ಅರಕಲಗೂಡು (ಹಾಸನ): ತಾಲೂಕಿನ ಕೇರಳಾಪುರದಲ್ಲಿ ಗ್ರಾಮದಲ್ಲಿ ಐವರ ಮೇಲೆ ದಾಳಿ ನಡೆಸಿರುವ ಹುಚ್ಚು ನಾಯಿ ಇಬ್ಬರನ್ನು ತೀವ್ರವಾಗಿ ಕಚ್ಚಿ ಗಾಯಗೊಳಿಸಿದೆ.
ಮನೆ ಮುಂದೆ ಕುಳಿತಿದ್ದ ವೃದ್ಧೆ ತಾಯಮ್ಮ (70) ಅವರ ಮುಖ, ಬಾಯಿಗೆ ಕಚ್ಚಿದೆ. ಮನೆ ಮುಂದೆ ಆಟವಾಡುತ್ತಿದ್ದ ಹೇಮಂತಕುಮಾರ್ ಎಂಬುವರ 12 ವರ್ಷದ ಮಗಳು ತನುಶ್ರೀ ಅವರ ಕೈ ಕಚ್ಚಿದ್ದು, ಮಾಂಸಖಂಡ ಕಿತ್ತು ಬಂದಿದೆ.
ಐವರ ಮೇಲೆ ಹುಚ್ಚು ನಾಯಿ ದಾಳಿ ನಡೆಸಿದ್ದರಿಂದ ಗ್ರಾಮಸ್ಥರನ್ನು ಬೆಚ್ಚಿ ಬೀದ್ದಿದ್ದಾರೆ. ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ನಾಯಿಗಳ ಹಾವಳಿ ನಿಯಂತ್ರಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.