ETV Bharat / state

ಡಿಕೆಶಿ ವಿರುದ್ಧ ಸಾಹುಕಾರ್‌ ಸಮರ: ಸಿಡಿ ಗ್ಯಾಂಗ್​ ಬೇಗ ಬಂಧಿಸಬೇಕೆಂದು ಜಾರಕಿಹೊಳಿ ಒತ್ತಾಯ

author img

By

Published : Jan 30, 2023, 1:47 PM IST

Updated : Jan 30, 2023, 3:52 PM IST

ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ರಮೇಶ್‌ ಜಾರಕಿಹೊಳಿ ಸಿಡಿ ಕೇಸ್‌ ಮತ್ತೆ ಮುನ್ನೆಲೆಗೆ ಬಂದಿದೆ. ಸಿಡಿ ಕೇಸ್‌ನಿಂದ ಮಂತ್ರಿ ಪದವಿ ಕಳೆದುಕೊಂಡಿದ್ದ ಬೆಳಗಾವಿ ಸಾಹುಕಾರ್‌ ಈಗ ಡಿ.ಕೆ ಶಿವಕುಮಾರ್‌ ವಿರುದ್ಧ ಸಮರ ಸಾರಿದ್ದಾರೆ.

Dk Shivakumar and  Ramesh Jarkiholi
ಡಿಕೆಶಿ ಹಾಗೂ ರಮೇಶ್‌ ಜಾರಕಿಹೊಳಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್‌ ಜಾರಕಿಹೊಳಿ

ಬೆಳಗಾವಿ: ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ ಶಿವಕುಮಾರ್ ನಡುವೆ ವೈಯಕ್ತಿಕ ಯುದ್ಧ ನಡೆಯುತ್ತಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು. ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಇದೊಂದು ವೈಯಕ್ತಿಯ ಯುದ್ಧ. ರಮೇಶ್ ಜಾರಕಿಜೊಳಿ ಅಂಜಿ ಮನೆಯಲ್ಲಿ ಕೂತಿದ್ದಾರೆ ಅಂದು ಕೊಂಡಿದ್ರು. ಆದರೆ, ನಾನು ಮತ್ತೆ ರಾಜಕಾರಣದಲ್ಲಿ ಸಕ್ರಿಯವಾಗಿದ್ದೇನೆ ಎಂದರು.

ರಾಜಕಾರಣಿ ಅನ್ನೋಕ್ಕೆ ಯೋಗ್ಯತೆ ಇಲ್ಲ: ಮಿಸ್ಟರ್ ಶಿವಕುಮಾರ್ ಅವರನ್ನು ರಾಜಕಾರಣಿ ಅನ್ನೋಕ್ಕೆ ಯೋಗ್ಯತೆ ಇಲ್ಲ. ರಾಜಕಾರಣದಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದ ನಾಲಾಯಕ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುಮಾರು ಒಂದು ವರ್ಷದಿಂದ ಸುಮ್ಮನೆ ಕುಳಿತಿದ್ದೆ. ನಾನು ವೈಯಕ್ತಿಕ ಯಾರನ್ನು ದ್ವೇಷ ಮಾಡುವುದಿಲ. ನಾನು ಯಾವುದೇ ಸಿಡಿ ರಿಲೀಸ್​ ಮಾಡಲ್ಲ. ಜಾರಕಿಹೊಳಿ ಯಾವುದೇ ಗಾಳಿಯಲ್ಲಿ ಗುಂಡು ಹಾರಿಸಲ್ಲ. ಡಿ.ಕೆ ಶಿವಕುಮಾರ್ ಒಬ್ಬ ಮಹಿಳೆ ಮುಖಾಂತರ ನನ್ನ ಜೀವನ ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು.

ಡಿ.ಕೆ ಶಿವಕುಮಾರ್ ಒಬ್ಬ ವ್ಯಕ್ತಿಯ ಜೀವನ ಹಾಳು ಮಾಡಿ ರಾಜಕೀಯ ಮಾಡುತ್ತಾರೆ. ಅವರು, ಸಾವಿರಾರು ಕೋಟಿ ಮಾಲೀಕ. ಸಿಡಿ ಲೇಡಿ ಹಾಗೂ ಅವರಿಗೆ ಸಹಕರಿಸಿದ ಎಲ್ಲರನ್ನು ಸಿಬಿಐ ತಂಡ ಆದಷ್ಟು ಬೇಗ ಬಂಧಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಡಿ.ಕೆ ಶಿವಕುಮಾರ್ ಅವರು ಹಾಸ್ಪಿಟಲ್​​ಗೆ ಅಡ್ಮಿಟ್ ಆದಾಗ ನೋಡೋಕೆ ಹೋಗಿದ್ದೆ. ಆಗ ಡಿಕೆಶಿ ಅವರ ಪತ್ನಿ ಉಷಾ ಅವರು ಕಾಂಗ್ರೆಸ್ ಪಕ್ಷ ಬಿಡದಂತೆ ಬೇಡಿಕೊಂಡಿದ್ದರು. ನಾನು ಮಾತನಾಡಿರುವ ಒಂದು ಅವಾಚ್ಯ ಶಬ್ದವನ್ನು ಎಡಿಟ್ ಮಾಡಿ ಕಿತ್ತೂರು ಚನ್ನಮ್ಮ ಹೋಲಿಸಿ ಜಾತಿ ಮಧ್ಯ ಜಗಳ ಹಚ್ಚುವ ಷಡ್ಯಂತ್ರ ಮಾಡಿದ್ದಾರೆ. ಸಿಡಿ ಮಾಡಿ ಹಲವು ಅಧಿಕಾರಿಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಶಿವಕುಮಾರ್ ಅವರ ಬ್ಲಾಕ್ ಮನಿ ಬಗ್ಗೆ ಸಿಬಿಐ ಮೂಲಕ ತನಿಖೆ ನಡೆಸಬೇಕೆಂದು ರಮೇಶ್​​ ಜಾರಕಿಹೊಳಿ ಒತ್ತಾಯಿಸಿದರು.

ಸಿಡಿ ಟೀಮ್​​ ಬಂಧಿಸಬೇಕು: ನನ್ನ ಬಳಿ 120ಕ್ಕೂ ಹೆಚ್ಚು ಡಾಕ್ಯುಮೆಂಟ್ ಇದೆ. ಆದರೆ, ಬಿಡುಗಡೆ ಮಾಡಲ್ಲ. ಸಿಡಿ ವಿಚಾರ ಈಗ ಬಹಿರಂಗ ಪಡಿಸಲ್ಲ. ಸಿಡಿ ಸಂಬಂಧ ಎಲ್ಲ ದಾಖಲಾತಿಗಳನ್ನು ಸಿಬಿಐಗೆ ನೀಡುತ್ತೇನೆ. ಆದರೆ, ಸಿಡಿಯಲ್ಲಿ ಆಡಿಯೋ ಬಿಡುಗಡೆ ಮಾಡುತ್ತೇನೆ. ಸಿಡಿ ಲೇಡಿ, ಸುರೇಶ ಮತ್ತು ನರೇಶ ಅವರನ್ನು ಬಂಧಿಸಬೇಕು. ಈ ಪ್ರಕರಣದಲ್ಲಿ ಯಾರೇ ಇದ್ದರೂ ಅವರನ್ನು ಬಂಧಿಸಬೇಕು. ಸಿಡಿ ಕೇಸ್​​ನಲ್ಲಿ ಹಲವು ನಾಯಕರಿದ್ದಾರೆ.

ದೇವನಹಳ್ಳಿಯಲ್ಲಿ ರೇಡ್ ಆದಾಗ ಸಾಕಷ್ಟು ಜನರ ಸಿಡಿಗಳು ಸಿಕ್ಕಿವೆ. ಅದರಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಇದ್ದಾರೆ. ಎಲ್ಲ ಪಕ್ಷದ ನಾಯಕರು ಇದ್ದಾರೆ.‌ ಕಾಂಗ್ರೆಸ್ ಪಕ್ಷ ಹಾಳಾಗುವುದಕ್ಕೆ ಡಿ.ಕೆ ಶಿವಕುಮಾರ್ ಹಾಗೂ ವಿಷಕನ್ಯೆ ಕಾರಣ ಎಂದು ಗುಡುಗಿದರು.

ರಾಜ್ಯದಲ್ಲಿ ಕಾಂಗ್ರೆಸ್ ಹಾಳಾಗಿದೆ: ಸಿಡಿ ಕೇಸ್ ಆದ ಮೇಲೆ ಡಿಕೆಶಿ ಅವರಿಗೆ ಹೆದರಿಕೆ ಉಂಟಾಗಿತ್ತು. ನಾನು ಮಾಡಿಲ್ಲ ಎಂದು ಹೇಳಿದ. ಬೆಳಗಾವಿ ಜಿಲ್ಲೆಯವರು ಸಿಡಿ ಬಿಡುಗಡೆ ಮಾಡಿದ್ದಾರೆ ಅಂದಿದ್ದ. ಕಳೆದ ಎರಡು ವರ್ಷದಿಂದ ನನಗೆ ಬಹಳ ಹಾನಿ ಮಾಡಿದ್ರು. ಶಾಸಕಿಯೊಬ್ಬರ ಸಂಬಂಧ ರಾಜ್ಯದಲ್ಲಿ ಕಾಂಗ್ರೆಸ್ ಹಾಳಾಗಿದೆ. ಇಡಿ ರಾಜಕಾರಣ ಮುಂದೆಯೂ ಹಾಳಾಗುತ್ತದೆ. ಇದರಲ್ಲಿ ಬಹಳ ಜನ ಟ್ರ್ಯಾಪ್ ಆಗಿದ್ದಾರೆ. ಗಂಭೀರವಾದ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಸಿಡಿ ಕೇಸ್​ನಲ್ಲಿ 40 ಕೋಟಿ ಡೀಲ್: ಪತ್ರಿಕಾಗೋಷ್ಠಿಯಲ್ಲಿ ರಮೇಶ್ ಜಾರಕಿಹೊಳಿ ಅವರು ಆಡಿಯೋ ಒಂದರ ಬಗ್ಗೆ ಮಾತನಾಡಿದರು. ಆ ಆಡಿಯೋದಲ್ಲಿ ಶಿವಕುಮಾರ್ ದುಬೈ ಲಂಡನ್ ನಲ್ಲಿ ಮನೆ ಇದೆ. ಹಾಗೂ ಸಾವಿರಾರು ಕೋಟಿ ಇರೋದಾಗಿ ಡಿಕೆಶಿ ಮಾತನಾಡಿರುವ ಆಡಿಯೋ ನನ್ನ ಬಳಿ ಇದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ 40 ಕೋಟಿ ಡೀಲ್ ಕುರಿತು ಸಂಭಾಷಣೆ ಮಾಡಿದ್ದಾರೆ.‌ ಆ ಆಡಿಯೋದಲ್ಲಿ ನನ್ನ ಹೆಸರೇ ಹೇಳಿ ಡೀಲ್ ನಡೆದಿದೆ ಎಂದು ರಮೇಶ್​ ಜಾರಕಿಹೊಳಿ ಇದೇ ವೇಳೆ ಆ ಆಡಿಯೋ ಬಗ್ಗೆ ಮಾಹಿತಿ ನೀಡಿದರು.

ಸಿಡಿ ಲೇಡಿ ಅರೆಸ್ಟ್ ಮಾಡಿ. ಎಲ್ಲಾ ವಿಚಾರ ಹೊರಗೆ ಬರುತ್ತದೆ. ಡಿಕೆಶಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮಹಿಳಾ ಪದಾಧಿಕಾರಿ ಮನೆಯಲ್ಲಿ ಆ ಲೇಡಿ ಇದ್ದಾರೆ. ಮುಂದಿನ ಚುನಾವಣೆ ನನ್ನ ಕೊನೆಯ ಚುನಾವಣೆ. ಅದಾದ ಬಳಿಕ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಡಿಕೆಶಿಯಂತವರು ಇರುವಾಗ ನಾವು ರಾಜಕೀಯ ಮಾಡಲು ಆಗಲ್ಲ ಎಂದರು.

ಇದನ್ನೂ ಓದಿ: 'ಮಹಾನಾಯಕನ ಮನೆಗೆ ಕಳುಹಿಸಿದ ಬಳಿಕ ರಾಜಕೀಯ ನಿವೃತ್ತಿ': ರಮೇಶ್ ಜಾರಕಿಹೊಳಿ ಶಪಥ

Last Updated :Jan 30, 2023, 3:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.