ETV Bharat / state

ಬಿಎಂಟಿಸಿ ಎಡವಟ್ಟಿನ ನಿರ್ಧಾರ : ಕೆಲಸಕ್ಕೆ ಹಾಜರಾಗಿದ್ದರೂ ನೌಕರನ ವಜಾ

author img

By

Published : Jul 1, 2021, 11:27 PM IST

bus driver
ಬಸ್​ ಚಾಲಕ

ಸಾರಿಗೆ ಮುಷ್ಕರದ ಸಮಯದಲ್ಲಿ ಯೋಗೇಶ್ ಎಂಬ ಬಸ್​ ಚಾಲಕ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಕೆಲಸಕ್ಕೆ ಬಂದಿಲ್ಲ ಎಂದು ಆರೋಪಿಸಿ ಬಿಎಂಟಿಸಿ ಇವರನ್ನು ವಜಾ ಮಾಡಿದೆ. ಈ ಸಂಬಂಧ ಬಸ್​ ಚಾಲಕ ಅಸಮಾಧಾನ ಹೊರ ಹಾಕಿದ್ದಾರೆ.

ಬೆಂಗಳೂರು : ಸಾರಿಗೆ ಮುಷ್ಕರದ ಸಮಯದಲ್ಲಿ ಯೋಗೇಶ್ ಎಂಬ ಬಸ್​ ಚಾಲಕ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಕೆಲಸಕ್ಕೆ ಬಂದಿಲ್ಲ ಎಂದು ಆರೋಪಿಸಿ ಬಿಎಂಟಿಸಿ ಇವರನ್ನು ವಜಾ ಮಾಡಿದೆ. ಈ ಸಂಬಂಧ ಬಸ್​ ಚಾಲಕ ವಿಡಿಯೋ ಮಾಡುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

Bus driver Yogesh
ಅಭಿನಂದನಾ ಪತ್ರ ಪಡೆದಿರುವ ಬಸ್​ ಚಾಲಕ

ಸಾರಿಗೆ ನೌಕಕರ ಮುಷ್ಕರದ ಸಂದರ್ಭದಲ್ಲಿ ಕೆಲಸಕ್ಕೆ ಹಾಜರಾಗಿದ್ದ ಯೋಗೇಶ್ ಅತ್ಯಂತ ‌ಕಠಿಣ ಸಂದರ್ಭದಲ್ಲಿ ಕೆಲಸಕ್ಕೆ ಹಾಜರಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಈ ಸಂಬಂಧ ಬಿಎಂಟಿಸಿ ಎಂಡಿ ಶಿಖಾ ಅವರು ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದ್ದಾರೆ. ಆದರೀಗ ಮುಷ್ಕರ ಸಂದರ್ಭದಲ್ಲಿ ಕೆಲಸಕ್ಕೆ ಹಾಜರಾಗಿಲ್ಲ ಎಂದೇಳಿ ಬಿಎಂಟಿಸಿ ಅಧಿಕಾರಿಗಳು ವಜಾ ಮಾಡಿದ್ದಾರೆ ಎಂದು ಯೋಗೇಶ್ ಅಸಮಾಧಾನ ಹೊರ ಹಾಕಿದ್ದಾರೆ.

order copy
ಬಿಎಂಟಿಸಿ ಆದೇಶದ ಪ್ರತಿ

ಏ. 7 ಮತ್ತು 8ರಂದು ಯೋಗೇಶ್ ಕೆಲಸಕ್ಕೆ ಹಾಜರಾಗಿಲ್ಲ ಎಂದು ಅವರನ್ನು ವಜಾ‌ ಮಾಡಲಾಗಿದೆ. ಆದರೆ ದಾಖಲೆಗಳ ಪ್ರಕಾರ ಏ.7 ಮತ್ತು 8ಕ್ಕೆ ಯೋಗೇಶ್ ಕರ್ತವ್ಯಕ್ಕೆ ಹಾಜರಾಗಿದ್ದರು. ಈ ಕುರಿತಂತೆ ಸಿಸಿಟಿವಿ ದೃಶ್ಯಾವಳಿಗಳು ಕೂಡ ಲಭ್ಯವಿದೆ ಎನ್ನಲಾಗುತ್ತಿದೆ.

ವಿಡಿಯೋ ಮಾಡಿ ಅಳಲು ತೋಡಿಕೊಂಡ ಬಸ್​ ಚಾಲಕ ಯೋಗೇಶ್​

ಕೊರೊನಾ ಸಂಕಷ್ಟದ ಸಮಯದಲ್ಲೂ ಕೆಲಸಕ್ಕೆ ಹಾಜರಾಗಿದ್ದೆ. ಆದ್ರೆ ಉನ್ನತ ಅಧಿಕಾರಿಗಳು ನಾನು ಕೆಲಸಕ್ಕೆ ಗೈರಾಗಿದ್ದೆ ಎಂದೇಳಿ ನನ್ನನ್ನು ಅಮಾನತುಗೊಳಿಸಿದ್ದಾರೆ ಎಂದು ಬಸ್​ ಚಾಲಕ ಯೋಗೇಶ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.