ETV Bharat / state

ಬೆಳಗಾವಿ: ದಾಖಲೆ ಇಲ್ಲದೇ ಸಾಗಿಸುತ್ತಿದ್ದ 1.53 ಕೋಟಿ ರೂ. ಹಣ ಜಪ್ತಿ

author img

By

Published : Apr 20, 2023, 12:43 PM IST

ದಾಖಲೆ ಇಲ್ಲದ ಹಣ ಜಪ್ತಿ
ದಾಖಲೆ ಇಲ್ಲದ ಹಣ ಜಪ್ತಿ

ಸೂಕ್ತ ದಾಖಲೆ ಇಲ್ಲದೇ ಸಾಗಿಸಲಾಗುತ್ತಿದ್ದ ಹಣವನ್ನು ಫ್ಲೈಯಿಂಗ್ ಸ್ಕಾಡ್ ತಂಡವು ವಶಪಡಿಸಿಕೊಂಡಿದೆ.

ಬೆಳಗಾವಿ: ರಾಮದುರ್ಗ ತಾಲೂಕಿನ ತುರನೂರ ಅರಿಬೆಂಚಿ ರಸ್ತೆಯಲ್ಲಿ, ಇನ್ನೋವಾ ಕಾರಿನಲ್ಲಿ (KA05 NG4775 ) ಸಾಗಿಸುತ್ತಿದ್ದ, ದಾಖಲೆಯಿಲ್ಲದ 1.53 ಕೋಟಿ ರೂ. ಖಚಿತ ಮಾಹಿತಿ ಮೇರೆಗೆ ಫ್ಲೈಯಿಂಗ್ ಸ್ಕಾಡ್ ತಂಡವು ದಾಳಿ ಮಾಡಿ ವಶಪಡಿಸಿಕೊಂಡಿದೆ. ಹಣ ಸಾಗಿಸುತ್ತಿದ್ದ ಬೆಂಗಳೂರಿನ ನಾಗರಭಾವಿಯ ಆರೋಪಿ ಚಂದ್ರಶೇಖರಯ್ಯ, ಕಾರು ಚಾಲಕ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಬೆನಕನಹಳ್ಳಿ ಗ್ರಾಮದ ಕರಿಬಸವರಾಜರ ಬಂಧಿತರು. ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಈ ವರೆಗೂ 200 ಕೋಟಿ ರೂ. ಮೌಲ್ಯದ ವಸ್ತುಗಳ ಜಪ್ತಿ: ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ನಂತರದಿಂದ ಈವರೆಗೂ ನಗದು, ಮದ್ಯ ಸೇರಿ ವಶಪಡಿಸಿಕೊಂಡಿರುವ ವಸ್ತುಗಳ ಮೊತ್ತ 200 ಕೋಟಿ ರೂ. ದಾಟಿದೆ. ಈ ಬಾರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವ ಪ್ರಕರಣಗಳು ಹೆಚ್ಚಾಗಿ ದಾಖಲಾಗಿವೆ. ಸ್ಥಿರ ಕಣ್ಗಾವಲು ತಂಡ, ವಿಚಕ್ಷಣಾ ದಳ, ಪೊಲೀಸ್ ಅಧಿಕಾರಿಗಳು, ಐಟಿ, ಈವರೆಗೂ ಒಟ್ಟು 76.70 ಕೋಟಿ ನಗದು ವಶಕ್ಕೆ ಪಡೆದಿದ್ದರೆ, 19.59 ಮೌಲ್ಯದ ಕೊಡುಗೆ ನೀಡಲು ತಂದಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 42.82 ಕೋಟಿ ರೂ. ಮೌಲ್ಯದ 10 ಲಕ್ಷ ಲೀಟರ್ ಮದ್ಯವನ್ನು ಜಪ್ತಿ ಮಾಡಿದ್ದರೆ, 15.25 ಕೋಟಿ ಮೌಲ್ಯದ ಡ್ರಗ್ಸ್ಅ​​ನ್ನು ವಶಕ್ಕೆ ಪಡೆಯಲಾಗಿದೆ. 45.81 ಕೋಟಿ ಮೌಲ್ಯದ 95.77 ಕೆ.ಜಿ ಬಂಗಾರ, 3.89 ಕೋಟಿ ರೂ. ಮೌಲ್ಯದ 561 ಕೆ.ಜಿ. ಬೆಳ್ಳಿಯನ್ನು ಜಪ್ತಿ ಮಾಡಲಾಗಿದೆ. ಒಟ್ಟು 1,629 ಪ್ರಥಮ ತನಿಖಾ ವರದಿಗಳು(FIR) ದಾಖಲಾಗಿವೆ.

ಈವರೆಗೂ ಒಟ್ಟಾರೆ 69,281 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದ್ದು, 19 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಶಸ್ತ್ರಾಸ್ತ್ರಗಳ ಪರವಾನಿಗೆ ರದ್ದು ಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 4,361 ಪ್ರಕರಣಗಳನ್ನು ದಾಖಲಸಲಾಗಿದ್ದು, ಅವುಗಳಲ್ಲಿ 6,660 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. ಅಲ್ಲದೆ ಇಲ್ಲಿಯವರೆಗೂ ಒಟ್ಟು 11,276 ಜಾಮೀನು ರಹಿತ ವಾರೆಂಟ್‌ಗಳನ್ನು ಜಾರಿಗೊಳಿಸಲಾಗಿದೆ.

ಅಬಕಾರಿ ಇಲಾಖೆಯು 2,082 ಗಂಭೀರ ಪ್ರಕರಣ ಹಾಗೂ 1,601 ಮದ್ಯದ ಪರವಾನಿಗೆ ಉಲ್ಲಂಘಿಸಿದ ಪ್ರಕರಣ, 73 ಎನ್‌ಡಿಪಿಎಸ್ ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15 (ಎ) ಅನ್ವಯ ಒಟ್ಟು 11,389 ಪ್ರಕರಣಗಳನ್ನು ದಾಖಲಿಸಲಾಗಿದೆ. 1,412 ವಿವಿಧ ಮಾದರಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭೆ ಕ್ಷೇತ್ರದಲ್ಲಿ ವಿಚಕ್ಷಣ ದಳ 60 ಸಾವಿರ ರೂ. ನಗದು ಜಪ್ತಿ ಮಾಡಿದರೆ, ಧಾರವಾಡ ವಿಧಾನಸಭೆ ಕ್ಷೇತ್ರದಲ್ಲಿ ಸ್ಥಿರ ಕಣ್ಗಾವಲು ತಂಡ 50,42,736 ರೂ. ಮೌಲ್ಯದ 7.793 ಕೆ.ಜಿ ಬಂಗಾರವನ್ನು ವಶಪಡಿಸಿಕೊಂಡಿದ್ದು, ಹಾವೇರಿಯಲ್ಲೂ 6,49,17,519 ಮೌಲ್ಯದ 11.42 ಕೆ.ಜಿ ಬಂಗಾರವನ್ನು ವಶಪಡಿಸಿಕೊಂಡಿದೆ. ಸ್ಥಿರ ಕಣ್ಗಾವಲು ತಂಡ ಈ ವರೆಗೂ ಹಾವೇರಿ, ಧಾರವಾಡ ಕ್ಷೇತ್ರದಲ್ಲಿ ಈ ವರೆಗೂ 44,63,973 ರೂ. ಮೌಲ್ಯದ 74.896 ಕೆ.ಜಿ ಬೆಳ್ಳಿಯನ್ನು ವಶಕ್ಕೆ ಪಡೆದಿದೆ.

ಇದನ್ನೂ ಓದಿ: ಐಟಿ ದಾಳಿ ಅಂತ್ಯ: ಕೆಜಿಎಫ್ ಬಾಬು ವಿರುದ್ಧ ದೂರು ದಾಖಲಿಸಿದ ಚುನಾವಣಾ ಅಧಿಕಾರಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.