ETV Bharat / state

ನಿರಂತರ ಮಳೆಯಿಂದ ಪ್ರವಾಹ ಭೀತಿ: ಧಾರವಾಡ - ಬೆಳಗಾವಿ ರಸ್ತೆ ಸಂಪರ್ಕ ಕಡಿತ!

author img

By

Published : Aug 5, 2020, 12:33 PM IST

ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಧಾರವಾಡ - ಬೆಳಗಾವಿ ರಸ್ತೆ ಸಂಪರ್ಕ ಕಡಿತವಾಗಿದೆ. ಸವದತ್ತಿ ರಸ್ತೆಯಲ್ಲಿರುವ ಹಾರೋ ಬೆಳವಡಿ ಗ್ರಾಮದ ತುಪ್ಪರಿ ಹಳ್ಳದ ಸೇತುವೆ ನೀರಿನಿಂದ ತುಂಬಿದೆ.

Dharwad-Belgaum Road
ಮಳೆಯಿಂದ ಪ್ರವಾಹ ಭೀತಿ

ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನರು ವಿವಿಧ ಭಾಗಗಳಿಗೆ ಸಂಪರ್ಕ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಧಾರವಾಡ - ಬೆಳಗಾವಿ ರಸ್ತೆ ಸಂಪರ್ಕ ಕಡಿತವಾಗಿದೆ. ಸವದತ್ತಿ ರಸ್ತೆಯಲ್ಲಿರುವ ಹಾರೋ ಬೆಳವಡಿ ಗ್ರಾಮದ ತುಪ್ಪರಿ ಹಳ್ಳದ ಸೇತುವೆ ನೀರಿನಿಂದ ತುಂಬಿದೆ. ಸುರಿಯುತ್ತಿರುವ ಮಳೆಯಿಂದ ತುಪ್ಪರಿ ಹಳ್ಳ ತುಂಬಿ ಹರಿಯುತ್ತಿದೆ.

ಮಳೆಯಿಂದ ಪ್ರವಾಹ ಭೀತಿ

ಕಳೆದ ವರ್ಷ ಭಾರಿ ಮಳೆಗೆ ಸೇತುವೆ ಕೊಚ್ಚಿ ಹೋಗಿತ್ತು. ಆ ಬಳಿಕ ನಿರ್ಮಿಸಲಾದ ತಾತ್ಕಾಲಿಕ ಸೇತುವೆ ಕೂಡಾ ಸದ್ಯ ಮುಳುಗಡೆಯಾಗಿ ಸಂಪರ್ಕ ಬಂದ್ ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.