ETV Bharat / state

2000 ರೂ ನೋಟು ಬದಲಾವಣೆ ಹೆಸರಲ್ಲಿ ಪಂಗನಾಮ ಹಾಕಿದ್ದ ಮೂವರ ಬಂಧನ

author img

By

Published : Jun 2, 2023, 4:48 PM IST

ಕಾಗವಾಡ ಮತ್ತು ಮಹಾರಾಷ್ಟ್ರದಲ್ಲಿ ವಂಚನೆಯಲ್ಲಿ ಸಕ್ರಿಯವಾಗಿದ್ದ ಜಾಲವೊಂದನ್ನು ಕಾಗವಾಡ ಪೊಲೀಸರು ಭೇದಿಸಿದ್ದಾರೆ.

ಕಾಗವಾಡ ಪೊಲೀಸರು
ಕಾಗವಾಡ ಪೊಲೀಸರು

ಚಿಕ್ಕೋಡಿ (ಬೆಳಗಾವಿ): ಆರ್​ಬಿಐ 2000 ನೋಟುಗಳನ್ನು ಬ್ಯಾಂಕಿಗೆ ಹಿಂತಿರುಗಿಸಿ ನೋಟು ಬದಲಾವಣೆಗೆ ಕಾಲಾವಧಿ ನೀಡಿದೆ. ಇದನ್ನೇ ಕೆಲವು ದಂಧೆಕೋರರು ಬಂಡವಾಳವಾಗಿ ರೂಪಿಸಿಕೊಂಡು ಗಡಿಯಲ್ಲಿ ದಂಧೆ ನಡೆಸುವುದಕ್ಕೆ ಮುಂದಾಗಿದ್ದರು. ಇದೀಗ ಆರೋಪಿಗಳನ್ನು ಕಾಗವಾಡ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

ಎರಡು ಸಾವಿರ ಮುಖಬೆಲೆಯ ಬದಲಾವಣೆ ನಮಗೆ ಸಾಧ್ಯವಾಗಿಲ್ಲ. ನೀವು ನಮಗೆ 5 ಲಕ್ಷ ರೂ. ಗಳನ್ನು ನೀಡಿದರೆ, ನಿಮಗೆ ನಾವು ಎರಡು ಸಾವಿರ ಮುಖಬೆಲೆಯ 6 ಲಕ್ಷ ರೂಪಾಯಿ ನೀಡುತ್ತೇವೆ ಎಂದು ಸಾರ್ವಜನಿಕರಿಗೆ ಪಂಗನಾಮ ಹಾಕುತ್ತಿದ್ದ ಜಾಲವೊಂಂದು ಕಾಗವಾಡ ಮತ್ತು ಮಹಾರಾಷ್ಟ್ರದಲ್ಲಿ ಸಕ್ರಿಯವಾಗಿರುವ ಸಂದರ್ಭದಲ್ಲಿ ಕಾಗವಾಡ ಪೊಲೀಸರು ದಾಳಿ ನಡೆಸಿ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿತರಾದ ಸಾಗರ ಜಾಧವ್, ಆರೀಫ್ ಸಾಗರ, ಲಕ್ಷ್ಮಣ್ ನಾಯಕ್ ಅವರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಈ ಮೂವರು ಆರೋಪಿಗಳು ಮಹಾರಾಷ್ಟ್ರದ ಮೂಲದ ಸಮೀರ್ ಭೋಸ್ಲೆಅವರನ್ನು ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮಕ್ಕೆ ಕರಿಸಿಕೊಂಡು ವಂಚನೆ ಮಾಡಿದ್ದರು. ಈ ಕುರಿತು ಸಮೀರ್ ಭೋಸ್ಲೆ ಕಾಗವಾಡ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ ಒಂದು ದಿನದಲ್ಲಿ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ಕಾಗವಾಡ ಪೊಲೀಸ್​​ ಠಾಣೆಯಲ್ಲಿ ಇವರು ವಿರುದ್ದ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಮಂಗಳೂರಿನ ಸೋಮೇಶ್ವರ ಬೀಚ್​ನಲ್ಲಿ ನೈತಿಕ ಪೊಲೀಸ್‌ಗಿರಿ: ಐವರ ಬಂಧನ

ಈ ಜಾಲದಲ್ಲಿ ಮಹಾರಾಷ್ಟ್ರದ ಪೊಲೀಸ್​​ ಇಲಾಖೆಯ ಸಿಬ್ಬಂದಿಯಾದ ಸಾಗರ ಸದಾಶಿವ ಜಾಧವ್ ಜೊತೆಯಾಗಿ ಅವನ ಇನ್ನಿಬ್ಬರು ಸ್ನೇಹಿತರ ಜೊತೆ ಈ ವಂಚನೆ ಪ್ರಕರಣ ನಡೆಸುತ್ತಿದ್ದರು. ಜೊತೆಗೆ ಅಮಾಯಕರನ್ನು ನಂಬಿಸಲು ಮಕ್ಕಳು ಆಟಿಕೆಗೆ ಬಳಸುವ ಹಣದ ಜೊತೆಗೆ ಕೆಲವು ಅಸಲಿ ಹಣವನ್ನು ಸೇರಿಸಿ ಬಂಡಲ್​ ಮಾಡಿಕೊಂಡು ನಂಬಿಕೆ ಬರುವ ಹಾಗೆ ತೋರಿಸಿ ಕೈಗೆ ಹಣ ಸಿಗುತ್ತಿದ್ದಂತೆ ಪೊಲೀಸರು ಬಂದರು ಎಂದು ಹೇಳಿ ವಂಚನೆ ಮಾಡಿ ಪರಾರಿ ಆಗುತ್ತಿದ್ದರು.

ಇದೇ ರೀತಿಯಲ್ಲಿ ಹಿಂದೆ ಕೂಡ ಇತರ ಮೂವರಿಗೆ ವಂಚನೆ ಮಾಡಿದ್ದಾರೆ ಎಂದು ಬೆಳಗಾವಿ ಎಸ್ ಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಹಾಗೂ 2000 ರೂ. ಮುಖಬೆಲೆಯ ನೋಟುಗಳನ್ನು ಯಾವುದೇ ಗೊಂದಲವಿಲ್ಲದೇ ನೇರವಾಗಿ ನೀವು ಬ್ಯಾಂಕುಗಳಿಗೆ ಹೋಗಿ ಹಣ ಬದಲಾವಣೆ ಮಾಡಿಕೊಂಡು ಬರಬೇಕು. ಯಾವುದೇ ವದಂತಿಗಳಿಗೆ ಕಿವಿಗೊಡದೇ ನಿಮ್ಮ ಹಣವನ್ನು ನೀವು ಬದಲಾವಣೆ ಮಾಡಿಕೊಳ್ಳಿ ಎಂದು ಸಾರ್ವಜನಿಕರಿಗೆ ಬೆಳಗಾವಿ ಎಸ್​ಪಿ ಡಾ ಸಂಜೀವ ಪಾಟೀಲ್ ಮನವಿ ಮಾಡಿದ್ದಾರೆ. ಇಂತಹ ಘಟನೆಗಳು ಎಲ್ಲಾದರೂ ಕಂಡು ಬಂದರೆ 112 ಗೆ ಕರೆ ಮಾಡುವಂತೆಯೂ ತಿಳಿಸಿದ್ದಾರೆ.

ಇದನ್ನೂ ಓದಿ : ಕ್ರಿಕೆಟ್ ಬೆಟ್ಟಿಂಗ್ ಸಾಲ ತೀರಿಸಲು ಒಂಟಿ ವೃದ್ಧೆಯ ಕೊಲೆ, ಕಳ್ಳತನ: ಆರೋಪಿಗಳು ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.