ಚಾಮರಾಜನಗರ : ಮದಗಜಗಳ ಕಾದಾಟದಲ್ಲಿ ಆನೆಯೊಂದು ಕೊನೆಯುಸಿರೆಳೆದಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಎನ್.ಬೇಗೂರು ವಲಯದಲ್ಲಿ ನಡೆಸಿದೆ.
![elephant-died](https://etvbharatimages.akamaized.net/etvbharat/prod-images/13301083_thum.jpg)
ಹೆಡಿಯಾಲ ಉಪವಿಭಾಗದ ಎನ್. ಬೇಗೂರ್ ವಲಯದ ಕಳಸೂರು ಗಸ್ತಿನಲ್ಲಿ ಕಾಡಾನೆ ಮೃತದೇಹ ಪತ್ತೆಯಾಗಿದೆ. ಮೃತ ಕಾಡಾನೆಯ ಎರಡು ದಂತಗಳು ಸುರಕ್ಷಿತವಾಗಿವೆ. ಒಂದು ದಂತ 1.9 ಹಾಗೂ ಮತ್ತೊಂದು 1.7 ಮೀಟರ್ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಕಾಡಾನೆಯನ್ನು ಪಶುವೈದ್ಯ ಡಾ. ವಾಸಿ ಮಿರ್ಜಾ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಅನಂತರ ದಂತಗಳನ್ನು ಮೈಸೂರಿನ ಶ್ರೀಗಂಧ ಕೋಠಿಗೆ ರವಾನಿಸಲಾಗಿದೆ.
ಓದಿ: ಮಹಿಳೆಗೆ 32 ಲಕ್ಷ ರೂ. ಮೋಸ ಮಾಡಿದ ಇನ್ಸ್ಟಾಗ್ರಾಂ ವ್ಯಕ್ತಿ.. ಮೋಸ ಹೋಗಿದ್ದು ಹೇಗೆ?