ಬೆಂಗಳೂರಲ್ಲಿ ರೈತರಿಂದ ದಿಢೀರ್ ರಸ್ತೆ ತಡೆ: ಮುಖಂಡರು, ಕಾರ್ಯಕರ್ತರ ಬಂಧನ

author img

By

Published : Dec 8, 2020, 8:16 PM IST

detention-of-peasant-leaders-who-were-carrying-out-road-block-movement

ರಾಜ್ಯ ಸರ್ಕಾರ ರೈತರ ವಿರೋಧವನ್ನು ಲೆಕ್ಕಿಸದೆ ಇಂದು ವಿಧಾನ ಪರಿಷತ್​ನಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿಧೇಯ ಮಂಡನೆ ಮಾಡಿ ಅನುಮೋದನೆ ಪಡೆದಿರುವುದನ್ನು ಹಾಗೂ ಜನತಾದಳವು ಇದನ್ನು ವಿರೋಧಿಸುವುದಾಗಿ ಮಾತು ನೀಡಿ ರೈತರಿಗೆ ಮೋಸ ಮಾಡಿದೆ ಎಂದು ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟದಿಂದ ಮೌರ್ಯ ವೃತ್ತದಲ್ಲಿ ರಸ್ತೆ ತಡೆ ನಡೆಸಲಾಯಿತು.

ಬೆಂಗಳೂರು: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿಧೇಯಕ ವಿಧಾನ ಪರಿಷತ್​ನಲ್ಲಿ ಅಂಗೀಕಾರವಾಗಿರುವುದನ್ನು ವಿರೋಧಿಸಿ ರಸ್ತೆ ತಡೆ ನಡೆಸುತ್ತಿದ್ದ ರೈತ ಮುಖಂಡರನ್ನು ಮೌರ್ಯ ವೃತ್ತದಲ್ಲಿ ಪೊಲೀಸರು ಬಂಧಿಸಿದ್ದಾರೆ.

ರಾಜ್ಯ ಸರ್ಕಾರ ರೈತರ ವಿರೋಧವನ್ನು ಲೆಕ್ಕಿಸದೆ ಇಂದು ವಿಧಾನ ಪರಿಷತ್​ನಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿಧೇಯ ಮಂಡನೆ ಮಾಡಿ ಅನುಮೋದನೆ ಪಡೆದಿರುವುದನ್ನು ಹಾಗೂ ಜನತಾದಳವು ಇದನ್ನು ವಿರೋಧಿಸುವುದಾಗಿ ಮಾತು ನೀಡಿ ರೈತರಿಗೆ ಮೋಸ ಮಾಡಿದೆ ಎಂದು ರೈತ, ದಲಿತ, ಕಾರ್ಮಿಕ ಐಕ್ಯ ಹೋರಾಟದಿಂದ ಮೌರ್ಯ ವೃತ್ತದಲ್ಲಿ ರಸ್ತೆ ತಡೆ ನಡೆಸಲಾಯಿತು.

ಓದಿ: ಪಂಚಲಿಂಗ ದರ್ಶನಕ್ಕೆ ಸ್ಥಳೀಯರಿಗೂ ನಿಗದಿತ ಅವಧಿಯಲ್ಲಿ ಮಾತ್ರ ಅವಕಾಶ!

ಡಿ. 10ರಂದು 11 ಗಂಟೆಗೆ ಮೌರ್ಯ ವೃತ್ತದಿಂದ ರಾಜಭವನಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಕಾರ್ಮಿಕರು ಭಾಗವಹಿಸಬೇಕೆಂದು ಕೋರಲಾಯಿತು.

ಈ ಪ್ರತಿಭಟನೆಯಿಂದ ಬೆಂಗಳೂರು ನಗರದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಯಿತು. ರೈತರ ಮನವೊಲಿಸಲು ಪೊಲೀಸರು ಯತ್ನಿಸಿದರು. ಆದರೂ ಯಾವುದಕ್ಕೂ ರೈತರು ಬಗ್ಗಲಿಲ್ಲ. ಎಲ್ಲಾ ರೈತರನ್ನು ಬಂಧಿಸಿ ಪೊಲೀಸ್ ಮೈದಾನಕ್ಕೆ ಕರೆದೊಯ್ಯಲಾಯಿತು. ಮುಖಂಡರಾದ ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ, ಪ್ರಕಾಶ್ ಕಮ್ಮರಡಿ, ಗುರುಪ್ರಸಾದ್ ಕೆರೆಗೋಡು, ಕಾಳಪ್ಪ ಗಾಯತ್ರಿ ಮತ್ತಿತರರನ್ನು ಬಿಡುಗಡೆಗೊಳಿಸಲಾಯಿತು.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.