ETV Bharat / state

ಬರೋಬ್ಬರಿ 8 ಲಕ್ಷ ರೂ.ಕೊಟ್ಟು ಎತ್ತು ಖರೀದಿಸಿದ ಚಿಕ್ಕಮಗಳೂರು ರೈತ

author img

By

Published : Jan 26, 2022, 12:00 PM IST

ಮಂಜುನಾಥ್‍ಗೆ ಎತ್ತಿನಗಾಡಿ ಸ್ಪರ್ಧೆಯಲ್ಲಿ ಭಾಗವಹಿಸೋದು ಅಂದ್ರೆ ಖುಷಿ. ಗಗನ್​ ಎಂಬ ಎತ್ತನ್ನು ಕೂಡ ಸ್ಪರ್ಧೆಗಾಗಿಯೇ ಖರೀದಿಸಿ ತಂದಿದ್ದಾರೆ. ಈ ಎತ್ತನ್ನು ಖರೀದಿ ಮಾಡಲೇಬೇಕು ಎಂದು ಪಣ ತೊಟ್ಟಿದ್ದೆ. 10 ಲಕ್ಷ ರೂ. ಅಂದಿದ್ರು ಖರೀದಿ ಮಾಡ್ತಿದ್ದೆ. ಈಗ ಅದನ್ನು 20 ಲಕ್ಷಕ್ಕೆ ಕೇಳಿದ್ರೂ ಕೊಡಲ್ಲ ಎನ್ನುತ್ತಿದ್ದಾರೆ ರೈತ ಮಂಜುನಾಥ್.

bull
ಎತ್ತು

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದ ಮಂಜುನಾಥ್ ಎಂಬುವವರು 8 ಲಕ್ಷ ರೂಪಾಯಿ ನೀಡಿ ಮಂಡ್ಯದಿಂದ ಗಗನ್ ಎಂಬ ಹೆಸರಿನ ಎತ್ತು ಖರೀದಿಸಿದ್ದಾರೆ. ಗಗನ್​ ಎತ್ತು, ರಾಸುಗಳಲ್ಲೇ ಬೆಸ್ಟ್ ತಳಿಯಾಗಿರೋ ಹಳ್ಳಿಕಾರ್ ತಳಿಗೆ ಸೇರಿದೆ. ಮೈಸೂರಿನಲ್ಲಿದ್ದ ಈ ಎತ್ತನ್ನು ಕಾಫಿನಾಡಿನ ರೈತ ಮಂಜುನಾಥ್ 8 ಲಕ್ಷ ರೂ. ಕೊಟ್ಟು ಖರೀದಿಸಿದ್ದಾರೆ. ಇದನ್ನು ಹೊಲ ಗದ್ದೆಯಲ್ಲಿ ದುಡಿಸೋದಿಕ್ಕೆ ಇದನ್ನು ಖರೀದಿಸಿಲ್ಲ. ಬದಲಿಗೆ ಅದನ್ನು ಸಾಕಿ, ಎತ್ತಿನಗಾಡಿ ಸ್ಪರ್ಧೆಯಲ್ಲಿ ಭಾಗವಹಿಸಲು ಎನ್ನುತ್ತಾರೆ ಮಂಜುನಾಥ್​.

ಗಗನ್ ಹೆಸರಿನ ಎತ್ತು
ಗಗನ್ ಹೆಸರಿನ ಎತ್ತು

ಮಂಜುನಾಥ್‍ಗೆ ಎತ್ತಿನಗಾಡಿ ಸ್ಪರ್ಧೆಯಲ್ಲಿ ಭಾಗವಹಿಸೋದು ಅಂದ್ರೆ ತುಂಬಾನೇ ಖುಷಿ. ಗಗನ್​ ಎತ್ತನ್ನು ಕೂಡ ಸ್ಪರ್ಧೆಗಾಗಿಯೇ ಖರೀದಿಸಿ ತಂದಿದ್ದಾರೆ. ಈ ಎತ್ತನ್ನು ಖರೀದಿ ಮಾಡಲೇಬೇಕು ಎಂದು ಪಣ ತೊಟ್ಟಿದ್ದೆ. 10 ಲಕ್ಷ ಅಂದಿದ್ರು ಖರೀದಿ ಮಾಡ್ತಿದ್ದೆ. ಈಗ ಅದನ್ನು 20 ಲಕ್ಷಕ್ಕೆ ಕೇಳಿದ್ರೂ ಕೊಡಲ್ಲ ಎನ್ನುತ್ತಿದ್ದಾರೆ ರೈತ ಮಂಜುನಾಥ್.

ಇದನ್ನೂ ಓದಿ: ಜಲಚರ ವಿಜ್ಞಾನಕ್ಕೆ ಕೊಡುಗೆ: ಸುಬ್ಬಣ್ಣ ಅಯ್ಯಪ್ಪನ್​ರಿಗೆ ಸಂದ ಪದ್ಮಶ್ರೀ ಗೌರವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.