ETV Bharat / state

ಕೆರೆ ಕಲುಷಿತಗೊಂಡು ಮೀನುಗಳ ಮಾರಣಹೋಮ.. ಪೂರ್ತಿ ನೀರನ್ನು ಖಾಲಿ ಮಾಡುತ್ತಿರುವ ಜನರು

author img

By

Published : Nov 29, 2022, 11:52 AM IST

Updated : Nov 29, 2022, 1:03 PM IST

14 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೆರೆಯ ನೀರು ಮಲಿನವಾಗಿದೆ. ಜಾನುವಾರು ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ಕೆರೆ ನೀರು ಖಾಲಿ ಮಾಡುವುದು ಅನಿವಾರ್ಯ ಎಂದಿದ್ದಾರೆ ಗ್ರಾಮಸ್ಥರು.

fish died of lake water gets polluted in Dharwada
ಕೆರೆಯ ನೀರು ಕಲುಷಿತಗೊಂಡು ಮೀನುಗಳ ಮಾರಣ ಹೋಮ

ಧಾರವಾಡ: ಕೆರೆಯ ನೀರು ಕಲುಷಿತಗೊಂಡು ಸಾವಿರಾರು ಮೀನುಗಳು ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ಶಿಬಾರಗಟ್ಟಿ ಗ್ರಾಮದಲ್ಲಿ ನಡೆದಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಗ್ರಾಮಸ್ಥರು ಕೆರೆಯ ನೀರನ್ನು ಖಾಲಿ ಮಾಡಲು ಮುಂದಾಗಿದ್ದಾರೆ.

ಜಾನುವಾರುಗಳು ಇದೇ ಕೆರೆಯ ನೀರನ್ನು ಕುಡಿಯುತ್ತವೆ. ಇದೀಗ ನೀರು ಕಲುಷಿತೊಂಡಿದ್ದು, ಇದನ್ನು ಕುಡಿದರೆ ಜಾನುವಾರುಗಳಿಗೆ ರೋಗರುಜಿನಗಳು ಬರುವ ಆತಂಕದಲ್ಲಿ ಗ್ರಾಮದ ರೈತರಿದ್ದಾರೆ.

ಕೆರೆಯ ನೀರು ಕಲುಷಿತಗೊಂಡು ಮೀನುಗಳ ಮಾರಣ ಹೋಮ

14 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಕೆರೆಯ ನೀರು ಮಲಿನವಾಗಿದೆ. ಜಾನುವಾರುಗಳು ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ಕೆರೆ ನೀರು ಖಾಲಿ ಮಾಡುವುದು ಅನಿವಾರ್ಯ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇದನ್ನೂ ಓದಿ: ಮಹದೇವಪುರ: ಹರಳೂರು ಕೆರೆಗೆ ಕಲುಷಿತ ನೀರು ಲಕ್ಷಾಂತರ ಮೀನುಗಳು ಸಾವು

Last Updated :Nov 29, 2022, 1:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.