ETV Bharat / state

ಆಂಧ್ರಪ್ರದೇಶದ ಆಹೊಬಿಲಂನಲ್ಲಿ ನರಸಿಂಹ ಸ್ವಾಮಿಯ ದರ್ಶನ ಪಡೆದ ಗಾಲಿ ಜನಾರ್ದನ ರೆಡ್ಡಿ

author img

By

Published : Aug 26, 2021, 9:25 PM IST

gali-janardhana-reddy-visits-narasimha-swamy-temple
ನರಸಿಂಹ ಸ್ವಾಮಿಯ ದರ್ಶನ ಪಡೆದ ಗಾಲಿ ಜನಾರ್ಧನ ರೆಡ್ಡಿ

ನನ್ನ ಕುಟುಂಬ ಪರಿವಾರದ ಜೊತೆ ನರಸಿಂಹ ಸ್ವಾಮಿಯ ವಿವಿಧ ಅವತಾರಗಳ ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದೆ ಎಂದು ಗಾಲಿ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

ಬಳ್ಳಾರಿ: ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆಳ್ಳಗಡ್ಡ ತಾಲೂಕಿನ ಪವಿತ್ರ ಕ್ಷೇತ್ರ ಅಹೊಬಿಲಂ ದೇವಾಲಯಕ್ಕೆ ಗಾಲಿ ಜನಾರ್ದನ ರೆಡ್ಡಿ ಕುಟುಂಬ ತೆರಳಿದೆ. ಅಲ್ಲಿ ನರಸಿಂಹ ಸ್ವಾಮಿಯ ದರ್ಶನವನ್ನು ಪಡೆದುಕೊಂಡಿದೆ.

gali-janardhana-reddy-visits-narasimha-swamy-temple
ಆಂಧ್ರಪ್ರದೇಶದ ಆಹೊಬಿಲಂನಲ್ಲಿ ನರಸಿಂಹ ಸ್ವಾಮಿಯ ದರ್ಶನ ಪಡೆದ ಗಾಲಿ ಜನಾರ್ದನ ರೆಡ್ಡಿ

ಪುರಾಣದ ಪ್ರಕಾರ, ಇದು ವಿಷ್ಣು ನರಸಿಂಹಸ್ವಾಮಿಯ ಅವತಾರದಲ್ಲಿ ಭಕ್ತ ಪ್ರಹ್ಲಾದನ ಪ್ರಾರ್ಥನೆಗೆ ಮೆಚ್ಚಿ ಹಿರಣ್ಯಕಶ್ಯಪನನ್ನು ಕೊಂದ ಸ್ಥಳವೆಂದು ಪ್ರಸಿದ್ಧಿ ಪಡೆದಿದೆ. ಅಹೊಬಿಲಂ ಅರಣ್ಯ, ನದಿ, ಬೆಟ್ಟ-ಗುಡ್ಡಗಳ ನಡುವಿನ ಒಂದು ಸುಂದರ ಯಾತ್ರಾಸ್ಥಳವಾಗಿದೆ.

gali-janardhana-reddy-visits-narasimha-swamy-temple
ನರಸಿಂಹ ಸ್ವಾಮಿಯ ದರ್ಶನ ಪಡೆದ ಗಾಲಿ ಜನಾರ್ದನ ರೆಡ್ಡಿ

ಇಲ್ಲಿ ನವ ನರಸಿಂಹ ದೇವರ 9 ವಿವಿಧ ರೂಪಗಳ ದೇವಾಲಯಗಳಿವೆ. ಇದೇ ಅರಣ್ಯ ಪ್ರಾಂತ್ಯದ ಬೆಟ್ಟಗಳ ತಪ್ಪಲಿನಲ್ಲಿ ಪಾವನ ನರಸಿಂಹಸ್ವಾಮಿ ದೇವಾಲಯವಿದೆ. ನಾನು, ನನ್ನ ಕುಟುಂಬ ಪರಿವಾರದ ಜೊತೆ ನರಸಿಂಹ ಸ್ವಾಮಿಯ ವಿವಿಧ ಅವತಾರಗಳ ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದೆ ಎಂದು ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

ಓದಿ: Mysuru Gangrape Case: ಮುಂದುವರಿದ ಪೊಲೀಸ್​ ತನಿಖೆ, ಮೂವರು ಆರೋಪಿಗಳ ಬಂಧನ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.