ದಕ್ಷಿಣ ಆಫ್ರಿಕಾ - ಭಾರತ 3ನೇ ಟೆಸ್ಟ್​: ಡಿಆರ್​ಎಸ್​ಗೆ ಕೊಹ್ಲಿ ಕೆಂಡಾಮಂಡಲ.. ಗೆಲುವಿನ ಸನಿಹ ಆತಿಥೇಯ ತಂಡ

author img

By

Published : Jan 14, 2022, 1:51 PM IST

Kohli

ಈ ಪಂದ್ಯದ ಎರಡೂ ಇನ್ನಿಂಗ್ಸ್​ನಲ್ಲಿ ಭಾರತದ ಎಲ್ಲ ಬ್ಯಾಟ್ಸ್​ಮನ್​ಗಳು (20) ಕ್ಯಾಚ್​ ನೀಡಿ ಔಟಾಗಿದ್ದಾರೆ. ಈ ಮೂಲಕ 145 ವರ್ಷಗಳ ಹಿಂದಿನ ದಾಖಲೆ ಮುರಿದಂತಾಗಿದೆ.

ಕೇಪ್​ ಟೌನ್​: ಭಾರತ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಇಲ್ಲಿ ನಡೆಯುತ್ತಿರುವ 3ನೇ ಮತ್ತು ಕೊನೆಯ ಟೆಸ್ಟ್​ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಭಾರತ ತನ್ನ 2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸುವುದರೊಂದಿಗೆ, ವಿಕೆಟ್​ ಕೀಪರ್​ ರಿಷಭ್​​ ಪಂತ್​ರ ಶತಕ ಸಾಹಸದಿಂದ 198 ರನ್​ಗಳಿಗೆ ತನ್ನೆಲ್ಲಾ ವಿಕೆಟ್​ ಒಪ್ಪಿಸಿತು.

ಮೊದಲ ಇನ್ನಿಂಗ್ಸ್​ನಲ್ಲಿ ಪಡೆದ 14 ರನ್​ಗಳ ಮುನ್ನಡೆ ಸೇರಿ 212 ರನ್​ಗಳ ಟಾರ್ಗೆಟ್​ ಬೆನ್ನಟ್ಟಿರುವ ದಕ್ಷಿಣ ಆಫ್ರಿಕಾ 4ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್​ ನಷ್ಟಕ್ಕೆ 101 ರನ್​ ಗಳಿಸಿ ಸುಭದ್ರ ಸ್ಥಿತಿಯಲ್ಲಿದೆ. ಇಂದು ಕೊನೆಯ ದಿನದಾಟ ಬಾಕಿ ಉಳಿದಿದ್ದು, ದಕ್ಷಿಣ ಆಫ್ರಿಕಾ ಗೆಲುವಿಗೆ 111 ರನ್​ಗಳು ಮಾತ್ರವೇ ಬೇಕಿದೆ.

ಪಂಥ್​ 100, ಕೊಹ್ಲಿ 29 ಉಳಿದ 9 ಆಟಗಾರರಿಂದ 41

ಇನ್ನು ಭಾರತ ಬ್ಯಾಟ್ಸಮನ್​ಗಳು 2ನೇ ಇನ್ನಿಂಗ್ಸ್​ನಲ್ಲಿ ಎಷ್ಟರ ಮಟ್ಟಿಗೆ ವೈಫಲ್ಯ ಅನುಭವಿಸಿದರು ಎಂದರೆ, ವಿಕೆಟ್​ ಕೀಪರ್ ರಿಷಭ್​​ ಪಂತ್​​ ಏಕಾಂಗಿ ಹೋರಾಟ ನಡೆಸಿ ಕೆಚ್ಚೆದೆಯ 100 ರನ್​ ಬಾರಿಸಿದರೆ, ನಾಯಕ ವಿರಾಟ್​ ಕೊಹ್ಲಿ ಹೋರಾಟದ 29 ರನ್​ ಗಳಿಸಿದರು. ಉಳಿದ 9 ಬ್ಯಾಟ್ಸಮನ್​ಗಳು ಸೇರಿ ಕಲೆಹಾಕಿದ್ದು, ಕೇವಲ 41 ರನ್​ ಮಾತ್ರ. ಇದರಲ್ಲಿ ಕೆ.ಎಲ್​. ರಾಹುಲ್​ 10 ರನ್​ ಬಾರಿಸಿ ಎರಡಂಕಿ ಮೊತ್ತ ಗಳಿಸಿದ್ದು ಬಿಟ್ಟರೆ, ಇನ್ನು ಎಂಟು ಬ್ಯಾಟರ್​ಗಳು ಒಂದಂಕಿ ಮೊತ್ತದಲ್ಲೇ ಔಟಾಗಿದ್ದಾರೆ.

ವಿಶೇಷ ಎಂದರೆ ಈ ಪಂದ್ಯದ ಎರಡೂ ಇನ್ನಿಂಗ್ಸ್​ನಲ್ಲಿ ಭಾರತದ ಎಲ್ಲ ಬ್ಯಾಟ್ಸ್​ಮನ್​ಗಳು (20) ಕ್ಯಾಚ್​ ನೀಡಿ ಔಟಾಗಿದ್ದಾರೆ. ಈ ಮೂಲಕ 145 ವರ್ಷಗಳ ಹಿಂದಿನ ದಾಖಲೆ ಮುರಿದಂತಾಗಿದೆ.

ಡಿಆರ್​ಎಸ್​ ನಿಯಮಕ್ಕೆ ಕೊಹ್ಲಿ ಗರಂ

4ನೇ ದಿನದಾಟದಲ್ಲಿ ದಕ್ಷಿಣ ಆಪ್ರಿಕಾ ತಂಡದ ನಾಯಕ ಡೀನ್​ ಎಲ್ಗರ್​ ಅಶ್ವಿನ್​ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದರು. ಅಂಪೈರ್​ ಎರಾಸ್ಮಸ್​ ಔಟ್​ ಎಂದು ಘೋಷಿಸಿದರು. ಬಳಿಕ ಎಲ್ಗರ್​ ಡಿಎರ್​ಎಸ್​ ಮೊರೆ ಹೋದರು. ಈ ವೇಳೆ, ಬಾಲ್​ ವಿಕೆಟ್​ಗೆ ತಾಕದೇ ಮೇಲೆ ಹೋದಂತೆ ತೋರಿಸಿ, ನಾಟ್​ಔಟ್​ ಎಂದು ತೀರ್ಪು ನೀಡಲಾಯಿತು.

ಮೂರನೇ ಅಂಪೈರ್​ ತೀರ್ಪಿನಿಂದ ಕೆರಳಿದ ನಾಯಕ ವಿರಾಟ್​ ಕೊಹ್ಲಿ ವಿಕೆಟ್​ ಮೈಕ್​ ಹತ್ತಿರ ಹೋಗಿ ಪ್ರಸಾರಕರನ್ನು ಟೀಕಿಸಿದ್ದಾರೆ. ಅಲ್ಲದೇ, ಯಾವಾಗಲೂ ಎದುರಾಳಿ ತಂಡದ ಬಗ್ಗೆ ಮಾತ್ರವಲ್ಲ, ನಿಮ್ಮ ತಂಡದ ಬಗ್ಗೆಯೂ ಪರಿಶೀಲಿಸಿ. ಬರೀ 'ಕ್ಯಾಚ್​ ಮತ್ತು ಬೌಲ್ಡ್​ ಮಾಡಿದರಷ್ಟೇ ಔಟ್​' ಎಂದು ಕೋಪ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕೆ.ಎಲ್​. ರಾಹುಲ್​ 11 ಜನರ ವಿರುದ್ಧ ಇಡೀ ದೇಶವೇ ನಿಂತಿದೆ ಎಂದು ಟೀಕಿಸಿದರೆ, ಅಶ್ವಿನ್, ಗೆಲ್ಲಲು ಬೇರೆ ದಾರಿ ಹುಡುಕಿ ಎಂದು ಪಂದ್ಯ ಪ್ರಸಾರಕರ ಬಗ್ಗೆ ಅತೃಪ್ತಿ ಹೊರಹಾಕಿದ್ದಾರೆ.

ಇದನ್ನೂ ಓದಿ: ಯಾರ ಪಾಲಿಗೆ ಟೆಸ್ಟ್​ ಸರಣಿ?​: ಹರಿಣಗಳಿಗೆ ಬೇಕು 111 ರನ್, ಭಾರತಕ್ಕೆ ಬೇಕು 8 ವಿಕೆಟ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.