ETV Bharat / state

ಕುಂದಾನಗರಿಯಲ್ಲಿ ಆಯುಧ ಪೂಜೆಯಂದೇ ಹರಿಯಿತು ನೆತ್ತರು: ರೌಡಿಯ ಬರ್ಬರ ಹತ್ಯೆ

author img

By

Published : Oct 26, 2020, 12:20 PM IST

ಶಹಬಾಜ್ ಪಠಾಣ್ ಹತ್ಯೆಗೊಳಗಾದ ವ್ಯಕ್ತಿ
ಶಹಬಾಜ್ ಪಠಾಣ್ ಹತ್ಯೆಗೊಳಗಾದ ವ್ಯಕ್ತಿ

ಬರ್ತಡೇ ಪಾರ್ಟಿ ಮುಗಿಸಿ ಮನೆಗೆ ತೆರಳುತ್ತಿದ್ದ ರೌಡಿಯನ್ನು ದುಷ್ಕರ್ಮಿಗಳ ತಂಡವೊಂದು ಕೊಲೆಗೈದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ: ಬರ್ತಡೇ ಪಾರ್ಟಿ ಮುಗಿಸಿ ಮನೆಗೆ ತೆರಳುತ್ತಿದ್ದ ರೌಡಿಯನ್ನು ಗುಂಪೊಂದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಗರದ ಗ್ಯಾಂಗ್ ವಾಡಿಯಲ್ಲಿ ನಡೆದಿದೆ.

ಶಹಬಾಜ್ ಪಠಾಣ್ ಹತ್ಯೆಗೊಳಗಾದ ವ್ಯಕ್ತಿ. ಶಹಬಾಜ್ ಬರ್ತಡೇ ಪಾರ್ಟಿಗೆ ಹೋಗಿರುವುದನ್ನು ದುಷ್ಕರ್ಮಿಗಳು ಖಚಿತಪಡಿಸಿಕೊಂಡಿದ್ದಾರೆ. ಪಾರ್ಟಿ ಮುಗಿಸಿ ಹೊರಬರುತ್ತಿದ್ದಂತೆ ಆತನನ್ನು ಹಿಂಬಾಲಿಸಿದ್ದಾರೆ. ನಿರ್ಜನ ಪ್ರದೇಶದಲ್ಲಿ ಮಾರಕಾಸ್ತ್ರಗಳಿಂದ ದಾಳಿಗೆ ಮುಂದಾಗಿದ್ದು, ಆಗ ಶಹಬಾಜ್ ಬೈಕ್ ಬಿಟ್ಟು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೂ ಬೆನ್ನು ಬಿಡದ ದುಷ್ಕರ್ಮಿಗಳು ಶಹಬಾಜ್​ನನ್ನು ಬರ್ಬರವಾಗಿ ಕೊಚ್ಚಿ ಕೊಂದಿದ್ದಾರೆ. ಕೈಯನ್ನು ಕತ್ತರಿಸಿ ಎರಡು ಭಾಗ ಮಾಡಲಾಗಿದೆ. ಕುತ್ತಿಗೆಗೆ ಮಚ್ಚಿನಿಂದ ಹೊಡೆಯಲಾಗಿದೆ.

ಗ್ಯಾಂಗ್ ವಾಡಿಯಲ್ಲಿ ಶಹಬಾಜ್​ನನ್ನು ಹಂತಕರು ಹಿಂಬಲಿಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಶಹಬಾಜ್​ನನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ‌ಫಲಿಸದೆ ಬೆಳಗ್ಗೆ ಶಹಬಾಜ್ ಮೃತಪಟ್ಟಿದ್ದಾನೆ.

ಹಳೇ ದ್ವೇಷವೇ ಹತ್ಯೆಗೆ ಕಾರಣ ಇರಬಹುದು ಎಂದು‌ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಹಂತಕರ ಬಂಧನಕ್ಕೆ ಶೋಧ‌ ನಡೆಸಿದ್ದಾರೆ. ಮಾಳಮಾರುತಿ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.