ETV Bharat / state

ಡಿ ಕೆ ಶಿವಕುಮಾರ್​ ಗೋಣಿ ಚೀಲ ಹೇಳಿಕೆಗೆ ಶಾಸಕ ರಾಜುಗೌಡ ತಿರುಗೇಟು

author img

By

Published : Oct 21, 2021, 3:39 PM IST

MLA Raju gowda
ರಾಜೂಗೌಡ

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​​ ಅವರು ಬಿಜೆಪಿ ವಿರುದ್ಧ ಹೇಳಿಕೆಯನ್ನು ನೀಡಿದ್ದರು. ಇದಕ್ಕೆ ಶಾಸಕ ರಾಜುಗೌಡ ಹಾವೇರಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಹಾವೇರಿ: ಹಾನಗಲ್​ ಮತ್ತು ಸಿಂದಗಿ ಕ್ಷೇತ್ರಗಳ ಬೈ ಎಲೆಕ್ಷನ್​ ಪ್ರಚಾರ ಅಬ್ಬರ ದಿನದಿಂದ ದಿನಕ್ಕೆ ಕಾವು ಪಡೆಯುತ್ತಲೇ ಇದೆ. ಈ ನಡುವೆ, ಆರೋಪ- ಪ್ರತ್ಯಾರೋಪ, ಟೀಕೆ-ಟಿಪ್ಪಣಿ ರಾಜಕಾರಣಿಗಳಿಂದ ಹೊರಹೊಮ್ಮುತ್ತಲೇ ಇವೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆಗೆ ಶಾಸಕ ರಾಜುಗೌಡ ತಿರುಗೇಟು ನೀಡಿದ್ದಾರೆ.

ಡಿಕೆಶಿಗೆ ಶಾಸಕ ರಾಜುಗೌಡ ಟಾಂಗ್​

ಹಾನಗಲ್​ ತಾಲೂಕಿನ ಗಡಿಯಂಕನಹಳ್ಳಿಯ ಫಾರಂ ಹೌಸ್​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ ಕೆ ಶಿವಕುಮಾರ್​ ಅವರು ಏನು ಕೆಲಸ ಮಾಡಿದ್ದಾರೋ ಅದನ್ನು ನೆನಪಿಸಿಕೊಂಡು ಮಾತನಾಡುತ್ತಾರೆ. ಅವರು ಸಚಿವರಾಗಿದ್ದ ಸಮಯದಲ್ಲಿ ಗೋಣಿ ಚೀಲದಲ್ಲಿ ದುಡ್ಡು ತೆಗೆದುಕೊಂಡು ಹೋಗಿ ಎಲೆಕ್ಷನ್ ಮಾಡಿದ್ದಾರೆ. ಅದನ್ನೇ ಹೇಳುತ್ತಿದ್ದಾರೆ. ಡಿಕೆಶಿಯವರು ಯಾವತ್ತಾದರೂ ಬೂತ್​ ಕಮಿಟಿ ಸಭೆ ಮಾಡಿದ್ದಾರಾ, ಎಲ್ಲಾ ಸಮುದಾಯದವರನ್ನು ಕರೆದು ಮಾನಾಡಿದ್ದಾರಾ ಎಂದು ಪ್ರಶ್ನಿಸಿದರು.

ಡಿಕೆಶಿಯವರು ಹುಚ್ಚಾಸ್ಪತ್ರೆಗೆ ಹೋದಾಗ ನಾವು ಹೋಗಿ ಹಣ್ಣು-ಹಂಪಲು ಕೊಟ್ಟು ಬರುತ್ತೇವೆ. ಎದುರಾಳಿಗಳು ನಮಗೆ ಬೇಕು. ಇದೇ ವೇಳೆ ಅವರು ಹುಚ್ಚಾಸ್ಪತ್ರೆಗೆ ಸೇರಿದರೆ ಉಚಿತವಾಗಿ ಚಿಕಿತ್ಸೆಯ ಖರ್ಚು ವೆಚ್ಚವವನ್ನು ಸರ್ಕಾರವೇ ಭರಿಸುವಂತೆ ಸಿಎಂ ಬೊಮ್ಮಾಯಿಯವರಿಗೆ ಕೇಳಿಕೊಳ್ಳುತ್ತೇವೆ ಎಂದರು.

ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದಾಗಿನಿಂದ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್​ ಸೋಲುತ್ತಾ ಬಂದಿದೆ. ಇಷ್ಟಾದ ಮೇಲೆ ಅವರು ಎಲ್ಲಿಗೆ ಹೋಗಬೇಕು ಹೇಳಿ, ಅವರಿಗೆ ಎಲ್ಲಾ ರೀತಿಯ ಆರೈಕೆ ಮಾಡುತ್ತೇವೆ ಎಂದು ರಾಜುಗೌಡ ವ್ಯಂಗ್ಯವಾಡಿದರು.

ಇದನ್ನೂ ಓದಿ: ಮೋದಿ, ಬೊಮ್ಮಾಯಿ ದೇಶಕ್ಕೆ ಡೇಂಜರ್​.. 7 ವರ್ಷಗಳಲ್ಲಿ ಬಿಜೆಪಿ ಜನರ ಜೇಬಿಗೆ ಕತ್ತರಿ ಹಾಕಿದೆ: ಸುರ್ಜೇವಾಲಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.