ETV Bharat / state

ಕಬ್ಬಿಣದ ಅದಿರು ಸಾಗಿಸುವ ಲಾರಿ ಬೈಕ್​ಗೆ ಡಿಕ್ಕಿ : ಸ್ಥಳದಲ್ಲೇ ಬೈಕ್​ ಸವಾರ ಸಾವು

author img

By

Published : Jun 29, 2021, 4:55 PM IST

ಅಪಘಾತ ನಡೆದು 20 ನಿಮಿಷ ಕಳೆದರೂ ಮೃತ ದೇಹವನ್ನು ತೆರವುಗೊಳಿಸದೇ ಇದ್ದಿದ್ದರಿಂದ ಟ್ರಾಫಿಕ್ ಜಾಮ್ ಏರ್ಪಟ್ಟು ಪೊಲೀಸ್​ ಇಲಾಖೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಯಿತು. ನಂತರ ಸ್ಥಳಕ್ಕೆ ಚಳ್ಳಕೆರೆ ನಗರ ಪೊಲೀಸ್ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿದ್ದಾರೆ..

accident
ಸ್ಥಳದಲ್ಲೇ ಬೈಕ್​ ಸವಾರ ಸಾವು

ಚಿತ್ರದುರ್ಗ : ಕಬ್ಬಿಣದ ಅದಿರು ಸಾಗಿಸುವ ಲಾರಿ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ವಾಲ್ಮೀಕಿ ವೃತ್ತದಲ್ಲಿ ಮೈನ್ಸ್ ಲಾರಿ ಚಾಲಕ ಅಜಾಗರೂಕತೆಯಿಂದಾಗಿ ಈ ಅಪಘಾತ ನಡೆದಿದ್ದು, ರಾಥೋಡ್ (12) ಎಂಬ ಬಾಲಕ ಸಾವನ್ನಪ್ಪಿದ್ದಾನೆ.

ಸ್ಥಳದಲ್ಲೇ ಬೈಕ್​ ಸವಾರ ಸಾವು

ಮತ್ತೋರ್ವ ಬೈಕ್ ಸವಾರ ರಮೇಶ ನಗರಂಗೆರೆ ಗಾಯಗೊಂಡು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತ ನಡೆದು 20 ನಿಮಿಷ ಕಳೆದರೂ ಮೃತ ದೇಹವನ್ನು ತೆರವುಗೊಳಿಸದೇ ಇದ್ದಿದ್ದರಿಂದ ಟ್ರಾಫಿಕ್ ಜಾಮ್ ಏರ್ಪಟ್ಟು ಪೊಲೀಸ್​ ಇಲಾಖೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಯಿತು. ನಂತರ ಸ್ಥಳಕ್ಕೆ ಚಳ್ಳಕೆರೆ ನಗರ ಪೊಲೀಸ್ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:ವಾಹನ ತಪಾಸಣೆ ವೇಳೆ ಡಿಕ್ಕಿ, ಸವಾರ ಸಾವು: ಸ್ಥಳದಲ್ಲಿ ಉದ್ದಿಗ್ನ ಪರಿಸ್ಥಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.