ಚಿಕ್ಕಮಗಳೂರು: ತಾಲೂಕಿನ ಮುತೋಡಿ ಪ್ರಾದೇಶಿಕ ವಲಯದ, ಮೇಲಿನ ಹುಲುವತ್ತಿ ಗ್ರಾಮದ ಕರೆಮನೆ ಮಂಜುನಾಥ್ ಗೌಡ ಎಂಬುವವರ ಕಾಫೀ ತೋಟದಲ್ಲಿ ಅಕ್ರಮವಾಗಿ ಕಡವೆ ಶಿಕಾರಿ ಮಾಡಿದ ಆರೋಪದ ಮೇಲೆ 5 ಜನರನ್ನು ಬಂಧಿಸಲಾಗಿದೆ.
ಗಣೇಶ, ಹುಲ್ಲುವತಿ ಗ್ರಾಮದ ಉಮೇಶ್, ಬಸಯ್ಯ, ಕೃಷ್ಣಪ್ಪ, ಕಲ್ಲೇಶ ಬಂಧಿತ ಆರೋಪಿಗಳು. ಬಂಧಿತರಿಂದ ಕಡವೆ ಮಾಂಸ, ಕಾಲು ಮೂಳೆ, ಪಾತ್ರೆ, ಬೇಟೆಗೆ ಬಳಸಿದ ಕತ್ತಿಗಳನ್ನು ವಶಕ್ಕೆ ಪಡೆಯಲಾಗಿದೆ.
ಮುತೋಡಿ ಪ್ರಾದೇಶಿಕ ಅರಣ್ಯ ವಲಯ ಮಲ್ಲಂದೂರಿನಲ್ಲಿ ವನ್ಯಜೀವಿ ಸಂರಕ್ಷಣ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.