ಚಿಕ್ಕಬಳ್ಳಾಪುರ: ಅಕ್ರಮವಾಗಿ ಒತ್ತುವರಿಯಾಗಿದ್ದ ಜಾಗ ತೆರವು ಕಾರ್ಯಾಚರಣೆಯನ್ನು ಪೊಲೀಸರ ಸರ್ಪಗಾವಲಿನಲ್ಲಿ ನಡೆಸಲಾಯಿತು.
ನಗರದ ಎಸ್ಎಸ್ಎಸ್ ದೇವಾಲಯದ ಬಳಿ ಅಕ್ರಮ ಒತ್ತುವರಿಯಾಗಿದ್ದ ಜಾಗದ ಮುಂಭಾಗದಲ್ಲಿ ನಿರ್ಮಿಸಿದ್ದ ಅರ್ಚಕರ ವಸತಿ ಗೃಹ, ಪಾರ್ಕ್ ಜಾಗ ಒತ್ತುವರಿ ತೆರವು ಮಾಡಲು ಅಧಿಕಾರಿಗಳು ತೆರಳಿದ್ದರು. ಇದೇ ವೇಳೆ ಒತ್ತುವರಿ ಜಾಗವನ್ನು ತೆರವುಗೊಳಿಸದಂತೆ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ರು. ಇನ್ನು ಪ್ರತಿಭಟನಾಕಾರರಿಗೆ ಜಗ್ಗದ ಅಧಿಕಾರಿಗಳು ತೆರವು ಕಾರ್ಯವನ್ನು ನಡೆಸಿದರು.
ಇದೇ ವೇಳೆ ಸರ್ ಎಂವಿ ಕ್ರೀಡಾಂಗಣದ ಒತ್ತುವರಿ ಜಾಗದ ತೆರವು ಕಾರ್ಯವನ್ನು ಕೂಡ ಪೊಲೀಸರ ಸರ್ಪಗಾವಲಿನಲ್ಲಿ ಕೈಗೊಳ್ಳಲಾಯ್ತು.