ETV Bharat / state

ಮಾನಸಗಂಗೋತ್ರಿ ಕುಲಪತಿಗಳ ಆದೇಶ ಅವೈಜ್ಞಾನಿಕ: ಡಿಕೆ ಶಿವಕುಮಾರ್​​

author img

By

Published : Aug 28, 2021, 5:00 PM IST

ಡಿಕೆ ಶಿವಕುಮಾರ್​​
DK Shivakumar

ಮಾನಸ ಗಂಗೋತ್ರಿಯ ಆವರಣದಲ್ಲಿ ಸಂಜೆ 6.30ರ ನಂತರ ಹೆಣ್ಣುಮಕ್ಕಳು ಒಂಟಿಯಾಗಿ ತಿರುಗಾಡುವುದು, ಕೂರುವುದನ್ನು ನಿಷೇಧಿಸಲಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರು ಸುತ್ತೋಲೆ ಹೊರಡಿಸಿದ್ದಾರೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು: ಮೈಸೂರು ಅತ್ಯಾಚಾರ ಪ್ರಕರಣದ ಬಗ್ಗೆ ಕಾಂಗ್ರೆಸ್ ಸಮಿತಿ ವರದಿ ಸಲ್ಲಿಕೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ರೇವಣ್ಣ ,ಉಗ್ರಪ್ಪ ನನ್ನನ್ನ ಭೇಟಿ ಮಾಡಿದ್ದಾರೆ. ಅಲ್ಲಿ ನಡೆದಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ವರದಿ ಬಂದ ಮೇಲೆ ನಮ್ಮ ನಾಯಕರು ಮಾತನಾಡುತ್ತಾರೆ. ಎಲ್ಲಿ ಲೋಪ ಆಗಿದೆ ಎಂದು ವಿವರಿಸಲಿದ್ದಾರೆ. ಅದಕ್ಕಿಂತ ಮುಖ್ಯವಾಗಿ ಉಪಕುಲಪತಿ ಆದೇಶ ಹೊರಡಿಸಿದ್ದು, ಕ್ಯಾಂಪಸ್ ಒಳಗಡೆ ಸಂಜೆ ಆರು ಗಂಟೆ ಬಳಿಕ ಯಾರು ಓಡಾಡದಂತೆ ಹೇಳಿದ್ದಾರೆ. ಇದೊಂದು ಅವೈಜ್ಞಾನಿಕ ನಿಯಮ. ಈ ವಿಚಾರವಾಗಿ ‌ನಾನು ಗರ್ವನರ್ ಜೊತೆಗೆ ಮಾತನಾಡುತ್ತೇನೆ ಎಂದರು.

ಹೆಣ್ಣು ಮಕ್ಕಳು ರಾತ್ರಿ ವೇಳೆ ಓಡಾಡಬಾರದು ಎಂದರೆ ಹೆಗೆ?, ಗೃಹ ಸಚಿವರು ತಪ್ಪಾ, ಪೊಲೀಸ್​ ಕಮಿಷನರ್​ ತಪ್ಪಾ, ಜನರಿಗೆ ರಕ್ಷಣೆ ಕೊಡಬೇಕಾಗಿರುವುದು ಪೊಲೀಸರ ಜವಾಬ್ದಾರಿಯಾಗಿದೆ. ಮೈಸೂರು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಅನೇಕ ಕಡೆಗಳಿಂದ ಸಾಕಷ್ಟು ‌ಜನ ಅಲ್ಲಿಗೆ ಬರ್ತಾರೆ. ಅವರು ಓಡಾಡಬಾರದು ಅಂದ್ರೆ ಹೇಗೆ? ಉಪಕುಲಪತಿಗಳ ಆದೇಶ ಕಾನೂನು ಬಾಹಿರ. ಇದರ ವಿರುದ್ಧ ರಾಜ್ಯಪಾಲರು ಕ್ರಮ ತೆಗೆದುಕೊಂಡು ಮನೆಗೆ ಕಳಿಸುವಂತೆ ಒತ್ತಾಯಿಸಿದರು.

ಮೈಸೂರು ಅತ್ಯಾಚಾರ ಕೇಸ್​ನಲ್ಲಿ ಆರೋಪಿಗಳ ಬಂಧನ ವಿಚಾರ ಮಾತನಾಡಿ, ಪೊಲೀಸ್ ಒಳ್ಳೆಯ ‌ಕೆಲಸ ಮಾಡಿದರೆ ಅವರನ್ನು ಅಭಿನಂಧಿಸುತ್ತೇವೆ. ಕೆಟ್ಟ ಕೆಲಸ ಮಾಡಿದರೆ ಟೀಕೆ ಮಾಡುತ್ತೇವೆ. ಈ ಹಿಂದೆ ಪೊಲೀಸರು ಏನೆಲ್ಲ ಮಾಡಿದ್ದಾರೆ ಅಂತ ನಮಗೂ ಗೊತ್ತಿದೆ. ಯಾವೆಲ್ಲ ಕೇಸ್ ಮುಚ್ಚಿ ಹಾಕಿದ್ರೂ, ಯಾವೆಲ್ಲ ಕೇಸ್​​​ನಲ್ಲಿ ಆರೋಪಗಳಿಗೆ ಶಿಕ್ಷೆ ಕೊಡಿಸಿದ್ರೂ, ಈಗ ಎಷ್ಟರ ಮಟ್ಟಿಗೆ ಸಂತ್ರಸ್ತ ಯುವತಿಗೆ ನ್ಯಾಯ ಕೊಡಿಸುತ್ತಾರೆ ನೋಡೋಣ ಎಂದರು.

ಹುಬ್ಬಳ್ಳಿ ಪ್ರವಾಸ ವಿಚಾರ ಮಾತನಾಡಿ, ಇವತ್ತು ಹುಬ್ಬಳ್ಳಿ ಜಿಲ್ಲೆಗೆ ಹೋಗ್ತಿದ್ದೇನೆ. ಅಲ್ಲಿ ಸಭೆ ಮಾಡಿ ಗೆಲ್ಲಲು ಏನು ಸಹಾಯ‌ ಮಾಡಬೇಕೋ ನಾನು ಮಾಡ್ತೀನಿ ಎಂದರು.

ಓದಿ: ಮೈಸೂರು ವಿವಿ ವಿದ್ಯಾರ್ಥಿನಿಯರು ಒಂಟಿಯಾಗಿ ತಿರುಗಾಡುವಂತಿಲ್ಲ: ಸುತ್ತೋಲೆ

ಇದನ್ನೂ ಓದಿ: ಮೈಸೂರು ಅತ್ಯಾಚಾರ ಪ್ರಕರಣ: ಬಂಧಿತರು ತಮಿಳುನಾಡಿನ ಕೂಲಿ ಕಾರ್ಮಿಕರು - ಡಿಜಿಪಿ ಸೂದ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.