ETV Bharat / state

ಕೈಕೊಟ್ಟ ವರುಣ... ಕೃಪೆ ತೋರುವಂತೆ ಮಾದಪ್ಪನ ಬೆಟ್ಟದಲ್ಲಿ ಗೋ ಪೂಜೆ

author img

By

Published : Jul 6, 2019, 4:22 AM IST

ಕೈಕೊಟ್ಟ ವರುಣ..ಮಳೆಗಾಗಿ ಮಾದಪ್ಪನ ಬೆಟ್ಟದಲ್ಲಿ ಗೋ ಪೂಜೆ

ಹಲವು ಜಿಲ್ಲೆಗಳಲ್ಲಿ ಮಾನ್ಸೂನ್ ಚುರುಕಾಗಿದ್ದರೂ ಕೊಳ್ಳೇಗಾಲ, ಹನೂರು ಭಾಗದಲ್ಲಿ ಮಳೆಯಾಗದ ಹಿನ್ನೆಲೆ ಗೋ ಮಾತೆಗೆ ಪೂಜೆ ಸಲ್ಲಿಸಿ ವರುಣನ ಕೃಪೆಗಾಗಿ ಪ್ರಾರ್ಥಿಸಲಾಯಿತು.

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗೋ ಪೂಜೆ ನಡೆಸಲಾಯಿತು.

ಕೈಕೊಟ್ಟ ವರುಣ..ಮಳೆಗಾಗಿ ಮಾದಪ್ಪನ ಬೆಟ್ಟದಲ್ಲಿ ಗೋ ಪೂಜೆ

ಈಗಾಗಲೇ ಹಲವು ಜಿಲ್ಲೆಗಳಲ್ಲಿ ಮಾನ್ಸೂನ್ ಚುರುಕಾಗಿದ್ದರೂ ಕೊಳ್ಳೇಗಾಲ, ಹನೂರು ಭಾಗದಲ್ಲಿ ಮಳೆಯಾಗದ ಹಿನ್ನೆಲೆ ಗೋ ಮಾತೆಗೆ ಪೂಜೆ ಸಲ್ಲಿಸಿ ವರುಣನ ಕೃಪೆಗಾಗಿ ಪ್ರಾರ್ಥಿಸಲಾಯಿತು. ಮಾದಪ್ಪನ ದೇವಾಲಯದ ಮುಂಭಾಗದಲ್ಲಿ ಅರ್ಚಕರು ಬಾಯಿಗೆ ಬಟ್ಟೆ ಕಟ್ಟಿಕೊಂಡು ಮಡಿಯಾಗಿ ಗೋ ಮಾತೆಗೆ ಹೂವಿನ ಹಾರ ಹಾಕಿ ಪಾದ ಪೂಜೆ ಸಲ್ಲಿಸಿದರು.

ಮಳೆ ಕೈಕೊಟ್ಟ ವೇಳೆ ಮಾದಪ್ಪನ ಬೆಟ್ಟದಲ್ಲಿ ಗೋ ಪೂಜೆ ಸಲ್ಲಿಸಿದರೆ ಮಳೆಯಾಗುತ್ತದೆ ಎಂಬ ಪ್ರತೀತಿ ಇದ್ದು, ಮಳೆಗಾಗಿ ಪ್ರಾರ್ಥಿಸಿ ಗೋ ಪೂಜೆ ನಡೆಸಲಾಗಿದೆ.

Intro:ಕೈಕೊಟ್ಟ ಮಳೆ: ವರುಣನಿಗಾಗಿ ಮಾದಪ್ಪನ ಬೆಟ್ಟದಲ್ಲಿ ಗೋ ಪೂಜೆ

ಚಾಮರಾಜನಗರ: ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗೋ ಪೂಜೆ ನಡೆಸಲಾಗಿದೆ.

Body:ಈಗಾಗಲೇ ಹಲವು ಜಿಲ್ಲೆಗಳಲ್ಲಿ ಮಾನ್ಸೂನ್ ಚುರುಕಾಗಿದ್ದರೂ
ಕೊಳ್ಳೇಗಾಲ, ಹನೂರು ಭಾಗದಲ್ಲಿ ಮಳೆಯಾಗದಿದ್ದರಿಂದ ಗೋ ಮಾತೆಗೆ ಪೂಜೆ ಸಲ್ಲಿಸಿ ವರುಣನ ಕೃಪೆಗಾಗಿ ಪ್ರಾರ್ಥಿಸಲಾಯಿತು.

ಮಾದಪ್ಪನ ದೇವಾಲಯದ ಮುಂಭಾಗದಲ್ಲಿ ಅರ್ಚಕರು ಬಾಯಿಗೆ ಬಟ್ಟೆ ಕಟ್ಟಿಕೊಂಡು ಮಡಿಯಾಗಿ ಗೋ ಮಾತೆಗೆ ಹೂವಿನ ಹಾರ ಹಾಕಿ ಪಾದ ಪೂಜೆ ಸಲ್ಲಿಸಿ ಪೂಜೆ ಸಲ್ಲಿಸಿದರು.

Conclusion:ಮಳೆ ಕೈಕೊಟ್ಟ ವೇಳೆ ಮಾದಪ್ಪನ ಬೆಟ್ಟದಲ್ಲಿ ಗೋ ಪೂಜೆ ಸಲ್ಲಿಸಿದರೆ ಮಳೆಯಾಗುತ್ತದೆ ಎಂಬ ಪ್ರತೀತಿ ಇದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.