ETV Bharat / state

ಪ್ರವಾಹ ಎದುರಿಸಲು ಕಾಗವಾಡ ತಾಲೂಕು ಸನ್ನದ್ಧ: ತಹಶೀಲ್ದಾರ್ ಪ್ರಮೀಳಾ

author img

By

Published : Aug 7, 2020, 6:04 PM IST

ಪ್ರವಾಹದ ಕುರಿತು ನದಿ ಪಾತ್ರದ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಹಾಗೆಯೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕಾಗವಾಡ ತಹಶೀಲ್ದಾರ್​​ ಪ್ರಮೀಳಾ ದೇಶಪಾಂಡೆ ತಿಳಿಸಿದರು.

Tahsildar Pramila Deshapande
ಕಾಗವಾಡ ತಹಶೀಲ್ದಾರ್​​ ಪ್ರಮೀಳಾ ದೇಶಪಾಂಡೆ

ಚಿಕ್ಕೋಡಿ (ಬೆಳಗಾವಿ): ಮೂರ್ನಾಲ್ಕು ದಿನಗಳಿಂದ ನದಿ ತೀರದ ಗ್ರಾಮಗಳ ಜನರಿಗೆ ಪ್ರವಾಹದ ಕುರಿತು ಎಚ್ಚರಿಕೆಯಿಂದ ಇರುವಂತೆ ಡಂಗೂರ ಸಾರುವ ಮೂಲಕ‌ ಜಾಗೃತಿ ಮೂಡಿಸುತ್ತಿದ್ದೇವೆ. ಪ್ರವಾಹ ಎದುರಿಸಲು ಕಾಗವಾಡ ತಾಲೂಕು ಸನ್ನದ್ಧವಾಗಿದೆ ಎಂದು ಕಾಗವಾಡ ತಹಶೀಲ್ದಾರ್​​ ಪ್ರಮೀಳಾ ದೇಶಪಾಂಡೆ ಮಾಹಿತಿ ನೀಡಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರಾಪಂ ಪಿಡಿಓ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಜೊತೆ ಸಭೆ ನಡೆಸಲಾಗಿದ್ದು, ನದಿ ತೀರದ ಗ್ರಾಮಗಳ ಮೇಲೆ ನಿಗಾ ವಹಿಸಲಾಗಿದೆ. ನದಿ ಪಾತ್ರದ ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

ತಹಶೀಲ್ದಾರ್​​ ಪ್ರಮೀಳಾ ದೇಶಪಾಂಡೆ

ಈಗಾಗಲೇ ನದಿ ತೀರದ ಗ್ರಾಮಗಳಾದ ಶಹಪೂರ, ಕುಸನಾಳ, ಜುಗೂಳ, ಕೃಷ್ಣಾ ಕಿತ್ತೂರಲ್ಲಿ ಬೋಟ್‌ಗಳಿವೆ. ಅಲ್ಲದೆ, ಇನ್ನೂ ನಾಲ್ಕು ಬೋಟ್‌ಗಳನ್ನು ಹಾಗೂ ಎಂಟು ಜನ ನಾವಿಕರನ್ನು ನೀಡುವಂತೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಲ್ಲಿ ವಿನಂತಿ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ತಾಲೂಕಿನ ಶಹಪೂರ, ಮಂಗಾವತಿ ಹಾಗೂ ಜುಗೂಳ ಗ್ರಾಮದ ಜನರನ್ನು ಸ್ಥಳಾಂತರಿಸಲು ತಯಾರಿ ನಡೆಸಿದ್ದೇವೆ. ಪ್ರವಾಹದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.