ಧಾರವಾಡ: ವಿದ್ಯಾಗಿರಿಯ ಸತ್ತೂರ ಲೇಔಟ್ನಲ್ಲಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಇ ಪ್ರಶಾಂತ್ ಸತ್ತೂರು ಮನೆಯಿಂದ ಹಣ ತೆಗೆದುಕೊಂಡು ಹೋಗುತ್ತಿದ್ದ ಎಇಎಸ್ ಮಂಜಿನಾಳ ಮತ್ತು ಅವರ ಸಂಬಂಧಿ ಮಹಾಂತೇಶ್ ಎಂಬವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ರಾಜಕೀಯ ದ್ವೇಷಕ್ಕೆ ಹೆಚ್ಚು ಹತ್ಯೆಗಳು ನಡೆಯುತ್ತಿರುವುದು ಆಘಾತಕಾರಿ: ಹೈಕೋರ್ಟ್
ಹಣ ಪಡೆದು ಅದನ್ನು ಸಂಬಂಧಿಕರ ಮೂಲಕ ಎಇಇ ಮನೆಗೆ ಕಳಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಡಿವೈಎಸ್ಪಿ ಮಹಾಂತೇಶ್ ಜಿದ್ದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.