ETV Bharat / sports

ಆಟಗಾರರ ನಿರಂತರ ಶ್ರಮ, ತರಬೇತುದಾರರ ದಣಿವರಿಯದ ಮಾರ್ಗದರ್ಶನವೇ 'ಥಾಮಸ್​ ಕಪ್'​ ಗೆಲುವು : ಗೋಪಿಚಂದ್​

author img

By

Published : May 16, 2022, 4:09 PM IST

Updated : May 16, 2022, 4:18 PM IST

-of-the-team
ಥಾಮಸ್​ ಕಪ್'​ ಗೆಲುವು

ತರಬೇತುದಾರರ ದಣಿವರಿಯದ ಮಾರ್ಗದರ್ಶನ, ಆಟಗಾರರ ಶ್ರಮ, ನಿರಂತರ ಅಭ್ಯಾಸದಿಂದಾಗಿ 14 ಬಾರಿಯ ಚಾಂಪಿಯನ್​ ಆದ ಇಂಡೋನೇಷ್ಯಾವನ್ನು ಮಣಿಸಿ ಭಾರತ 'ಥಾಮಸ್​ ಕಪ್​' ಜಯಿಸಿದೆ..

ಹೈದರಾಬಾದ್ : ವಿಶ್ವ ತಂಡಗಳ ಹಣಾಹಣಿ ಎಂದೇ ಬಿಂಬಿತವಾದ ಥಾಮಸ್​ ಕಪ್​ ಅನ್ನು ಭಾರತ ಮುಡಿಗೇರಿಸಿಕೊಂಡು ಬ್ಯಾಡ್ಮಿಂಟನ್​ನಲ್ಲಿ ಇತಿಹಾಸ ಬರೆದಿದೆ. ಇದು 1983ರಲ್ಲಿ ಕ್ರಿಕೆಟ್​ನಲ್ಲಿ ಭಾರತ ವಿಶ್ವಕಪ್​ ವಿಜಯೋತ್ಸವಕ್ಕೆ ಹೋಲಿಸಲಾಗಿದೆ. ಇದರ ಹಿಂದೆ ಆಟಗಾರರ ಛಲ, ಕೋಚ್​, ಸಿಬ್ಬಂದಿಯ ಅವಿರತ ಶ್ರಮ, ಮಾರ್ಗದರ್ಶನವಿದೆ.

ದೇಶದಲ್ಲಿ ಐಪಿಎಲ್​ ಕ್ರಿಕೆಟ್​ ಫೀವರ್​ ಮಧ್ಯೆಯೇ ಥಾಮಸ್​ ಕಪ್​ ವಿಜಯೋತ್ಸವ ಸುದ್ದಿ ಇಡೀ ದೇಶವನ್ನೇ ಆವರಿಸಿದೆ. ಭಾರತ ಬ್ಯಾಡ್ಮಿಂಟನ್​ ತಂಡದ ಈ ಮಹಾನ್​ ಸಾಧನೆಗೆ ದೇಶವೇ ಶಹಬ್ಬಾಸ್​ ಹೇಳಿದೆ.

ಭಾರತ ತಂಡದ ಸಾಧನೆಗೆ ಬ್ಯಾಡ್ಮಿಂಟನ್​ ರಾಷ್ಟ್ರೀಯ ಮುಖ್ಯ ಕೋಚ್​ ಪುಲ್ಲೇಲ ಗೋಪಿಚಂದ್​ ಅಪಾರ ಹರ್ಷ ವ್ಯಕ್ತಪಡಿಸಿದ್ದಾರೆ. ಈ ವಿಜಯ ಭಾರತೀಯ ಬ್ಯಾಡ್ಮಿಂಟನ್​ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಸಂಗತಿಯಾಗಿದೆ. ಬ್ಯಾಡ್ಮಿಂಟನ್ ಜಗತ್ತಿನಲ್ಲಿ 'ಥಾಮಸ್ ಕಪ್' ಗೆಲ್ಲುವುದು ನಿಜವಾಗಿಯೂ ದೊಡ್ಡ ಸಾಧನೆಯೇ ಸರಿ. ಇದನ್ನು ನಮ್ಮ ಆಟಗಾರರು ಸಾಧಿಸಿದ್ದಾರೆ. ಪ್ರತಿಯೊಬ್ಬ ಆಟಗಾರನೂ ಅದ್ಭುತ ಪ್ರದರ್ಶನ ತೋರಿದರು ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಬ್ಯಾಡ್ಮಿಂಟನ್​ನಲ್ಲಿ ಮಿಂಚು ಹರಿಸುತ್ತಿರುವ ಲಕ್ಷ್ಯ ಸೇನ್, ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ಕಿಡಂಬಿ ಶ್ರೀಕಾಂತ್ ಮತ್ತು ಡಬಲ್ಸ್ ಆಟಗಾರರಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಅವರ ಅದ್ಭುತ ಪ್ರದರ್ಶನದಿಂದಾಗಿ ಭಾರತವು 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು ಸೋಲಿಸಿತು. ಡೆನ್ಮಾರ್ಕ್​ ವಿರುದ್ಧ ಸೆಮಿಫೈನಲ್​ನಲ್ಲಿ ಗಾಯಗೊಂಡರೂ ಪ್ರಣೋಯ್​ ಛಲಬಿಡದೇ ಹೋರಾಡಿ ಗೆಲ್ಲುವ ಮೂಲಕ ತಂಡ 3-2 ರಲ್ಲಿ ಫೈನಲ್​ ತಲುಪಿತು. ಇದು ಆಟಗಾರರ ಕೆಚ್ಚೆದೆಯನ್ನು ತೋರಿಸುತ್ತದೆ ಎಂದು ಹೊಗಳಿದ್ದಾರೆ.

ಇದು ತಂಡದ ಸಾಧನೆ : ಇನ್ನು ಗೆಲುವಿನ ಬಗ್ಗೆ ಮಾತನಾಡಿದ ಮಾಜಿ ವಿಶ್ವ ನಂ.1 ಆಟಗಾರ ಕಿಡಂಬಿ ಶ್ರೀಕಾಂತ್, ಇದು ಭಾರತ ತಂಡದ ಗೆಲುವು. ಇಲ್ಲಿ ಒಬ್ಬ ಆಟಗಾರನಿಂದ ಈ ಸಾಧನೆ ಮಾಡಲು ಸಾಧ್ಯವಿಲ್ಲ. ತಂಡದ 10 ಸದಸ್ಯರ ಅದ್ಭುತ ಆಟದಿಂದಾಗಿ ಈ ಗೆಲುವು ಒಲಿದಿದೆ ಎಂದರು. ಇನ್ನು ಭಾರತ ಬ್ಯಾಡ್ಮಿಂಟನ್​ ತಂಡ ಥಾಮಸ್​ ಕಪ್​ ಜಯಿಸಿದ್ದಕ್ಕೆ ಕ್ರೀಡಾ ವಲಯವೇ ಹಾಡಿ ಹೊಗಳಿದೆ. ಸಚಿನ್​ ತೆಂಡುಲ್ಕರ್​, ವೀರೇಂದ್ರ ಸೆಹವಾಗ್​, ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್ ಸೇರಿದಂತೆ ಎಲ್ಲ ಗಣ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಧಾನಿ ಮೋದಿ ಶ್ಲಾಘನೆ, ನಿವಾಸಕ್ಕೆ ಆಹ್ವಾನ : ಭಾರತ ಬ್ಯಾಡ್ಮಿಂಟನ್​ ತಂಡದ ಈ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದ್ದಾರೆ. ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆಯನ್ನು ತಂಡ ಮಾಡಿದೆ. ಬ್ಯಾಡ್ಮಿಂಟನ್​ನಲ್ಲಿ ಇದೊಂದು ಸುವರ್ಣ ದಿನ ಎಂದು ಬಣ್ಣಿಸಿದ್ದಾರೆ. ಅಲ್ಲದೇ, ಗೆಲುವಿನ ಸಿಹಿಯನ್ನು ಹಂಚಿಕೊಳ್ಳಲು ತಂಡವನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿದ್ದಾರೆ.

ಓದಿ: ಥಾಮಸ್ ಕಪ್ ಚಾಂಪಿಯನ್ಸ್​ಗೆ ಪ್ರಧಾನಿ ಫೋನ್​ ಕಾಲ್​.. ಕ್ರೀಡಾ ಸಚಿವಾಲಯದಿಂದ ₹ 1 ಕೋಟಿ ಬಹುಮಾನ ಘೋಷಣೆ

Last Updated :May 16, 2022, 4:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.