ETV Bharat / state

ಸಿಡಿ ಪ್ರಕರಣ:ಮಾಜಿ ಶಾಸಕ ನಾಗರಾಜ್, ವಕೀಲರ ಜೊತೆ ವಿಚಾರಣೆಗೆ ಆಗಮಿಸಿದ ಜಾರಕಿಹೊಳಿ​​

author img

By

Published : Mar 29, 2021, 10:16 AM IST

Updated : Mar 29, 2021, 11:12 AM IST

ವಿಚಾರಣೆಗೆ ಆಗಮಿಸಿದ ರಮೇಶ್​ ಜಾರಕಿಹೊಳಿ
Former minister Ramesh Jarakiholi arrived at hearing

10:08 March 29

ಸಿಡಿ ಪ್ರಕರಣ ಸಂಬಂಧ ವಿಚಾರಣೆ ರಮೇಶ್​ ಜಾರಕಿಹೊಳಿ ಹಾಜರು

ವಿಚಾರಣೆ ಆಗಮಿಸಿದ ರಮೇಶ್​ ಜಾರಕಿಹೊಳಿ

ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸಿಡಿ ಪ್ರಕರಣ ಸಂಬಂಧ ಎಸ್​ಐಟಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರಿಗೆ ವಿಚಾರಣೆ ಹಾಜರಾಗುವಂತೆ ನೋಟಿಸ್​ ನೀಡಿತ್ತು. ಈ ಸಂಬಂಧ ಇಂದು ರಮೇಶ್​​ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ‌‌.

ಮಾಜಿ ಶಾಸಕ ನಾಗರಾಜ್ ಜೊತೆ ಕಾರಿನಲ್ಲಿ ರಮೇಶ್​ ಜಾರಕಿಹೊಳಿ ಆಡುಗೋಡಿಯಲ್ಲಿರುವ ಟೆಕ್ನಿಕಲ್​​ ಸೆಂಟರ್​​​ಗೆ ಆಗಮಿಸಿ ತನಿಖಾಧಿಕಾರಿಗಳ‌ ಮುಂದೆ ವಿಚಾರಣೆ ಎದುರಿಸಿದ್ದಾರೆ‌‌.

ನನ್ನ ವಿರುದ್ಧ ಗ್ಯಾಂಗ್ ನಕಲಿ ಸಿಡಿ ಸೃಷ್ಟಿಸಿ ಷಡ್ಯಂತ್ರ ರೂಪಿಸಿದೆ. ಈ ಮೂಲಕ ನನ್ನ ರಾಜಕೀಯ ಜೀವನ ಹಾಳು ಮಾಡಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿ ಸದಾಶಿವನಗರ ಪೊಲೀಸ್ ಠಾಣೆಗೆ ರಮೇಶ್​ ಜಾರಕಿಹೊಳಿ ದೂರು ನೀಡಿದ್ದರು‌.  

ಓದಿ: ಸಿಡಿ ಪ್ರಕರಣ ಕುರಿತು ನನಗೆ ಏನೂ ಕೇಳಬೇಡಿ : ಡಿ.ಕೆ. ಶಿವಕುಮಾರ್

ಇನ್ನೊಂದೆಡೆ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆಪಾದಿಸಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಯುವತಿ ವಕೀಲರ ಮೂಲಕ ದೂರು ನೀಡಿದ್ದಳು. ದೂರು-ಪ್ರತಿದೂರು ನೀಡಿದ್ದ ಸಂಬಂಧ ಹೆಚ್ಚಿನ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರ ಅನ್ವಯ ಜಾರಕಿಹೊಳಿ ವಿಚಾರಣೆಗೆ  ಹಾಜರಾಗಿದ್ದಾರೆ.

Last Updated : Mar 29, 2021, 11:12 AM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.