ETV Bharat / state

ಬುಡಾ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ದಮ್ಮೂರು ಶೇಖರ್

author img

By

Published : Jan 30, 2021, 4:40 AM IST

ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ದಮ್ಮೂರು ಶೇಖರ್​ ಅವರು ಮುಂದುವರೆಯಲಿದ್ದಾರೆ.

dammur-shekhar-will-continue-as-buda-president
ಬುಡಾ ಅಧ್ಯಕ್ಷ

ಬಳ್ಳಾರಿ: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ದಮ್ಮೂರು ಶೇಖರ್​ ಅವರು ಮುಂದುವರೆಯಲಿದ್ದು, ಕೆ.ಎ.ರಾಮಲಿಂಗಪ್ಪ ಅವರನ್ನ ವಾಡಾ ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬುಡಾ ಅಧ್ಯಕ್ಷರಾಗಿದ್ದ ಬಿಜೆಪಿಯ ಹಿರಿಯ ಕೆ.ಎ.ರಾಮಲಿಂಗಪ್ಪ ಅವರು, ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಹಾಲಿ ಬುಡಾ ಅಧ್ಯಕ್ಷರಾಗಿದ್ದ ದಮ್ಮೂರು ಶೇಖರ್​​ ಅವರು, ಮಾಜಿ ಸಚಿವ ಗಾಲಿ ಜನಾರ್ದರೆಡ್ಡಿಯವರ ಆಪ್ತರಾಗಿದ್ದಾರೆ.

Dammur Shekhar will continue as BUDA president
ನೇಮಕಾತಿ ಆದೇಶ

ಕೇವಲ 48 ಗಂಟೆಗಳಲ್ಲೇ ತನ್ನ ನಿಲುವನ್ನ ಬದಲಿಸಿದ ರಾಜ್ಯ ಸರ್ಕಾರ ಬುಡಾ ಅಧ್ಯಕ್ಷರನ್ನಾಗಿ ದಮ್ಮೂರು ಶೇಖರ್​ ಅವರನ್ನ ಮುಂದುವರೆಸಿ, ವಾಡಾ ಅಧ್ಯಕ್ಷರನ್ನಾಗಿ ಹಿರಿಯ ಮುಖಂಡ ಕೆ.ಎ.ರಾಮಲಿಂಗಪ್ಪ ಅವರನ್ನ ನೇಮಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.