ETV Bharat / state

ದೇವನಹಳ್ಳಿಯಲ್ಲಿ ಸಾಲ ತೀರಿಸಲು ವೃದ್ಧನ ಹತ್ಯೆ: ಕುಟುಂಬಕ್ಕೆ ಸಾಂತ್ವನ ಹೇಳಿದ್ದ ಯುವಕನೇ ಕೊಲೆ ಆರೋಪಿ!

author img

By

Published : Jan 25, 2021, 10:29 AM IST

devanahalli
ವೃದ್ಧನನ್ನೇ ಕೊಲೆಗೈದ ಪಾಪಿ

ಸ್ನೇಹಿತರ ಬಳಿ ತೆಗೆದುಕೊಂಡಿದ್ದ ಸಾಲ ತೀರಿಸಲು ಪರಿಚಯಸ್ಥ ವೃದ್ಧನನ್ನೇ ಯುವಕನೋರ್ವ ಕೊಲೆ ಮಾಡಿದ್ದಾನೆ. ದೇವನಹಳ್ಳಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ದೇವನಹಳ್ಳಿ: ಸ್ನೇಹಿತರ ಬಳಿ ತೆಗೆದುಕೊಂಡಿದ್ದ ಸಾಲ ತೀರಿಸಲು ವೃದ್ಧನನ್ನು ಕೊಲೆ ಮಾಡಿ, ಆತನ ಬಳಿಯಿದ್ದ ಚಿನ್ನವನ್ನು ಲಪಟಾಯಿಸಿದ್ದ ಆರೋಪಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ರಾಕೇಶ್​ ಬಂಧಿತ ಆರೋಪಿ ಮತ್ತು ನಾಗರಾಜ್ ಮೂರ್ತಿ( 65) ಕೊಲೆಗೀಡಾದ ವೃದ್ಧ.

ಕದ್ದ ಚಿನ್ನಾಭರಣ
ಕದ್ದ ಚಿನ್ನಾಭರಣ

ರಾಕೇಶ್​ ದೇವನಹಳ್ಳಿ ಪಟ್ಟಣದ ಹೊರವಲಯದ ಖಾಸಗಿ ಬಡಾವಣೆಯಲ್ಲಿ ಕಳೆದ ಜನವರಿ 16 ರಂದು ವಾಯುವಿಹಾರಕ್ಕೆ ಬಂದಿದ್ದ ನಾಗರಾಜ ಮೂರ್ತಿಯನ್ನು ಕೊಲೆ ಮಾಡಿ ಚಿನ್ನಾಭರಣ ಕಳವು ಮಾಡಿದ್ದ. ಕೊಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತನಿಖೆ ವೇಳೆ ಪೊಲೀಸರು ರಾಕೇಶ್​ನನ್ನು ಬಂಧಿಸಿದ್ದಾರೆ. ಈ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ವಿವರ:

ರಾಕೇಶ್​ ತನ್ನ ಸ್ನೇಹಿತರ ಬಳಿ 30 ಸಾವಿರ ರೂ. ಸಾಲ ಪಡೆದಿದ್ದ. ಇದನ್ನು ಹಿಂತಿರುಗಿಸುವಂತೆ ಅವರು ಒತ್ತಡ ಹಾಕಿದಾಗ ವೃದ್ಧನ ಕೊರಳಲ್ಲಿದ್ದ ಚಿನ್ನವನ್ನು ನೋಡಿ ಎಗರಿಸಲು ಸ್ಕೆಚ್​ ಹಾಕಿದ್ದಾನೆ. ನಾಗರಾಜ್ ಮೂರ್ತಿ ರಾಕೇಶ್​ ಕುಟುಂಬಕ್ಕೆ ಪರಿಚಿತ. ನಾಗರಾಜ್​ ವಾಯುವಿಹಾರಕ್ಕೆ ತೆರಳಿದ್ದಾಗ ಪ್ಲಾನ್​ ಮಾಡಿ ಅವರನ್ನು ಕೊಲೆ ಮಾಡಿ ಚಿನ್ನ ಕಳ್ಳತನ ಮಾಡಿದ್ದಾನೆ. ವೃದ್ಧ ಕೊಲೆಯಾದ ದಿನ ಕುಟುಂಬಸ್ಥರಿಗೆಲ್ಲ ರಾಕೇಶ್ ಸಾಂತ್ವನ ಹೇಳಿದ್ದನಂತೆ. ಇದೀ​ಗ ಆತನೇ ಕೊಲೆ ಮಾಡಿದ್ದಾನೆ ಎಂದು ತಿಳಿದು ಕುಟುಂಬಸ್ಥರು ಶಾಕ್​ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.