ETV Bharat / state

ಕಡವೆ ಶಿಕಾರಿ: ಐವರು ಆರೋಪಿಗಳ ಬಂಧನ

author img

By

Published : Jun 14, 2021, 5:37 PM IST

ಮುತೋಡಿ ಪ್ರಾದೇಶಿಕ ವಲಯದ ವ್ಯಾಪ್ತಿಯಲ್ಲಿ ಕಡವೆ ಶಿಕಾರಿ ಮಾಡಿದ ಆರೋಪದ ಮೇಲೆ 5 ಜನರನ್ನು ಬಂಧಿಸಲಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

Sambar deer Hunters arrested
ಕಡವೆ ಶಿಕಾರಿ

ಚಿಕ್ಕಮಗಳೂರು: ತಾಲೂಕಿನ ಮುತೋಡಿ ಪ್ರಾದೇಶಿಕ ವಲಯದ, ಮೇಲಿನ ಹುಲುವತ್ತಿ ಗ್ರಾಮದ ಕರೆಮನೆ ಮಂಜುನಾಥ್ ಗೌಡ ಎಂಬುವವರ ಕಾಫೀ ತೋಟದಲ್ಲಿ ಅಕ್ರಮವಾಗಿ ಕಡವೆ ಶಿಕಾರಿ ಮಾಡಿದ ಆರೋಪದ ಮೇಲೆ 5 ಜನರನ್ನು ಬಂಧಿಸಲಾಗಿದೆ.

ಗಣೇಶ, ಹುಲ್ಲುವತಿ ಗ್ರಾಮದ ಉಮೇಶ್, ಬಸಯ್ಯ, ಕೃಷ್ಣಪ್ಪ, ಕಲ್ಲೇಶ ಬಂಧಿತ ಆರೋಪಿಗಳು. ಬಂಧಿತರಿಂದ ಕಡವೆ ಮಾಂಸ, ಕಾಲು ಮೂಳೆ, ಪಾತ್ರೆ, ಬೇಟೆಗೆ ಬಳಸಿದ ಕತ್ತಿಗಳನ್ನು ವಶಕ್ಕೆ ಪಡೆಯಲಾಗಿದೆ.

ಮುತೋಡಿ ಪ್ರಾದೇಶಿಕ ಅರಣ್ಯ ವಲಯ ಮಲ್ಲಂದೂರಿನಲ್ಲಿ ವನ್ಯಜೀವಿ ಸಂರಕ್ಷಣ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.