ETV Bharat / state

ಕಾವೇರಿ ವನ್ಯಜೀವಿಧಾಮದಲ್ಲಿ ಗಂಡಾನೆ ಸಾವು

author img

By

Published : Apr 7, 2021, 7:59 AM IST

ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿಧಾಮದ ಕೌದಳ್ಳಿ ವಲಯದ ದಂಟಳ್ಳಿ ಶಾಖೆಯ ಕುಲುಮಾವಿನ ಕೆರೆ ಸಮೀಪ ಗಂಡಾನೆಯೊಂದು ಮೃತಪಟ್ಟಿದೆ.

male elephant dies in Cauvery Wildlife Sanctuary
ನಿತ್ರಾಣವಾಗಿ ಓಡಾಡುತ್ತಿದ್ದ ಗಂಡಾನೆ ಸಾವು

ಚಾಮರಾಜನಗರ: ಕಳೆದ ನಾಲ್ಕು ದಿನಗಳ ಹಿಂದೆ ನಿತ್ರಾಣದಿಂದ ಓಡಾಡುತ್ತಿದ್ದ ಗಂಡಾನೆಯೊಂದು ಇಂದು ಮೃತಪಟ್ಟಿರುವ ಘಟನೆ ಕಾವೇರಿ ವನ್ಯಜೀವಿಧಾಮದ ಕೌದಳ್ಳಿ ವಲಯದ ದಂಟಳ್ಳಿ ಶಾಖೆಯ ಕುಲುಮಾವಿನ ಕೆರೆ ಸಮೀಪ ನಡೆದಿದೆ.

male elephant dies in Cauvery Wildlife Sanctuary
ಗಂಡಾನೆ ಸಾವು

ಮೃತ ಆನೆಯೂ‌ 50-60 ವರ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಕಳೆದ 5 ದಿನಗಳ‌ ಹಿಂದೆ ನಿತ್ರಾಣದಿಂದ ನಿಧಾನವಾಗಿ ನಡೆಯುತ್ತಿದ್ದನ್ನು ಇಲಾಖೆ ಸಿಬ್ಬಂದಿ ಗಮನಿಸಿದ್ದರು.

male elephant dies in Cauvery Wildlife Sanctuary
ನಿತ್ರಾಣವಾಗಿ ಓಡಾಡುತ್ತಿದ್ದ ಗಂಡಾನೆ ಸಾವು

ಈಗ ಆನೆಯೂ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ವಯೋಸಹಜವಾಗಿ ಆನೆಯೂ ಮೃತಪಟ್ಟಿರುವುದಾಗಿ ಪಶು ವೈದ್ಯಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ:32,000 ಖಾಸಗಿ ವಾಹನಗಳನ್ನು ರಸ್ತೆಗಿಳಿಸುತ್ತೇವೆ: ಸುರೇಶ್ ನಾಯಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.