ETV Bharat / sports

ವಿಶ್ವಕಪ್​ನಲ್ಲಿ ಮರೆಯಲಾಗದು ಕನ್ನಡಿಗ ರಾಹುಲ್​ ಆಟ: ಸೋತರೂ ದಾಖಲೆ ಗೌಣವಲ್ಲ

author img

By ETV Bharat Karnataka Team

Published : Nov 20, 2023, 3:51 PM IST

KL Rahul
KL Rahul

2023ರ ವಿಶ್ವಕಪ್​ನಲ್ಲಿ ಕನ್ನಡಿಗ ಕೆಎಲ್​ ರಾಹುಲ್​ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಒಟ್ಟಾರೆ ವಿಶ್ವಕಪ್​ನಲ್ಲಿ ರಾಹುಲ್​ ದಾಖಲೆಗಳಿವು.

ಅಹಮದಾಬಾದ್ (ಗುಜರಾತ್​): ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ 400+ ರನ್ ಗಳಿಸಿದ ಭಾರತದ ಮೊದಲ 5ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಪಾತ್ರರಾಗಿದ್ದಾರೆ. ಫೈನಲ್​ನಲ್ಲಿ ಅರ್ಧಶತಕ ಗಳಿಸುವ ಮೂಲಕ ಕೋಚ್​ ದ್ರಾವಿಡ್​ ಅವರ ದಾಖಲೆ ಮುರಿದಿದ್ದಾರೆ.

  • - Most runs by an Indian Wicket Keeper in a single WC.
    - Most dismissals by an Indian Wicket Keeper in a single WC.
    - Fifty in the final.
    - Incredible with DRS.

    KL Rahul has a brilliant WC to remember especially after coming from a long injury break. pic.twitter.com/wQZUuW6l7H

    — Johns. (@CricCrazyJohns) November 20, 2023 " class="align-text-top noRightClick twitterSection" data=" ">

ಕೆಎಲ್ ರಾಹುಲ್ 2023ರ ವಿಶ್ವಕಪ್​ನಲ್ಲಿ 10 ಇನ್ನಿಂಗ್ಸ್‌ಗಳನ್ನು ಆಡಿದ್ದು, 75.33 ಸರಾಸರಿಯಲ್ಲಿ 90.76 ಸ್ಟ್ರೈಕ್ ರೇಟ್‌ನೊಂದಿಗೆ 452 ರನ್ ಗಳಿಸಿದ್ದಾರೆ ಮತ್ತು ಮಾಜಿ ನಾಯಕ ರಾಹುಲ್​ ದ್ರಾವಿಡ್ ಅವರ 9 ಪಂದ್ಯಗಳಲ್ಲಿ 71.00 ಸರಾಸರಿಯಲ್ಲಿ 355 ರನ್ ಗಳಿಸಿ ಭಾರತದ ಪರ ಐದನೇ ಸ್ಥಾನದಲ್ಲಿದ್ದಾರೆ. 2015ರ ವಿಶ್ವಕಪ್‌ನಲ್ಲಿ ಭಾರತದ ಮಾಜಿ ವಿಶ್ವಕಪ್ ವಿಜೇತ ನಾಯಕ ಮಹೇಂದ್ರ ಸಿಂಗ್ ಧೋನಿ ವಿಕೇಟ್​ ಕೀಪರ್​ ಆಗಿ 15 ವಿಕೆಟ್​​ಗಳನ್ನು ಪಡೆದಿದ್ದರು. 2023ರಲ್ಲಿ ಕೆಎಲ್ ರಾಹುಲ್​ ವಿಕೆಟ್‌ಕೀಪರ್​ ಆಗಿ 17 ವಿಕೆಟ್​​ಗಳನ್ನು ಪಡೆದು ದಾಖಲೆ ಬರೆದಿದ್ದಾರೆ.

ರಾಹುಲ್​ ವಿಶ್ವಕಪ್​ನಲ್ಲಿ 1 ಶತಕ ಮತ್ತು ಎರಡು ಅರ್ಧಶತಕ ಗಳಿಸಿದ್ದಾರೆ. ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ರಾಹುಲ್​ ಗಳಿಸಿದ 97 ರನ್​ ಅತ್ಯಮೂಲ್ಯ ಸಮಯದಲ್ಲಿ ಬಂದಿತ್ತು. 5ನೇ ಆಟಗಾರರಾಗಿ ಬ್ಯಾಟಿಂಗ್​​ಗೆ​ ಬಂದು ರಾಹುಲ್​ ತಂಡದಲ್ಲಿ ಫಿನಿಶರ್​ ಆಗಿಯೂ ಪ್ರದರ್ಶನ ನೀಡಿದ್ದಾರೆ. ವಿಶ್ವಕಪ್​ ಆರಂಭಕ್ಕೂ ಮುನ್ನ ಮಧ್ಯಮ ಕ್ರಮಾಂಕದಲ್ಲಿದ್ದ ಕೊರತೆಯನ್ನು ರಾಹುಲ್​ ನೀಗಿಸಿದರು.

ಡಿಆರ್​ಎಸ್​ ನಿರ್ಧಾರಗಳಲ್ಲಿ ಮೆಚ್ಚುಗೆ: ವಿಕೆಟ್​ ಹಿಂದೆ ನಿಂತು ರಾಹುಲ್​ ಡಿಆರ್​ಎಸ್​ ನಿಯಮಗಳ ಬಗ್ಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ರಾಹುಲ್ ನಿರ್ಧಾರವನ್ನು ನಾಯಕ ರೋಹಿತ್​ ಶರ್ಮಾ ಸಹ ಒಪ್ಪಿಕೊಳ್ಳುತ್ತಿದ್ದರು. ಧೊನಿಯಂತೆ ಡಿಆರ್​ಎಸ್​ನಲ್ಲಿ ಖಚಿತವಾಗಿ ಹೇಳುವ ರಾಹುಲ್​ ನಿರ್ಣಯ ಮೆಚ್ಚುಗೆಗೆ ಪಾತ್ರವಾಗಿತ್ತು.

ರಾಹುಲ್​ ಕಮ್​​ಬ್ಯಾಕ್​: ವರ್ಷದ ಆರಂಭದಲ್ಲಿ ಕೆಎಲ್ ರಾಹುಲ್​ ಪ್ರದರ್ಶನಕ್ಕೆ ಹಲವಾರು ಟೀಕೆಗಳು ಬಂದಿದ್ದವು. ಟೆಸ್ಟ್​ ತಂಡದ ಉಪನಾಯಕನಾಗಿದ್ದ ರಾಹುಲ್​ ಇನ್ನಿಂಗ್ಸ್​ ಕಟ್ಟುವಲ್ಲಿ ಪರದಾಡುತ್ತಿದ್ದರು. ಅಲ್ಲದೇ ಶ್ರೀಕರ್​ ಭರತ್​ ಅವರು ತಂಡದ ಪ್ರಮುಖ ಕೀಪರ್​ ಆಗಿದ್ದರು. ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡು ಟೆಸ್ಟ್​ನ ಮೂರು ಇನ್ನಿಂಗ್ಸ್​ನಲ್ಲಿ ನೀಡಿದ ಕಳೆಪೆ ಪ್ರದರ್ಶನದಿಂದ ಉಪನಾಯಕನ ಪಟ್ಟವನ್ನು ಕಳೆದುಕೊಂಡಿದ್ದರು. ಅಲ್ಲದೇ ಮೂರನೇ ಟೆಸ್ಟ್​ನಿಂದ ಅವರನ್ನು ಕೈಬಿಡಲಾಗಿತ್ತು.

ನಂತರ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ವೇಳೆ ಗಾಯಕ್ಕೆ ತುತ್ತಾದ ರಾಹುಲ್​ ವಿದೇಶಕ್ಕೆ ಹೋಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಬಂದಿದ್ದರು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿ (ಎನ್​ಸಿಎ)ಯಲ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡು ಏಷ್ಯಾಕಪ್​​ಗೆ ತಂಡಕ್ಕೆ ಮರಳಿದರು. ಎನ್​ಸಿಎಯಲ್ಲಿ ಚೇತರಿಸಿಕೊಳ್ಳುತ್ತಿರುವಾಗಲೇ ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ ಜವಾಬ್ದಾರಿ ಮತ್ತು ವಿಕೆಟ್ ಕೀಪಿಂಗ್​ ಬಗ್ಗೆ ಅವರಿಗೆ ತಿಳಿಸಲಾಗಿತ್ತು ಎಂದೇ ಹೇಳಬಹುದು. ಏಷ್ಯಾಕಪ್​ಗೆ ತಂಡಕ್ಕೆ ಬಂದ ಅವರು ಮಧ್ಯಮ ಕ್ರಮಾಂಕದ ಜೊತೆಗೆ ವಿಕೆಟ್​ ಕೀಪರ್​​ ಆಗಿ ಕಮ್​ಬ್ಯಾಕ್​ ಮಾಡಿದರು. ವಿಶ್ವಕಪ್​​ನಲ್ಲಿ ಅನುಭವಿ ಆಟಗಾರನಾಗಿ ಅಗತ್ಯ ಇನ್ನಿಂಗ್ಸ್​​ಗಳನ್ನು ಆಡಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಮೇಲೆ ಕಾಲಿಟ್ಟು​ ಕುಳಿತ ಆಸ್ಟ್ರೇಲಿಯಾ ಆಟಗಾರ: ಇನ್​​ಸ್ಟಾ ಪೋಸ್ಟ್​ ವೈರಲ್​, ಕ್ರಿಕೆಟ್​ ಅಭಿಮಾನಿಗಳು ಗರಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.