ETV Bharat / state

ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ.. ಹೋಮ-ಹವನದ ಮೊರೆ ಹೋದ ಹೋಟೆಲ್ ಮಾಲೀಕರು

author img

By

Published : Jul 20, 2022, 6:26 PM IST

ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಹೋಮ
ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಹೋಮ

ಹುಬ್ಬಳ್ಳಿಯ ಉಣಕಲ್ ಕೆರೆಯ ಬಳಿ ಇರುವ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ನಿನ್ನೆ (ಮಂಗಳವಾರ) ಮತ್ತು ಇಂದು (ಬುಧವಾರ) ಪೂಜೆ, ಹೋಮ- ಹವನ, ಯಜ್ಞವನ್ನು ಶಾಸ್ತ್ರಿಗಳು ನೆರವೇರಿಸಿದರು.

ಹುಬ್ಬಳ್ಳಿ: ಸರಳವಾಸ್ತು ತಜ್ಞ ಚಂದ್ರಶೇಖರ್ ಗುರೂಜಿ ಹತ್ಯೆ ನಂತರ ಹೋಟೆಲ್ ಸಿಬ್ಬಂದಿಯಲ್ಲಿ ಆತಂಕ ಇನ್ನೂ ದೂರವಾಗಿಲ್ಲ. ಈ ಹಿನ್ನೆಲೆ ಅವರ ಹತ್ಯೆ ನಡೆದ ಸ್ಥಳದಲ್ಲಿ ಮತ್ತೆ ಹೋಮ-ಹವನವನ್ನು ನೆರವೇರಿಸಲಾಗಿದೆ. ನಗರದ ಉಣಕಲ್ ಕೆರೆಯ ಬಳಿ ಇರುವ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ನಿನ್ನೆ ಮತ್ತು ಇಂದು ಪೂಜೆ, ಹೋಮ-ಹವನ, ಯಜ್ಞವನ್ನು ಶಾಸ್ತ್ರಿಗಳು ನಡೆಸಿದರು. ಅಘೋರ ಹೋಮ, ಉದಕ ಶಾಂತಿ, ಸುದರ್ಶನ ಹೋಮ, ಗೋ ಪೂಜೆ, ಅಕಲಾ ಪೂಜೆ ನೆರವೇರಿಸಿದರು.

ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಹೋಮ ಹವನ ನಡೆಸಿದ ಪುರೋಹಿತರು

ಸರಳ ವಾಸ್ತು ತಜ್ಞ ಕೊಲೆಗೀಡಾಗಿದ್ದನ್ನು ಅಪಶಕುನ ಎಂದು ಭಾವಿಸಿರುವ ಹೋಟೆಲ್ ಮ್ಯಾನೇಜ್​ಮೆಂಟ್ ಸಿಬ್ಬಂದಿಯಲ್ಲಿ ಧೈರ್ಯ ಹಾಗೂ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಗ್ರಾಹಕರಲ್ಲಿನ ಅಂಜಿಕೆ ಹಾಗೂ ಅಳಕು ತೊಡೆದು ಹಾಕಲು ಯತ್ನಿಸುತ್ತಿದ್ದಾರೆ. ಗುರೂಜಿ ಹತ್ಯೆಯ ನಂತರ ಹೋಟೆಲ್​ನ ಗ್ರಾಹಕರ ಸಂಖ್ಯೆ ಗಣನೀಯ ಕುಸಿತವಾಗಿದೆ‌ಯಂತೆ.

ಹೋಟೆಲ್​ನಲ್ಲಿ ಈವರೆಗೆ ಬುಕ್ ಆಗಿದ್ದ ಮದುವೆ ಸೇರಿದಂತೆ ಖಾಸಗಿ ಕಾರ್ಯಕ್ರಮಗಳು ಕೂಡ ರದ್ದಾಗಿವೆ. ಇದರಿಂದ ಹೋಟೆಲ್​ಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆಯಂತೆ. ಹೀಗಾಗಿ, ಹೋಟೆಲ್ ಮಾಲೀಕರು ಹಾಗೂ ಆಡಳಿತ ಮಂಡಳಿ​ಯವರು ಪೂಜೆಯ ಮೊರೆ ಹೋಗಿದ್ದಾರೆ.

ಓದಿ: ಕೈದಿಗಳ ದಿನಗೂಲಿ ಹೆಚ್ಚಳ ಮಾಡಿಲ್ಲ; ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟೀಕರಣ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.