ETV Bharat / state

ಐನಾಪುರದ ಬೃಹತ್ ಕೃಷಿಮೇಳ, ದನಗಳ ಸಂತೆ ಹಾಗೂ ಜಾತ್ರೆ ರದ್ದು

author img

By

Published : Dec 21, 2020, 3:33 PM IST

ಕೋವಿಡ್​ ಹಿನ್ನೆಲೆ ಐನಾಪುರ ಪಟ್ಟಣದ ಶ್ರೀ ಸಿದ್ದೇಶ್ವರ ದೇವರ 51ನೇ ಜಾತ್ರಾ ಮಹೋತ್ಸವವನ್ನು ರದ್ದುಪಡಿಸಲಾಗಿದೆ.

Inapur Agricultural Fair canceled
ಐನಾಪೂರದ ಬೃಹತ್ ಕೃಪಿಮೇಳ, ದನಗಳ ಸಂತೆ ಹಾಗೂ ಜಾತ್ರೆ ರದ್ದು

ಚಿಕ್ಕೋಡಿ: ಉತ್ತರ ಕರ್ನಾಟಕದ ಪ್ರಖ್ಯಾತ ಜಾತ್ರೆಗಳಲ್ಲಿ ಒಂದಾದ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದ ಬೃಹತ್ ಕೃಷಿಮೇಳ, ದನಗಳ ಸಂತೆ ಹಾಗೂ ಜಾತ್ರೆಯನ್ನು ರದ್ದು ಮಾಡಲಾಗಿದೆ.

ಐನಾಪುರದ ಬೃಹತ್ ಕೃಪಿಮೇಳ, ದನಗಳ ಸಂತೆ ಹಾಗೂ ಜಾತ್ರೆ ರದ್ದು

ಕೋವಿಡ್​ ಹಿನ್ನೆಲೆ ಐನಾಪುರ ಪಟ್ಟಣದ ಶ್ರೀ ಸಿದ್ದೇಶ್ವರ ದೇವರ 51ನೇ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಲಾಗಿದೆ‌ ಎಂದು ಪಟ್ಟಣದ ಹಿರಿಯರಾದ ರಾಜಗೌಡ ಪಾಟೀಲ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಪ್ರತಿ ವರ್ಷ ಜಾತ್ರೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಭಕ್ತರು ಸೇರುತ್ತಿದ್ದರು. ಈ ವರ್ಷ ಜಾತ್ರೆಯಲ್ಲಿ ಕೃಷಿಮೇಳ ರದ್ದುಪಡಿಸಲಾಗಿದೆ. ಸಾವಿರಾರು ಜಾನುವಾರಗಳನ್ನು ಜಾತ್ರೆಯಲ್ಲಿ ಸೇರಿಸಲಾಗುತ್ತಿತ್ತು. ಈ ಬಾರಿ ಎಲ್ಲವೂ ರದ್ದಾಗಿವೆ. ಕೃಷಿಮೇಳ ಹಾಗೂ ದನಗಳ ಸಂತೆ ರದ್ದು‌ ಮಾಡಿದ್ದು, ದಯಮಾಡಿ ಭಕ್ತರು, ಅಂಗಡಿಕಾರರು ಐನಾಪುರ ಪಟ್ಟಣದ ಜಾತ್ರೆಗೆ ಆಗಮಿಸಬಾರದೆಂದು ರಾಜಗೌಡ ಪಾಟೀಲ ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.