ETV Bharat / state

ನಾನು ಭಾರತಕ್ಕೆ ಬಂದಾಕ್ಷಣ ನಿಮ್ಮ ದರ್ಶನ ಮಾಡಲು, ಸೆಲ್ಯೂಟ್​ ಮಾಡಲು ಇಚ್ಛಿಸಿದ್ದೆ: ಬಾವುಕರಾದ ಪ್ರಧಾನಿ ಮೋದಿ

author img

By ETV Bharat Karnataka Team

Published : Aug 26, 2023, 8:08 AM IST

Updated : Aug 26, 2023, 11:24 AM IST

ನಾನು ಭಾರತಕ್ಕೆ ಬಂದಾಕ್ಷಣ ನಿಮ್ಮ ದರ್ಶನ ಮಾಡಲು ಮತ್ತು ನಿಮಗೆ ಸೆಲ್ಯೂಟ್​ ಮಾಡಲು ಇಚ್ಛಿಸಿದ್ದೆ ಎಂದು ಪ್ರಧಾನಿ ಮೋದಿ ಬಾವುಕರಾದರು.

PM Modi congratulates scientists  ISRO team for the successful landing  Chandrayaan 3 on the Moon  Prime Minister Narendra Modi  ನಾನು ಭಾರತಕ್ಕೆ ಬಂದಾಕ್ಷಣ ನಿಮ್ಮ ದರ್ಶನ ಮಾಡಲು  ಸೆಲ್ಯೂಟ್​ ಮಾಡಲು ಇಚ್ಛಿಸಿದ್ದೆ  ನಿಮ್ಮ ದರ್ಶನ ಮಾಡಲು ಮತ್ತು ನಿಮಗೆ ಸೆಲ್ಯೂಟ್​ ಧಾನಿ ನರೇಂದ್ರ ಮೋದಿ  ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್  ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌  ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ ಇಸ್ರೋ
ನಾನು ಭಾರತಕ್ಕೆ ಬಂದಾಕ್ಷಣ ನಿಮ್ಮ ದರ್ಶನ ಮಾಡಲು

ಬೆಂಗಳೂರು: ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್​​ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ ಇಸ್ರೋ ತಂಡದ ವಿಜ್ಞಾನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರಿಗೆ ಕೈಕುಲಕಿ ಹ್ಯಾಟ್ಸ್​ಆಪ್​ ಹೇಳಿದರು.

  • #WATCH | Prime Minister Narendra Modi meets women scientists of the ISRO team involved in Chandrayaan-3 Mission at ISRO Telemetry Tracking & Command Network Mission Control Complex in Bengaluru pic.twitter.com/Ugwk2WRzsw

    — ANI (@ANI) August 26, 2023 " class="align-text-top noRightClick twitterSection" data=" ">

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ನಲ್ಲಿ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಮತ್ತು ಚಂದ್ರಯಾನ 3 ಮಿಷನ್‌ನಲ್ಲಿ ತೊಡಗಿರುವ ಇಸ್ರೋ ತಂಡದ ಇತರ ವಿಜ್ಞಾನಿಗಳನ್ನು ಭೇಟಿ ಮಾಡಿದರು. ಬಳಿಕ ಚಂದ್ರಯಾನವನ್ನು ಆಗಸ್ಟ್ 23 ರಂದು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ್ದಕ್ಕಾಗಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದರು. ಬಳಿಕ ಚಂದ್ರಯಾನದ ಬಗ್ಗೆ ತಿಳಿದುಕೊಂಡರು.

ಇದನ್ನು ಓದಿ: LIVE: ಚಂದ್ರಯಾನ 3 ಸಕ್ಸಸ್​.. ಇಸ್ರೋ ವಿಜ್ಞಾನಿಗಳ ಜೊತೆ ಪ್ರಧಾನಿ ಮೋದಿ ಕಾರ್ಯಕ್ರಮ

ಆಫ್ರಿಕಾದಲ್ಲಿದ್ದರೂ ನನ್ನ ಮನಸ್ಸು ಇಲ್ಲೇ ಇತ್ತು: ಚಂದ್ರಯಾನ 3 ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಿದ ಇಸ್ರೋ ತಂಡದ ವಿಜ್ಞಾನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿ ವಿಜ್ಞಾನಿಗಳನ್ನುದ್ದೇಶಿ ಮಾತನಾಡಿದರು. ’’ಇಂದು, ನಾನು ವಿಭಿನ್ನ ಮಟ್ಟದ ಸಂತೋಷವನ್ನು ಅನುಭವಿಸುತ್ತಿದ್ದೇನೆ. ಇಂತಹ ಸಂದರ್ಭಗಳು ಬಹಳ ಅಪರೂಪ. ಈ ಬಾರಿ ನಾನು ತುಂಬಾ ಚಂಚಲನಾಗಿದ್ದೆ. ನಾನು ದಕ್ಷಿಣ ಆಫ್ರಿಕಾದಲ್ಲಿದ್ದೆ. ಆದರೆ, ನನ್ನ ಮನಸ್ಸು ನಿಮ್ಮೊಂದಿಗಿತ್ತು. ಕೆಲವೊಮ್ಮೆ ನಾನು ನಿಮಗೆ ಅನ್ಯಾಯ ಮಾಡುತ್ತೇನೆ ಎಂದು ನನಗೆ ಅನಿಸುತ್ತದೆ ಅಂತ ಮೋದಿ ಹೇಳಿದರು.

ನಿಮ್ಮ ಭೇಟಿಗೆ ಕಾತರದಿಂದ ಇದ್ದೆ - ಕಣ್ಣಲ್ಲಿ ನೀರು ತುಂಬಿಕೊಂಡ ಮೋದಿ: ’’ನಾನು ಭಾರತಕ್ಕೆ ಬಂದ ಕೂಡಲೇ ನಿಮ್ಮನ್ನು ಆದಷ್ಟು ಬೇಗ ನೋಡಬೇಕೆನಿಸಿತು. ನಿಮ್ಮೆಲ್ಲರ ದರ್ಶನ ಮಾಡಲು ಬಯಸಿದೆ. ನಿಮಗೆ ಸೆಲ್ಯೂಟ್​ ಮಾಡಲು ನಿರ್ಧರಿಸಿದೆ. ನಿಮ್ಮ ಶ್ರಮಕ್ಕೆ ಸೆಲ್ಯೂಟ್​. ನಿಮ್ಮ ಚೈತನ್ಯಕ್ಕೆ ಸೆಲ್ಯೂಟ್​. ನಿಮ್ಮ ಉತ್ಸಾಹಕ್ಕೆ ಸೆಲ್ಯೂಟ್​. ನಮ್ಮ ದೇಶಕ್ಕೆ ಸೆಲ್ಯೂಟ್ ಎಂದು ಹೇಳಿತ್ತಾ ಪ್ರಧಾನಿ ಮೋದಿಯವರ ಕಣ್ಣಲ್ಲಿ ನೀರು ತುಂಬಿ ಕೊಂಡಿತು’.

ನೀವು ದೇಶವನ್ನು ಕೊಂಡೊಯ್ದಿರುವ ಎತ್ತರ ಸಾಮಾನ್ಯವಲ್ಲ. ಯಾರೂ ತಲುಪದ ಸ್ಥಳಕ್ಕೆ ನಾವು ತಲುಪಿದೆವು. ಯಾರೂ ಮಾಡದ ಕೆಲಸವನ್ನು ನಾವು ಮಾಡಿದ್ದೇವೆ. ಇದು ಇಂದಿನ ಭಾರತ. ನಿರ್ಭೀತ ಮತ್ತು ಹೋರಾಟದ ಭಾರತ. ಇದು ಹೊಸತಾಗಿ ಯೋಚಿಸುವ ಭಾರತ ಎಂದು ಘೋಷಿಸಿದರು.

ವಿಶ್ವದ ಸಮಸ್ಯೆಗಳ ಪರಿಹಾರಕ್ಕೆ ಇದು ಸಹಕಾರಿ: 21 ನೇ ಶತಮಾನದಲ್ಲಿ ವಿಶ್ವದ ದೊಡ್ಡ ಸಮಸ್ಯೆಗಳನ್ನು ಪರಿಹರಿಸುತ್ತದೆ. ಆಗಸ್ಟ್ 23 ರ ಆ ದಿನವನ್ನು ಮರೆಯಲು ಸಾಧ್ಯವಿಲ್ಲ. ಇಸ್ರೋ ಕೇಂದ್ರದಿಂದ ಇಡೀ ದೇಶಕ್ಕೆ ಜನರು ಹಾರಿದ ರೀತಿ, ಆ ದೃಶ್ಯವನ್ನು ಯಾರು ಮರೆಯುತ್ತಾರೆ ಹೇಳಿ.. ಕೆಲವು ನೆನಪುಗಳು ಅಮರವಾಗುತ್ತವೆ. ಆ ಕ್ಷಣ ಅಮರವಾಯಿತು. ಆ ಕ್ಷಣ ಈ ಶತಮಾನಕ್ಕೆ ಸ್ಪೂರ್ತಿದಾಯಕವಾಗಿದೆ ಎಂದರು.

ಇದನ್ನು ಓದಿ: 'ಜೈ ಜವಾನ್, ಜೈ ವಿಜ್ಞಾನ,' ಇಸ್ರೋ ವಿಜ್ಞಾನಿಗಳನ್ನು ಮನಸಾರೆ ಶ್ಲಾಘಿಸಿದ ಪ್ರಧಾನಿ ಮೋದಿ

ಒಂದೆಡೆ ವಿಕ್ರಮನ ಮೇಲಿನ ನಂಬಿಕೆ. ಇನ್ನೊಂದು ಕಡೆ ರೋವರ್ ಪ್ರಗ್ಯಾನ್ ಶಕ್ತಿ. ಮಾನವ ನಾಗರಿಕತೆಯಲ್ಲಿ ಮೊದಲ ಬಾರಿಗೆ, ಭೂಮಿಯ ಲಕ್ಷಾಂತರ ವರ್ಷಗಳ ಸ್ಥಳದಲ್ಲಿ ಮೊದಲ ಬಾರಿಗೆ.... ಮನುಷ್ಯನು ಆ ಸ್ಥಳದ ಚಿತ್ರವನ್ನು ತನ್ನ ಕಣ್ಣುಗಳಿಂದ ನೋಡುತ್ತಿದ್ದಾನೆ. ಈ ಚಿತ್ರವನ್ನು ಜಗತ್ತಿಗೆ ತೋರಿಸುವ ಕೆಲಸವನ್ನು ಭಾರತ ಮಾಡಿದೆ. ವಿಜ್ಞಾನಿಗಳು ಇದನ್ನು ಮಾಡಿದ್ದೀರಿ. ಇಂದು ಇಡೀ ಜಗತ್ತು ನಮ್ಮ ವಿಜ್ಞಾನಿಗಳು ಮತ್ತು ತಂತ್ರಜ್ಞಾನದಲ್ಲಿ ಕಬ್ಬಿಣವೆಂದು ಒಪ್ಪಿಕೊಂಡಿದ್ದಾರೆ ಅಂತಾ ಮೋದಿ ಹೇಳಿದರು.

ವಿಕ್ರಮ್ ಲ್ಯಾಂಡರ್​ ಇಳಿದ ಸ್ಥಳ ಶಿವಶಕ್ತಿ: ಚಂದ್ರನ ಮೇಲೆ ಲ್ಯಾಂಡರ್ ಇಳಿದ ಸ್ಥಳವನ್ನು 'ಶಿವಶಕ್ತಿ' ಎಂದು ಕರೆಯಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು. ಈ ಮೂಲಕ ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ನಲ್ಲಿ ವಿಜ್ಞಾನಿಗಳನ್ನು ಹುರಿದುಂಬಿಸಿದರು. ಎಲ್ಲೆಲ್ಲೂ ತಿರಂಗಾ, ಪ್ರತಿ ಭಾರತೀಯನಲ್ಲೂ ತಿರಂಗಾ ಈಗ ಚಂದ್ರನ ಮೇಲೂ ತಿರಂಗಾ ಎಂದು ಇಸ್ರೋವನ್ನು ಹಾಡಿ ಹೊಗಳಿದರು. ’’ಮೇರಿ ಆಖೋಂ ಕೆ ಸಾಮ್ನೆ 23 ಆಗಸ್ಟ್ ಕಾ ವೋ ದಿನ್ ವೋ ಏಕ್ ಏಕ್ ಸೆಕೆಂಡ್ ಬಾರ್ ಬಾರ್ ಘೂಮ್ ರಹಾ ಹೈ’’ ಎಂದರು.

ನಾಲ್ಕು ವರ್ಷಗಳ ಹಿಂದೆ ಚಂದ್ರಯಾನ-2 ಚಂದ್ರನನ್ನು ತಲುಪಿತ್ತು. ಅಲ್ಲಿ ಚಂದ್ರಯಾನ 2ರ ಹೆಜ್ಜೆ ಗುರುತುಗಳು ಮೂಡಿದ್ದಾವೆ. ನಂತರ ಅವರ ಹೆಸರನ್ನು ಇಡಬೇಕೆಂದು ನಿರ್ಧರಿಸಲಾಯಿತು. ಆದರೆ ಆ ಸಂದರ್ಭಗಳಲ್ಲಿ ಸಾಧ್ಯವಾಗಲಿಲ್ಲ. ಈಗ ಚಂದ್ರಯಾನ-3 ಯಶಸ್ವಿಯಾಗಿ ತಲುಪಿದೆ. ಈಗ ನಾವು ಎರಡೂ ಚಂದ್ರಯಾನ ಕಾರ್ಯಾಚರಣೆಗಳಿಗೆ ಹೆಸರಿಡಲು ನಾವು ನಿರ್ಧರಿಸಿದ್ದೇವೆ. ಇಂದು ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜವಿದೆ. ಅದಕ್ಕಾಗಿಯೇ ಚಂದ್ರಯಾನ-2 ಹೆಜ್ಜೆಗುರುತುಗಳ ಬಿಟ್ಟ ಸ್ಥಳವನ್ನು ಈಗ ತಿರಂಗಾ ಪಾಯಿಂಟ್ ಎಂದು ಕರೆಯಲಾಗುವುದು. ಚಂದ್ರಯಾನ-3 ರ ಮೂನ್ ಲ್ಯಾಂಡರ್ ತಲುಪಿದ ಸ್ಥಳವನ್ನು ಇಂದಿನಿಂದ ಶಿವಶಕ್ತಿ ಎಂದು ಕರೆಯಲಾಗುವುದು ಅಂತಾ ಮೋದಿ ಹೇಳಿದರು.

ಇದನ್ನು ಓದಿ:ಚಂದ್ರಯಾನ-3 ಯಶಸ್ವಿ: ಬೆಂಗಳೂರಿಗೆ ಬಂದಿಳಿದ ಪ್ರಧಾನಿ, ಹೆಚ್​ಎಎಲ್​​​ನಲ್ಲಿ ಅದ್ಧೂರಿ ಸ್ವಾಗತ

ದೃಢವಾದ ಇಚ್ಛಾಶಕ್ತಿ ಇದ್ದರೆ ಯಶಸ್ಸು ಸಿಗುತ್ತದೆ. ಇಂದು ಭಾರತವು ಚಂದ್ರನ ಮೇಲ್ಮೈಯನ್ನು ಮುಟ್ಟಿದ ವಿಶ್ವದ ನಾಲ್ಕನೇ ದೇಶವಾಗಿದೆ. ಭಾರತ ತನ್ನ ಪಯಣವನ್ನು ಎಲ್ಲಿಂದ ಆರಂಭಿಸಿತು ಎಂಬುದನ್ನು ನೋಡಿದಾಗ ಈ ಯಶಸ್ಸು ಇನ್ನಷ್ಟು ದೊಡ್ಡದಾಗುತ್ತದೆ. ಒಂದು ಕಾಲದಲ್ಲಿ ಭಾರತಕ್ಕೆ ಅಗತ್ಯ ತಂತ್ರಜ್ಞಾನ ಇರಲಿಲ್ಲ. ಇಂದು ಭಾರತ ಜಗತ್ತಿನ ಐದನೇ ಅತಿ ದೊಡ್ಡ ಆರ್ಥಿಕತೆ ಎನಿಸಿಕೊಂಡಿದೆ. ಈ ಪಯಣದಲ್ಲಿ ಇಸ್ರೋದಂತಹ ಸಂಸ್ಥೆಗಳು ದೊಡ್ಡ ಪಾತ್ರವನ್ನು ವಹಿಸಿವೆ. ನೀವು ಇಂದು ಚಂದ್ರನ ಮೇಲೆ ಮೇಕ್ ಇನ್ ಇಂಡಿಯಾವನ್ನು ತೆಗೆದುಕೊಂಡು ಹೋಗಿದ್ದೀರಿ ಎಂದು ಮೋದಿ ಹೇಳಿದರು.

ಈ ಪ್ರಯಾಣ ಸುಲಭವಾಗಿರಲಿಲ್ಲ. ಸಾಫ್ಟ್​ ಲ್ಯಾಂಡಿಂಗ್ ಅನ್ನು ಖಚಿತಪಡಿಸಿಕೊಳ್ಳಲು, ವಿಜ್ಞಾನಿಗಳು ಕೃತಕವಾದವುಗಳನ್ನು ಸಹ ಮಾಡಿದರು. ವಿಕ್ರಮ್ ಲ್ಯಾಂಡರ್ ಅನ್ನು ಲ್ಯಾಂಡಿಂಗ್ ಮಾಡುವ ಮೂಲಕ ಪರೀಕ್ಷಿಸಲಾಯಿತು. ಮೂನ್ ಲ್ಯಾಂಡರ್ ತುಂಬಾ ಪರೀಕ್ಷೆಗಳನ್ನು ನೀಡಿ ಅಲ್ಲಿಗೆ ತಲುಪಿದೆ. ಆದ್ದರಿಂದ ಈ ಯಶಸ್ಸು ಖಚಿತವಾಗಿತ್ತು. ಇಂದು, ಭಾರತದ ಯುವ ಪೀಳಿಗೆಯು ವಿಜ್ಞಾನ, ಬಾಹ್ಯಾಕಾಶ ಮತ್ತು ನಾವೀನ್ಯತೆಗಳ ಬಗ್ಗೆ ಶಕ್ತಿಯಿಂದ ತುಂಬಿರುವುದನ್ನು ನಾನು ನೋಡಿದಾಗ ಅದರ ಹಿಂದೆ ಅಂತಹ ಯಶಸ್ಸುಗಳಿವೆ. ಮಂಗಳಯಾನ ಮತ್ತು ಚಂದ್ರಯಾನದ ಯಶಸ್ಸು ಮತ್ತು ಗಗನ್‌ಯಾನ್‌ನ ಸಿದ್ಧತೆಯು ದೇಶಕ್ಕೆ ಹೊಸ ಚಿತ್ತವನ್ನು ನೀಡಿದೆ ಎಂದರು.

ಇಂದು ಚಂದ್ರಯಾನದ ಹೆಸರು ಭಾರತದ ಚಿಕ್ಕ ಮಕ್ಕಳ ಬಾಯಿ ಮೇಲಿದೆ. ನಿಮ್ಮ ಯಶಸ್ಸಿನ ಆಳವಾದ ಪ್ರಭಾವವನ್ನು ನೀವು ಬಿಟ್ಟಿದ್ದೀರಿ. ಇಂದಿನಿಂದ, ರಾತ್ರಿಯಲ್ಲಿ ಚಂದ್ರನನ್ನು ನೋಡುವ ಯಾವುದೇ ಮಗು ನನ್ನ ದೇಶವು ಚಂದ್ರನನ್ನು ತಲುಪಿದೆ ಎಂಬ ಧೈರ್ಯ ಮತ್ತು ಉತ್ಸಾಹ ಇರುತ್ತದೆ.

ನೀವು ಮಕ್ಕಳಲ್ಲಿ ಆಕಾಂಕ್ಷೆಗಳ ಬೀಜಗಳನ್ನು ಬಿತ್ತಿದ್ದೀರಿ. ಅವರು ಆಲದ ಮರವಾಗುತ್ತಾರೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯವಾಗುತ್ತಾರೆ. ಯುವ ಪೀಳಿಗೆಗೆ ನಿರಂತರ ಸ್ಪೂರ್ತಿ ಸಿಗುವಂತೆ ನಿರ್ಧಾರ ಕೈಗೊಳ್ಳಲಾಗಿದೆ. ಆಗಸ್ಟ್ 23 ರಂದು ಭಾರತವು ಚಂದ್ರನ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದೆ. ಭಾರತವು ಆ ದಿನವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸುತ್ತದೆ. ಈ ದಿನ ನಮಗೆ ಸದಾ ಸ್ಫೂರ್ತಿ ನೀಡುತ್ತದೆ ಎಂದರು.

ಭಾರತದ ವಿಜ್ಞಾನವು ಜ್ಞಾನದ ನಿಧಿ, ಅದನ್ನು ಗುಲಾಮಗಿರಿಯ ಅವಧಿಯಲ್ಲಿ ಮರೆಮಾಡಲಾಗಿದೆ. ಸ್ವಾತಂತ್ರ್ಯದ ಸುವರ್ಣ ಯುಗದಲ್ಲಿ ಆ ನಿಧಿಯ ಬಗ್ಗೆ ಸಂಶೋಧನೆ ಮಾಡಿ ಹೊರತೆಗೆಯಬೇಕು. ನಮ್ಮ ಯುವ ಪೀಳಿಗೆಗೆ ಇಂದಿನ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೊಸ ಆಯಾಮಗಳನ್ನು ನೀಡಬೇಕು. ಸಮುದ್ರದ ಆಳದಿಂದ ಆಕಾಶದ ಎತ್ತರದವರೆಗೆ ಕೆಲಸ ಮಾಡಲು ಬಹಳಷ್ಟು ಇದೆ. ಭಾರತದಲ್ಲಿ ನಿಮಗಾಗಿ ಹೊಸ ಸಾಧ್ಯತೆಗಳ ಬಾಗಿಲುಗಳು ನಿರಂತರವಾಗಿ ತೆರೆದುಕೊಳ್ಳುತ್ತಿವೆ. 21 ನೇ ಶತಮಾನದ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ಯಾವ ದೇಶವು ಅಗ್ರಸ್ಥಾನವನ್ನು ಪಡೆಯುತ್ತದೆ, ಆ ದೇಶವು ಮುಂದುವರಿಯುತ್ತದೆ. ಸರ್ಕಾರವು ಬಾಹ್ಯಾಕಾಶ ಕ್ಷೇತ್ರವನ್ನು ನಿರಂತರವಾಗಿ ಸುಧಾರಿಸುತ್ತಿದೆ. ಕಳೆದ 4 ವರ್ಷಗಳಲ್ಲಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸ್ಟಾರ್ಟಪ್‌ಗಳ ಸಂಖ್ಯೆ 4 ರಿಂದ 150 ಕ್ಕೆ ಏರಿದೆ. ನಮ್ಮ ಚಂದ್ರಯಾನಕ್ಕೆ ಸಂಬಂಧಿಸಿದಂತೆ ರಸಪ್ರಶ್ನೆ ಸ್ಪರ್ಧೆಯು ಸೆಪ್ಟೆಂಬರ್ 1 ರಿಂದ ಪ್ರಾರಂಭವಾಗಲಿದೆ. ಇದಕ್ಕೆ ಯುವಜನತೆ ಕೈಜೋಡಿಸುವಂತೆ ಮನವಿ ಮಾಡುತ್ತೇನೆ ಎಂದರು.

ನಿಮ್ಮ ಆಶೀರ್ವಾದದಿಂದ ಭಾರತ ವಿಶ್ವನಾಯಕನಾಗಲಿದೆ; ದೇಶದ ಜನತೆ ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಮತ್ತು ನಂಬಿಕೆಯನ್ನು ಗಳಿಸುವುದು ಸುಲಭವಲ್ಲ. ನಿಮ್ಮ ತಪಸ್ಸಿನಿಂದ ನೀವು ನಂಬಿಕೆಯನ್ನು ಗಳಿಸಿದ್ದೀರಿ. ದೇಶದ ಜನತೆಯ ಆಶೀರ್ವಾದ ನಿಮ್ಮ ಮೇಲಿದೆ. ಈ ಆಶೀರ್ವಾದ ಮತ್ತು ಸಮರ್ಪಣೆಯೊಂದಿಗೆ, ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಜಾಗತಿಕ ನಾಯಕನಾಗಲಿದೆ. ನಾವೀನ್ಯತೆಯ ಈ ವೇಗವು 2047ರ ಜಾಗತಿಕ ಭಾರತದ ಕನಸನ್ನು ನನಸಾಗಿಸುತ್ತದೆ. ನಿಮ್ಮ ಶ್ರಮವು ಆ ನಿರ್ಣಯವನ್ನು ಪರಿಪೂರ್ಣತೆಗೆ ಕೊಂಡೊಯ್ಯುತ್ತಿದೆ. ಕೋಟ್ಯಂತರ ದೇಶವಾಸಿಗಳು ಮತ್ತು ವಿಶ್ವದ ವಿಜ್ಞಾನ ಸಮುದಾಯದ ಪರವಾಗಿ ನನ್ನ ಕಡೆಯಿಂದ ಶುಭಾಶಯಗಳು. ಭಾರತ್ ಮಾತಾ ಕೀ ಜೈ ಎಂದು ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಮಾತುಗಳನ್ನು ಮುಗಿಸಿದರು.

ಇದಕ್ಕೂ ಮುನ್ನಾ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಕಮಾಂಡ್ ಸೆಂಟರ್ ತಲುಪಿದಾಕ್ಷಣ ವಿಜ್ಞಾನಿಗಳನ್ನು ಭೇಟಿ ಮಾಡಿದರು. ಪ್ರಧಾನಿ ಮೋದಿ ಅವರು ಇಸ್ರೋ ಮುಖ್ಯಸ್ಥರನ್ನು ತಬ್ಬಿ ಬೆನ್ನು ತಟ್ಟಿದರು. ಬಳಿಕ ಇಸ್ರೋ ಮುಖ್ಯಸ್ಥರು ಚಂದ್ರಯಾನ-3 ರ ಪ್ರಕ್ರಿಯೆಯ ಬಗ್ಗೆ ಪ್ರಧಾನಿಗೆ ತಿಳಿಸಿದರು.

ಚಂದ್ರಯಾನ-3 ರ ಇಂಚಿಂಚು ಮಾಹಿತಿ ನೀಡಿದ ಸೋಮನಾಥ: ಚಂದ್ರಯಾನ-3 ಚಂದ್ರನ ಮೇಲೆ ಹೇಗೆ ಇಳಿಯಿತು, ಅದರ ನಂತರ ರೋವರ್ ಪ್ರಗ್ಯಾನ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಇಸ್ರೋ ಮುಖ್ಯಸ್ಥರು ಪ್ರಧಾನಿ ಮೋದಿಗೆ ತಿಳಿಸಿದರು. ಪ್ರಧಾನಿಯವರು ಎಲ್ಲವನ್ನೂ ಸೂಕ್ಷ್ಮವಾಗಿ ಆಲಿಸಿದರು.

ಬೆಂಗಳೂರಿನ ಇಸ್ರೋ ಕಮಾಂಡ್ ಸೆಂಟರ್‌ನ ಸಭಾಂಗಣದಲ್ಲಿ ಪ್ರಧಾನಮಂತ್ರಿ ಅವರನ್ನು ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಇಸ್ರೋ ಮುಖ್ಯಸ್ಥರು ಚಂದ್ರಯಾನ-3 ರ ಸಾಫ್ಟ್ ಲ್ಯಾಂಡಿಂಗ್ ಐತಿಹಾಸಿಕ ಎಂದು ಬಣ್ಣಿಸಿದರು. ಇಸ್ರೋದ ನಿಯಂತ್ರಣ ಕೇಂದ್ರಕ್ಕೆ ಪ್ರಧಾನಿಗೆ ಸ್ವಾಗತವಿದೆ ಎಂದು ಹೇಳಿದರು. ಇಸ್ರೋ ಮುಖ್ಯಸ್ಥರು ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಪ್ರಧಾನಿ ಮೋದಿಗೆ ಮಾದರಿ ಮೂಲಕ ವಿವರಿಸಿದರು. ಬಳಿಕ ಇಸ್ರೋ ಮುಖ್ಯಸ್ಥರು ಚಂದ್ರನ ಮೊದಲ ಚಿತ್ರಗಳನ್ನು ಪ್ರಧಾನಿಗೆ ನೀಡಿ ಅಭಿನಂದಿಸಿದರು.

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿರುವ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ಗೆ ತೆರಳುತ್ತಲೇ ಜನರತ್ತ ಕೈ ಬೀಸಿದರು. ಪ್ರಧಾನಿ ನೋಡಲು ಜನರು ಬೆಳಗ್ಗೆಯಿಂದಲೇ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದರು. ಪ್ರಧಾನಿಗೆ ಶುಭಕೋರಿದರು.

Last Updated : Aug 26, 2023, 11:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.