗ್ಗೆ ಮಾತಾಡ್ತಿಯಾ, ಆ ಯೋಜನೆ ತಂದಿದ್ದು ನಾನು, ಈ ಯೋಜನೆಯಲ್ಲಿ ನಿಮ್ಮದೇನು ಪಾತ್ರ ಇಲ್ಲಾ, ಸಭೆಯಗೆ ಆಹ್ವಾನವಿಲ್ಲದೆ ಸಭೆಗೆ ಬಂದಿದ್ದೀರಾ ಹೀಗೆ ಹಾಲಿ ಮತ್ತು ಮಾಜಿ ಶಾಸಕರುಗಳ ನಡುವೆ ವಾದಪ್ರತಿವಾದ ನಡೆಯುತ್ತಿದ್ರೆ, ಅಲ್ಲೇ ಅವರ ಬೆಂಬಲಿಗರ ನಡುವೆ ನಡೆಯುತ್ತಿರುವ ಮಾರಾಮರಿ ಇಂಥಾದೊಂದು ದೃಷ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದಲ್ಲಿ. ಹೌದು ಇವತ್ತು ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ(ಟಿಎಪಿಸಿಎಂಎಸ್​)ನ ಸರ್ವಸದಸ್ಯರ ಸಭೆಯನ್ನು ಟಿಎಪಿಸಿಎಂಎಸ್​ ಆವರಣದಲ್ಲಿ ಕರೆಯಲಾಗಿತ್ತು ಈ ಸಭೆಯಲ್ಲಿ ಹಾಜರಿದ್ದ ಹಾಲಿ ಶಾಸಕ ಎಸ್​ಎನ್​.ನಾರಾಯಣಸ್ವಾಮಿ ಹಾಗೂ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ನಡುವೆ ಬಾಷಣ ಮಾಡುವ ವೇಳೆ ವೇದಿಕೆಯಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವೆ ಜಟಾಪಟಿಗೆ ಕಾರಣವಾಯ್ತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಹಾಲಿ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಸಭೆಯಲ್ಲಿ ಸಭೆಗೆ ಸಂಬಂದಪಡದ ವಿಷಯಗಳನ್ನು ಮಾತಾಡುತ್ತಿದ್ದಾರೆ, ಅವರು ತಮ್ಮ ವೈಯಕ್ತಿಕ ಸಾಧನೆಗಳನ್ನು ಹೇಳಿಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಅವರ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದ್ರು. ಅಲ್ಲದೆ ಜಿಲ್ಲೆಯ ಕೆಸಿ ವ್ಯಾಲಿ ಯೋಜನೆಯಲ್ಲಿ ಇವರ ಪಾತ್ರ ಏನು ಇಲ್ಲಾ ಅದೆಲ್ಲಾ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ ಅವರ ಶ್ರಮ ಎಂದ್ರು. ರೈತರ ಬಗ್ಗೆ ಹಾಗೂ ಟಿಎಪಿಸಿಎಂಎಸ್​ ನ ಅಭಿವೃದ್ದಿ ಬಗ್ಗೆ ಇಲ್ಲಿ ಮಾತನಾಡೋದನ್ನ ಬಿಟ್ಟು ಶಾಸಕರು ಬೇರೆ ವಿಷಯ ಮಾತಾಡುತ್ತಿದ್ರು ಅದಕ್ಕೆ ನಾವು ಆಕ್ಷೇಪ ಮಾಡಿದ್ವಿ ಅನ್ನೋದು ಮಾಜಿ ಶಾಸಕರ ಮಾತು.

ಬೈಟ್​:1 ಎಂ. ನಾರಾಯಣಸ್ವಾಮಿ (ಮಾಜಿ ಶಾಸಕ)

         ಇನ್ನು ಸಭೆಗೆ ಆಹ್ವಾನವಿಲ್ಲದೆ ಬಂದಿರುವ ಮಾಜಿ ಶಾಸಕರು ಸದಸ್ಯತ್ವ ಹೊಂದಿರಬಹುದು ಆದ್ರೆ ವೇದಿಕೆಗೆ ಬಂದು ಉದ್ದೇಶ ಪೂರ್ವಕವಾಗಿ ನಾನು ಉದ್ಘಾಟನೆ ಮಾಡಿ ಬಾಷಣ ಮಾಡುವ ವೇಳೆ ರೈತರ ಹಾಗೂ ಅಲ್ಲಿದ್ದವರ ಒತ್ತಾಯದ ಮೇರೆಗೆ ಕೆಸಿ ವ್ಯಾಲಿ ಯೋಜನೆಯ ಬೆಳವಣಿಗೆಗಳ ಕುರಿತು ಮಾತನಾಡಿದೆ ಈವೇಳೆ ನನ್ನ ಮೈಕ್​ ಕಸಿದುಕೊಂಡು ಮಾಜಿ ಶಾಸಕರು ಮತ್ತು ಅವರ ಬೆಂಬಲಿಗರಾದ ರೌಡಿ ಶೀಟರ್​ಗಳು ಸಭೆಯಲ್ಲಿ ಗಲಬೆ ಎಬ್ಬಿಸಿದ್ರು ಈವೇಳೆ ನಮ್ಮ ಕಾರ್ಯಕರ್ತರು ಮತ್ತು ಅವರ ಬೆಂಬಲಿಗರ ನಡುವೆ ಗಲಾಟೆ ನಡೆಯಿತು ನಂತರ ಸಮಾಧಾನ ಪಡಿಸಲಾಯಿತು ಎನ್ನುವ ಶಾಸಕರು ಕೆಸಿ ವ್ಯಾಲಿ ಯೋಜನೆ ರೈತರಿಗೆ ಅನುಕೂಲವಾಗುವ ಯೋಜನೆ ಅದರ ಬಗ್ಗೆ ಮಾತನಾಡೋದರಲ್ಲಿ ತಪ್ಪೇನಿಲ್ಲ ಇದು ಉದ್ದೇಶಪೂರ್ವಕವಾಗಿ ಮಾಡಿದ ಗಲಾಟೆ ಅನ್ನೋದು ಶಾಸಕರ ಮಾತು.

ಬೈಟ್​:2 ಎಸ್​.ಎನ್​.ನಾರಾಯಣಸ್ವಾಮಿ (ಹಾಲಿ ಶಾಸಕ)Conclusion:ಒಟ್ಟಾರೆ ವರ್ಷಕ್ಕೊಮ್ಮೆ ನಡೆಯುವ ರೈತರ ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಸಭೆ ಇವತ್ತು ಇಬ್ಬರು ಹಾಲಿ ಮತ್ತು ಮಾಜಿ ಶಾಸಕರುಗಳ ಪ್ರತಿಷ್ಠೆ ಹಾಗೂ ಜಟಾಪಟಿಗೆ ಬಲಿಯಾಗಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.