ವಿಜಯನಗರ ಭೇಟಿ ಯಶಸ್ವಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರನ್ನು ಬೀಳ್ಕೊಟ್ಟ ಡಿಸಿ

author img

By

Published : Aug 22, 2021, 11:47 AM IST

Vice President Venkaiah naidu

ಹಂಪಿ ಪ್ರವಾಸ ಕೈಗೊಂಡಿದ್ದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಇಂದು ದೆಹಲಿಗೆ ತೆರಳಿದ್ದು ಅವರನ್ನು ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಬೀಳ್ಕೊಟ್ಟರು.

ಹೊಸಪೇಟೆ (ವಿಜಯನಗರ): ತುಂಗಾಭದ್ರಾ ಜಲಾಶಯ, ಹಂಪಿಯ ವಿಶ್ವ ಪಾರಂಪರಿಕ ಸ್ಥಳಗಳ ವೀಕ್ಷಣೆಗೆಂದು ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಇಂದು ದೆಹಲಿಗೆ ತೆರಳಿದ್ದು, ಅವರನ್ನು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಬೀಳ್ಕೊಟ್ಟರು.

ವಾಯುಸೇನೆಯ ವಿಶೇಷ ಹೆಲಿಕಾಪ್ಟರ್​ಗಳ ಮೂಲಕ ವೆಂಕಯ್ಯ ನಾಯ್ಡು ತೆರಳಿದರು. ಈ ಸಂದರ್ಭದಲ್ಲಿ ಎಸ್​ಪಿ ಸೈದುಲು ಅಡಾವತ್, ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ್​, ಎಎಸ್​ಪಿ ಬಿ.ಎನ್. ಲಾವಣ್ಯ, ಸಹಾಯಕ ಆಯುಕ್ತ ಸಿದ್ಧರಾಮೇಶ್ವರ ಮತ್ತಿತರರು ಇದ್ದರು.

ತುಂಗಾಭದ್ರಾ ಜಲಾಶಯ, ಹಂಪಿಯ ವಿಶ್ವಪಾರಂಪರಿಕ ಸ್ಮಾರಕಗಳನ್ನು ವೀಕ್ಷಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ಅವರ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.