ETV Bharat / state

'ಬಿಜೆಪಿಯವರ ಹತ್ತಿರ ನೂರು ತಲೆಮಾರಿಗಾಗುವಷ್ಟಿದೆಯಲ್ಲ' - ಜಯಮಾಲಾ

author img

By

Published : Jul 22, 2022, 6:50 PM IST

ರಮೇಶ್ ಕುಮಾರ್ ಮೂರ್ನಾಲ್ಕು ತಲೆಮಾರಿಗಾಗುಷ್ಟು ಎಂದಿದ್ದಾರೆ. ಬಿಜೆಪಿಯವರ ಹತ್ತಿರ ನೂರು ತಲೆಮಾರಿಗಾಗುವಷ್ಟಿದೆಯಲ್ಲಾ ಎಂದು ಜಯಮಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Congress protest in Haveri
ಹಾವೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಹಾವೇರಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಮಾತಿನ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ, ಅವರ ಮಾತುಗಳಲ್ಲಿ ಬಿಜೆಪಿ ಕೆಲವನ್ನು ಹೆಕ್ಕಿ ತೆಗೆದು ಅದಕ್ಕೊಂದು ಪ್ಯಾನಲ್ ಡಿಸ್ಕಷನ್ ಇಡಿಸಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ಹಾವೇರಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಹಾಗೂ ಹಿರಿಯ ನಟಿ ಜಯಮಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋನಿಯಾ ಗಾಂಧಿ ಇಡಿ ವಿಚಾರಣೆ ಎದುರಿಸುತ್ತಿದ್ದು ಇದನ್ನು ಖಂಡಿಸಿ ಇಂದು ಹಾವೇರಿಯಲ್ಲಿ ಪ್ರತಿಭಟನೆ ನಡೆಸಿ ಬಳಿಕ ಮಾತನಾಡಿದ ಅವರು, ರಮೇಶ್ ಕುಮಾರ್ ಮೂರ್ನಾಲ್ಕು ತಲೆಮಾರಿಗಾಗುಷ್ಟು ಎಂದಿದ್ದಾರೆ. ಬಿಜೆಪಿಯವರ ಹತ್ತಿರ ನೂರು ತಲೆಮಾರಿಗಾಗುವಷ್ಟಿದೆಯಲ್ಲಾ. ಅವರೋರ್ವ ಮೇಷ್ಟ್ರು, ದೊಡ್ಡಪೀಠದಲ್ಲಿ ಕುಳಿತು ಎಲ್ಲರಿಗೂ ಹೇಳಿದಂತವರು. ಅವರು ಹೇಳಿಕೆಯ ಉದ್ದೇಶವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್​ ತ್ಯಾಗ ಬಲಿದಾನದ ಬಗ್ಗೆ ಅರ್ಥ ಮಾಡಿಕೊಳ್ಳಿ. ನೆಹರು ಅವರಂತೆ ಬಿಜೆಪಿಯವರು ಯಾರಾದರೂ ಜೈಲಿಗೆ ಹೋಗಿ ಬಂದಿದ್ದೀರಾ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪ್ರತಿಭಟನೆ - ಜಯಮಾಲಾ ಮಾತನಾಡಿರುವುದು..

ನಾನು ಸಿನಿಮಾದವಳು. ನೀವು ಅದನ್ನು ಎಡಿಟ್ ಮಾಡಿ ಅದಕ್ಕೊಂದು ಕಲರ್ ಕೊಟ್ಟರೆ ಹೇಗೆ? ನಮ್ಮ ಹೋರಾಟ ಡೈವರ್ಟ್ ಮಾಡಲು ಈ ರೀತಿ ಮಾಡಿಸ್ತಿದ್ದಾರೆ. ಎತ್ತಿ ಕಟ್ಟೋದು, ಸ್ಟ್ರಾಟರ್ಜಿ ಮಾಡೋದೇ ಬಿಜೆಪಿಯವರ ಕೆಲಸ. ದೇಶದಲ್ಲಿರುವ ಪ್ರತಿಯೊಬ್ಬರೂ ಒಂದಾಗಿ ಭಾರತದಿಂದ ಬ್ರಿಟೀಷರನ್ನು ಕಳುಹಿಸಿದ್ದೇವೆ. ಬ್ರಿಟಿಷರ ಬುದ್ಧಿ ಇಟ್ಟುಕೊಂಡು ಬಂದಿರುವ ಇವರನ್ನು ಸಹ ಓಡಿಸುವ ದಿನ ಹತ್ತಿರ ಬರುತ್ತದೆ. ದ್ವೇಷ ರಾಜಕಾರಣ ಮಾಡುವವರು ಯಾರು ಸಹ ಈ ದೇಶದಲ್ಲಿ ಉಳಿದಿಲ್ಲ ಎಂದರು.

ಇದನ್ನೂ ಓದಿ: ಭ್ರಷ್ಟಾಚಾರ ಕುರಿತು ಬಹಿರಂಗ ಚರ್ಚೆಗೆ ಸಿದ್ಧ: ಬಿಜೆಪಿ ನಾಯಕರಿಗೆ ಡಿಕೆಶಿ ಸವಾಲು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.