ETV Bharat / state

ಬೆಂಗಳೂರಿನಲ್ಲಿ ಮನೆಗಳಿಗೆ ಮಳೆ ನೀರು; ಹೋಟೆಲ್-ಲಾಡ್ಜ್​ಗಳತ್ತ ಜನರ ಹಜ್ಜೆ, ಬೆಲೆ ಗಗನಕ್ಕೆ!

author img

By

Published : Sep 8, 2022, 8:33 AM IST

Hotels are Costly in Bengaluru  Hotels are Costly in Bengaluru over rain effect  Heavy rain in Bengaluru  ಬೆಂಗಳೂರಿಗೆ ಮತ್ತೊಂದು ಶಾಕ್​ ಹೋಟೆಲ್ ಲಾಡ್ಜ್​ಗಳು ಹೌಸ್​ಫುಲ್  ಮಳೆಯಿಂದ ತತ್ತರಿಸಿದ ಬೆಂಗಳೂರಿನ ಜನ  ಐಟಿಬಿಟಿ ಜನ ಮಳೆಗೆ ತತ್ತರ  ಹೋಟೆಲ್​ಗಳಿಗೆ ಮೊರೆ ಹೋಗುತ್ತಿರುವ ಜನ  ಬೆಂಗಳೂರಿನಲ್ಲಿ ಭಾರಿ ಮಳೆಗೆ ಜನ ತತ್ತರ
ಬೆಂಗಳೂರಿಗೆ ಮತ್ತೊಂದು ಶಾಕ್

ಮಳೆಯಿಂದ ತತ್ತರಿಸಿರುವ ಬೆಂಗಳೂರಿನ ಕೆಲವು ಭಾಗದ ನಿವಾಸಿಗಳು ಹೋಟೆಲ್ ಮತ್ತು ಲಾಡ್ಜ್​ಗಳಿಗೆ ತಾತ್ಕಾಲಿಕವಾಗಿ ಸೇರಿಕೊಂಡಿದ್ದಾರೆ. ಹೀಗಾಗಿ, ಕೆಲವೆಡೆ ಹೋಟೆಲ್-ಲಾಡ್ಜ್​ಗಳು ಹೌಸ್​ಫುಲ್​ ಆಗಿವೆಯಂತೆ. ದುಪ್ಪಟ್ಟು ಹಣ ವಸೂಲಿಯೂ ನಡೆಯುತ್ತಿದೆ.

ಬೆಂಗಳೂರು: ಎಡೆಬಿಡದೆ ಸುರಿದ ಧಾರಾಕಾರ ಮಳೆಯಿಂದಾಗಿ ಬೆಂಗಳೂರಿನ ಹಲವು ಭಾಗಗಳು ಹೊಳೆಯಂತಾಗಿವೆ. ಅದರಲ್ಲೂ ಐಟಿ-ಬಿಟಿ ಪರಿಸರವಾದ ಮಹದೇವಪುರದಲ್ಲಿ ಅಪಾರ್ಟ್ಮೆಂಟ್​ಗಳು, ವಿಲ್ಲಾಗಳು, ಐಷಾರಾಮಿ ಬಡಾವಣೆಗಳಲ್ಲಿ ಮಳೆ‌ನೀರು ತುಂಬಿ ತುಳುಕುತ್ತಿದೆ. ಇಲ್ಲಿನ ಹಲವು ನಿವಾಸಿಗಳು ಜೀವ ಉಳಿಸಿಕೊಳ್ಳಲು ಮನೆಗಳನ್ನು ತೊರೆದು ಹೋಟೆಲ್​ಗಳ ಮೊರೆ ಹೋಗುತ್ತಿದ್ದಾರೆ. ಇದರ ದುರ್ಲಾಭ ಪಡೆದುಕೊಳ್ಳುತ್ತಿರುವ ಹೋಟೆಲ್​ ಮತ್ತು ಲಾಡ್ಜ್​ಗಳು ಜನರಿಂದ ದುಪ್ಪಟ್ಟು ಹಣ ಪೀಕುತ್ತಿವೆ ಎಂಬ ಮಾತುಗಳು ಕೇಳಿಬಂದಿವೆ.

Hotels are Costly in Bengaluru  Hotels are Costly in Bengaluru over rain effect  Heavy rain in Bengaluru  ಬೆಂಗಳೂರಿಗೆ ಮತ್ತೊಂದು ಶಾಕ್​ ಹೋಟೆಲ್ ಲಾಡ್ಜ್​ಗಳು ಹೌಸ್​ಫುಲ್  ಮಳೆಯಿಂದ ತತ್ತರಿಸಿದ ಬೆಂಗಳೂರಿನ ಜನ  ಐಟಿಬಿಟಿ ಜನ ಮಳೆಗೆ ತತ್ತರ  ಹೋಟೆಲ್​ಗಳಿಗೆ ಮೊರೆ ಹೋಗುತ್ತಿರುವ ಜನ  ಬೆಂಗಳೂರಿನಲ್ಲಿ ಭಾರಿ ಮಳೆಗೆ ಜನ ತತ್ತರ
ಅಪಾರ್ಟ್‌ಮೆಂಟ್‌ ಆವರಣದಲ್ಲಿ ತುಂಬಿಕೊಂಡಿರುವ ಮಳೆ ನೀರು

ಸರ್ಜಾಪುರ, ಯಮಲೂರು ಬೆಳ್ಳಂದೂರು ಭಾಗಗಳಲ್ಲಿ ಹೆಚ್ಚಾಗಿ ಶ್ರೀಮಂತ ‌ಕುಟುಂಬಗಳು ವಾಸವಾಗಿವೆ. ಇಲ್ಲಿನ ಮನೆಗಳಿಗೆ ಮಳೆ ನೀರು ನುಗ್ಗಿದ್ದು ಈ ಭಾಗದ ಜನರು ಹೋಟೆಲ್​ಗಳ ಮೊರೆ ಹೋಗಿದ್ದಾರೆ. ಆದರೆ ಸಂಕಷ್ಟದ ಸಮಯದಲ್ಲೂ ಹೋಟೆಲ್​ ಮಾಲೀಕರು ಸ್ಪಂದಿಸದೆ ದುಡ್ಡು ಪೀಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅನೇಕ ಹೋಟೆಲ್‌ಗಳು ಸಾಕು ಪ್ರಾಣಿಗಳೊಂದಿಗೆ ಅತಿಥಿಗಳನ್ನು ಒಳಸೇರಿಸಲು ನಿರಾಕರಿಸುತ್ತಿದ್ದಾರಂತೆ. ಇದು ರೂಂಗಳಿಗೆ ಬೇಡಿಕೆ ಮತ್ತು ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

Hotels are Costly in Bengaluru  Hotels are Costly in Bengaluru over rain effect  Heavy rain in Bengaluru  ಬೆಂಗಳೂರಿಗೆ ಮತ್ತೊಂದು ಶಾಕ್​ ಹೋಟೆಲ್ ಲಾಡ್ಜ್​ಗಳು ಹೌಸ್​ಫುಲ್  ಮಳೆಯಿಂದ ತತ್ತರಿಸಿದ ಬೆಂಗಳೂರಿನ ಜನ  ಐಟಿಬಿಟಿ ಜನ ಮಳೆಗೆ ತತ್ತರ  ಹೋಟೆಲ್​ಗಳಿಗೆ ಮೊರೆ ಹೋಗುತ್ತಿರುವ ಜನ  ಬೆಂಗಳೂರಿನಲ್ಲಿ ಭಾರಿ ಮಳೆಗೆ ಜನ ತತ್ತರ
ಮಳೆಗೆ ಬೆಂಗಳೂರು ತತ್ತರ

ಮುಂದಿನ 10-15 ದಿನಗಳವರೆಗೆ ರೂಂ ಬುಕ್ಕಿಂಗ್‌: ಮಹದೇವಪುರ ವ್ಯಾಪ್ತಿಯ ವೈಟ್‌ಫೀಲ್ಡ್, ಔಟರ್ ರಿಂಗ್ ರೋಡ್, ಓಲ್ಡ್ ಏರ್‌ಪೋರ್ಟ್ ರಸ್ತೆ, ಕುಂದಲಹಳ್ಳಿ, ಮಾರತಹಳ್ಳಿಯ ಕೆಲವು ಹೋಟೆಲ್​ನ ಕೊಠಡಿಗಳು ಈಗಾಗಲೇ ಫುಲ್ ಆಗಿದೆ. ದುಪ್ಪಟ್ಟು ಹಣ ನೀಡಲು ಸಿದ್ದರಿದ್ದರೂ ರೂಂಗಳು ದೊರೆಯುತ್ತಿಲ್ಲ ಎಂದು ತಿಳಿದುಬಂದಿದೆ.

ಮಳೆ ನೀರು ಕಡಿಮೆ ಆದನಂತರ ಹಾನಿಯಾಗಿರುವ ಐಷಾರಾಮಿ ಸಂಕೀರ್ಣಗಳನ್ನು ಸರಿಪಡಿಸಲು ಇನ್ನೂ 10-15 ದಿನಗಳು ಬೇಕಾಗಲಿದ್ದು, ನಿವಾಸಿಗಳು ಹೋಟೆಲ್​ನಲ್ಲೇ ಉಳಿದುಕೊಳ್ಳುತ್ತಾರೆ ಎಂಬ ಮಾಹಿತಿ ದೊರೆತಿದೆ. ಹೀಗಾಗಿ, ಸಾಕಷ್ಟು ಮುಂದಾಲೋಚನೆಯಿಂದ ಜನರು ಕೆಲವು ಹೋಟೆಲ್‌ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಿದ್ದಾರೆ.

Hotels are Costly in Bengaluru  Hotels are Costly in Bengaluru over rain effect  Heavy rain in Bengaluru  ಬೆಂಗಳೂರಿಗೆ ಮತ್ತೊಂದು ಶಾಕ್​ ಹೋಟೆಲ್ ಲಾಡ್ಜ್​ಗಳು ಹೌಸ್​ಫುಲ್  ಮಳೆಯಿಂದ ತತ್ತರಿಸಿದ ಬೆಂಗಳೂರಿನ ಜನ  ಐಟಿಬಿಟಿ ಜನ ಮಳೆಗೆ ತತ್ತರ  ಹೋಟೆಲ್​ಗಳಿಗೆ ಮೊರೆ ಹೋಗುತ್ತಿರುವ ಜನ  ಬೆಂಗಳೂರಿನಲ್ಲಿ ಭಾರಿ ಮಳೆಗೆ ಜನ ತತ್ತರ
ಹೋಟೆಲ್-ಲಾಡ್ಜ್​ಗಳಿಗೆ ಬೇಡಿಕೆ

ಯಮಲೂರಿನಲ್ಲಿ ಮಳೆ ಅವಾಂತರದಿಂದ ಐಷಾರಾಮಿ ಮನೆಗಳಿಗೆ ಪ್ರವಾಹದ ನೀರು ನುಗ್ಗಿದೆ. ಕೆಲ ನಿವಾಸಿಗಳು ಹಳೆ ವಿಮಾನ ನಿಲ್ದಾಣ ರಸ್ತೆಯ ಹೋಟೆಲ್‌ನಲ್ಲಿ ತಂಗಿದ್ದಾರೆ. ಹೋಟೆಲ್​ವೊಂದು ನಮಗೆ ಒಂದು ರಾತ್ರಿ ಕಳೆಯಲು 42 ಸಾವಿರ ರೂಪಾಯಿ ಬಿಲ್​ ಮಾಡಿದೆ ಎಂದು ಪರ್ಪಲ್‍ಫ್ರಂಟ್ ಟೆಕ್ನಾಲಜೀಸ್ ಸಿಇಓ ಮತ್ತು ಸಂಸ್ಥಾಪಕಿ ಮೀನಾ ಗಿರೀಶಬಲ್ಲಾ ತಿಳಿಸಿದ್ದಾರೆ.

ಇದನ್ನೂ ಓದಿ: ಜಲಾವೃತವಾದ ಲೇಔಟ್​ಗಳು.. ಮನೆ ಖಾಲಿ ಮಾಡಿ ಹೋಟೆಲ್,​ ಲಾಡ್ಜ್​ ಸೇರಿದ ಬೆಂಗಳೂರಿಗರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.