ETV Bharat / state

ಸಂಪತ್ ರಾಜ್ ಸ್ನೇಹಿತರಿಗೆ ಸಿಸಿಬಿ ಬುಲಾವ್: ಕೆಲವರ ಮೊಬೈಲ್ ಸ್ವಿಚ್​​ ಆಫ್​​

author img

By

Published : Nov 4, 2020, 11:02 AM IST

sampath raj
ಸಂಪತ್ ರಾಜ್

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ‌ಯಿಟ್ಟ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಪರಾರಿಯಾಗಿರುವ ಹಿನ್ನೆಲೆ, ಅವರ ಆಪ್ತ ಸ್ನೇಹಿತರಿಗೆ ವಿಚಾರಣೆಗೆ ಹಾಜರಾಗಲು ಸಿಸಿಬಿ ನೋಟಿಸ್​​​ ನೀಡಿತ್ತು. ಆದ್ರೆ ಸ್ನೇಹಿತರೀಗ ಮೊಬೈಲ್ ಸ್ವಿಚ್ ಆಫ್​​ ಮಾಡಿಕೊಂಡಿದ್ದಾರೆ‌.

ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ‌ಯಿಟ್ಟ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಮೇಯರ್ ಸಂಪತ್ ರಾಜ್ ಪರಾರಿಯಾಗಿರುವ ಹಿನ್ನೆಲೆ ತನಿಖೆ ಚುರುಕುಗೊಂಡಿದ್ದು, ಕೆಲ ಸ್ನೇಹಿತರು ಮೊಬೈಲ್ ಸ್ವಿಚ್ ಆಫ್​​ ಮಾಡಿಕೊಂಡಿದ್ದಾರೆ.

ಕೊರೊನಾ ಸೋಂಕು ತಗುಲಿದೆ ಎಂದು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಬಳಿಕ ಯಾರ ಕಣ್ಣಿಗೂ ಬೀಳದೆ ಪರಾರಿಯಾಗಿದ್ದಾರೆ. ಹೀಗಾಗಿ ಸಂಪತ್ ರಾಜ್ ಆಪ್ತ ಸ್ನೇಹಿತರಿಗೆ ವಿಚಾರಣೆಗೆ ಹಾಜರಾಗಲು ಸಿಸಿಬಿ ನೋಟಿಸ್​​​ ನೀಡಿತ್ತು.

ಈಗಾಗಲೇ ಸಿಸಿಬಿ ಅಧಿಕಾರಿಗಳು ಆಸ್ಪತ್ರೆ ಸಿಬ್ಬಂದಿಯ ವಿಚಾರಣೆ ನಡೆಸಿ ಹಲವಾರು ಮಾಹಿತಿ ಪಡೆದಿದ್ದರು. ಆದರೆ ತನಿಖೆ ದೃಷ್ಟಿಯಿಂದ ಸಂಪತ್​​ ರಾಜ್ ಅವರ ಬಹಳ ಆತ್ಮೀಯ ಸ್ನೇಹಿತರ ವಿಚಾರಣೆ ಅಗತ್ಯವಿದೆ ಎಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್​​ ನೀಡಿದ್ದರು. ಆದ್ರೆ ಸ್ನೇಹಿತರೀಗ ಮೊಬೈಲ್ ಸ್ವಿಚ್ ಆಫ್​​ ಮಾಡಿಕೊಂಡಿದ್ದಾರೆ‌ ಎನ್ನಲಾಗ್ತಿದೆ.

ಸದ್ಯ ಸಂಪತ್​​ ರಾಜ್​​ ಕುಟುಂಬಸ್ಥರ ವಿಚಾರಣೆ ಸಿಸಿಬಿ ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿ ನಡೆಯುವ ಸಾಧ್ಯತೆ ಇದೆ. ಬೆಂಗಳೂರು ಸೇರಿದಂತೆ ಹೊರ ರಾಜ್ಯಕ್ಕೂ ಸಿಸಿಬಿ ಪ್ರತ್ಯೇಕ ತಂಡ ಭೇಟಿ ನೀಡಿ ಶೋಧ ಕಾರ್ಯ ನಡೆಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.