ETV Bharat / state

ಹುಬ್ಬಳ್ಳಿ: ದೀಪ ಹಚ್ಚಿ ರಸ್ತೆ ಗುಂಡಿ ದುರಸ್ತಿಗೆ ಆಗ್ರಹ, ಪ್ರತಿಭಟನೆ

author img

By

Published : Oct 26, 2022, 6:08 PM IST

hubballi
ರಸ್ತೆ ಗುಂಡಿ ದುರಸ್ತಿಗೆ ಆಗ್ರಹ

ಹುಬ್ಬಳ್ಳಿಯ ಬಸವನದ ಹತ್ತಿರ ಹರಿಯುತ್ತಿರುವ ಒಳಚರಂಡಿ ನೀರು ಗುಂಡಿ ಬಿದ್ದ ರಸ್ತೆಗಳಲ್ಲಿ ನಿಂತಿದೆ. ಈ ಸ್ಥಳದಲ್ಲಿ ದೀಪ ಹಚ್ಚುವ ಮೂಲಕ ದೀಪಾವಳಿ ಆಚರಿಸಿ ಪ್ರತಿಭಟನೆ ನಡೆಸಲಾಯಿತು.

ಹುಬ್ಬಳ್ಳಿ: ರಸ್ತೆ ಗುಂಡಿಗಳಲ್ಲಿ ದೀಪ ಹಚ್ಚಿ ಹಸಿರು ಪಟಾಕಿ ಹಾರಿಸುವ ಮುಖಾಂತರ ಕಾಂಗ್ರೆಸ್‌ ಕಾರ್ಯಕರ್ತರು ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ಹುಬ್ಬಳ್ಳಿಯ ಪ್ರಮುಖ ರಸ್ತೆಗಳಲ್ಲೊಂದಾದ ಬಸವನದ ಹತ್ತಿರ ಹರಿಯುವ ಒಳಚರಂಡಿ ನೀರು ಗುಂಡಿ ಬಿದ್ದ ರಸ್ತೆಗಳಲ್ಲಿ ನಿಂತಿದೆ. ಈ ಸ್ಥಳದಲ್ಲಿ ದೀಪ ಹಚ್ಚುವ ಮೂಲಕ ದೀಪಾವಳಿ ಆಚರಿಸಿ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿ ಮಠ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು.

ನಂತರ ಮಾತನಾಡಿದ ರಜತ್ ಉಳ್ಳಾಗಡ್ಡಿ ಮಠ, ದಿನನಿತ್ಯ ಕೇಂದ್ರದ ಪ್ರಭಾವಿ ಸಚಿವರು, ಕರ್ನಾಟಕದ ಮುಖ್ಯಮಂತ್ರಿಗಳು ಹಾಗೂ ಸತತ 30 ವರ್ಷಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮಾಜಿ ಮುಖ್ಯಮಂತ್ರಿಗಳು ಇದೇ ರಸ್ತೆಯಲ್ಲಿ ಓಡಾಡುತ್ತಾರೆ. ಇಡೀ ದೇಶದಲ್ಲೇ ಅತಿ ಹೆಚ್ಚು ರೋಡ್ ಟ್ಯಾಕ್ಸ್ ಪಾವತಿಸುವ ಕರ್ನಾಟಕ ರಾಜ್ಯದಲ್ಲಿ ರಸ್ತೆ ಪರಿಸ್ಥಿತಿ ಹೀಗಿದೆ. ಇದು 40% ಸರ್ಕಾರವನ್ನು ತೋರಿಸುತ್ತದೆ ಎಂದು ದೂರಿದರು.

ಇದನ್ನೂ ಓದಿ: ಜನರ ಪ್ರಾಣ ಬಲಿ ಪಡೆಯುತ್ತಿರುವ ಬೆಂಗಳೂರಿನ ರಸ್ತೆ ಗುಂಡಿಗಳು... ವರ್ಷದಲ್ಲೇ 10 ಜನ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.