ETV Bharat / state

ಉಸಿರಾಟ ತೊಂದರೆಯಿಂದ ವ್ಯಕ್ತಿ ಸಾವು: ಕೋಟೆನಾಡಿನಲ್ಲಿ ಆತಂಕ

author img

By

Published : Jul 6, 2020, 2:46 PM IST

Updated : Jul 6, 2020, 3:00 PM IST

ಚಿತ್ರದುರ್ಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಇಂದು ಉಸಿರಾಟದ ತೊಂದರೆಯಿಂದ ವ್ಯಕ್ತಿ ಮೃತಪಟ್ಟಿದ್ದು, ಆತಂಕ ಮೂಡಿಸಿದೆ.

chitradurga corona
ಚಿತ್ರದುರ್ಗ ಕೊರೊನಾ

ಚಿತ್ರದುರ್ಗ: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 45 ವರ್ಷದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೃಷ್ಣ ನರ್ಸಿಂಗ್ ಹೋಂನಲ್ಲಿ ನಡೆದಿದ್ದು, ಭಾರಿ ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರಿಗೆ ತೆರಳುತ್ತಿದ್ದ ಶಿಕಾರಿಪುರ ಮೂಲದ ವ್ಯಕ್ತಿ ತೀವ್ರ ಉಸಿರಾಟದ ತೊಂದರೆಯಿಂದ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಆದರೂ ಜನರಲ್ಲಿ ಕೊರೊನಾ ರೋಗಿ ಸಾವು ಎಂಬ ಆತಂಕ ಮನೆ‌ ಮಾಡಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ.

ಚಿತ್ರದುರ್ಗ ಕೊರೊನಾ

ಇನ್ನೊಂದೆಡೆ ಮೃತ ವ್ಯಕ್ತಿಯ ಶವವನ್ನು ಆ್ಯಂಬುಲೆನ್ಸ್​​​​ಗೆ ಶಿಫ್ಟ್ ಮಾಡುವ ವೇಳೆ ಆರೋಗ್ಯ ಇಲಾಖೆಯ ಸಿಬ್ಬಂದಿ ಯಡವಟ್ಟು ಮಾಡಿದ್ದಾರೆ ಎನ್ನಲಾಗುತ್ತಿದೆ. ಆಸ್ಪತ್ರೆಯಿಂದ ಶವ ಇರುವ ಸ್ಟ್ರೆಚರ್​ ತಂದು ಸುಮಾರು 15ರಿಂದ 20 ನಿಮಿಷಗಳ ಕಾಲ ರಸ್ತೆ ಮೇಲಿಟ್ಟು ಬೇಜವಾಬ್ದಾರಿ ಮೆರೆದಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

Last Updated : Jul 6, 2020, 3:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.