ETV Bharat / sports

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೊಸ ಇತಿಹಾಸ ಬರೆದ ವಿರಾಟ್​ ಕೊಹ್ಲಿ

author img

By

Published : Apr 27, 2023, 11:19 AM IST

ನಿನ್ನೆ ನಡೆದ ಪಂದ್ಯದಲ್ಲಿ ಆರ್​ಸಿಬಿ ಹಂಗಾಮಿ ನಾಯಕ ವಿರಾಟ್​ ಕೊಹ್ಲಿ ಇತಿಹಾಸ ಬರೆದಿದ್ದಾರೆ. ಒಂದೇ ಮೈದಾನದಲ್ಲಿ ಮೂರು ಸಾವಿರಕ್ಕೂ ಹೆಚ್ಚು ರನ್​ ಗಳಿಸಿದ ಮೊದಲ ಆಟಗಾರ ವಿರಾಟ್​ ಆಗಿದ್ದಾರೆ.

Indian Premier League 2023  virat kohli created world record  m chinnaswamy stadium  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೊಸ ಇತಿಹಾಸ  ಹೊಸ ಇತಿಹಾಸ ಬರೆದ ವಿರಾಟ್​ ಕೊಹ್ಲಿ  ಆರ್​ಸಿಬಿ ಹಂಗಾಮಿ ನಾಯಕ ವಿರಾಟ್​ ಕೊಹ್ಲಿ  ರಾಯಲ್ ಚಾಲೆಂಜರ್ಸ್ ಬೆಂಗಳೂರು  ಮಿಂಚಿದ ಕೆಕೆಆರ್ ಬ್ಯಾಟ್ಸ್‌ಮನ್‌ಗಳು  ಇತಿಹಾಸ ಸೃಷ್ಟಿಸಿದ ವಿರಾಟ್
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೊಸ ಇತಿಹಾಸ ಬರೆದ ವಿರಾಟ್​ ಕೊಹ್ಲಿ

ಬೆಂಗಳೂರು: ಐಪಿಎಲ್​ 2023 ರ 36 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಭರ್ಜರಿ ಗೆಲುವು ಸಾಧಿಸಿರುವ ವಿಚಾರ ಗೊತ್ತೇ ಇದೆ. ಈ ಪಂದ್ಯದಲ್ಲಿ ಆರ್‌ಸಿಬಿ ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಹೊಸದೊಂದು ದಾಖಲೆ ನಿರ್ಮಿಸಿದ್ದಾರೆ.

ಇತಿಹಾಸ ಸೃಷ್ಟಿಸಿದ ವಿರಾಟ್: ವಿರಾಟ್ ಕೊಹ್ಲಿ ಈಗ ಬೆಂಗಳೂರಿನ ಕ್ರೀಡಾಂಗಣದಲ್ಲಿ ಟಿ-20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ 3000ಕ್ಕೂ ಹೆಚ್ಚು ಟಿ20 ರನ್ ಗಳಿಸಿದ್ದಾರೆ. ಈ ಮೂಲಕ ಒಂದೇ ಕ್ರೀಡಾಂಗಣದಲ್ಲಿ ಹೆಚ್ಚು ರನ್ ಬಾರಿಸಿದ ಆಟಗಾರರಲ್ಲಿ ಕೊಹ್ಲಿ ಮೊದಲಿಗರಾಗಿದ್ದಾರೆ.

ಬಾಂಗ್ಲಾದೇಶದ ಮುಶ್ಫಿಕರ್ ರಹೀಮ್ ಅವರು ಮೀರ್‌ಪುರದಲ್ಲಿ 2989 ಗಳಿಸಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಬಾಂಗ್ಲಾದೇಶದ ಮತ್ತೊಬ್ಬ ಆಟಗಾರ ಮಹಮ್ಮದುಲ್ಲಾ ಅವರು ಮೀರ್‌ಪುರದಲ್ಲಿಯೇ 2813 ಟಿ20 ರನ್​ಗಳಿಸಿದ್ದಾರೆ. ನಾಲ್ಕನೇ ಹೆಸರು ಅಲೆಕ್ಸ್ ಹೇಲ್ಸ್ ಅವರದ್ದಾಗಿದೆ. ನಾಟಿಂಗ್ ಹ್ಯಾಮ್​ನಲ್ಲಿ ಹೇಲ್ಸ್ 2749 ರನ್ ಗಳಿಸಿದ್ದಾರೆ.

ಮಿಂಚಿದ ಕೆಕೆಆರ್ ಬ್ಯಾಟ್ಸ್‌ಮನ್‌ಗಳು: ಈ ಪಂದ್ಯದಲ್ಲಿ ಕೆಕೆಆರ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಸ್ಕೋರ್​ಬೋರ್ಡ್​ನಲ್ಲಿ 200 ರನ್ ಗಳಿಸಿತ್ತು. ಆರಂಭದಿಂದಲೂ ಕೆಕೆಆರ್ ಬ್ಯಾಟ್ಸ್​ಮನ್​ಗಳು ಭರ್ಜರಿ ಬ್ಯಾಟಿಂಗ್ ನಡೆಸಿದರು. ಜೇಸನ್ ರಾಯ್ ಇನಿಂಗ್ಸ್‌ನ ಮೊದಲ ಓವರ್‌ನಿಂದಲೇ ಪ್ರಬಲ ಹೊಡೆತಗಳನ್ನು ಆಡುವ ಮೂಲಕ 56 ರನ್​ಗಳನ್ನು ಕಲೆ ಹಾಕಿದ್ದರು. ಎನ್ ಜಮದೀಶನ್ ಕೂಡ 27 ರನ್ ಗಳಿಸಿದರು. ವೆಂಕಟೇಶ್ ಅಯ್ಯರ್ 31 ಮತ್ತು ನಿತೀಶ್ ರಾಣಾ 41 ರನ್ ಗಳಿಸಿದರು. ಇದಲ್ಲದೇ ರಿಂಕು ಸಿಂಗ್ ಕೊನೆಯಲ್ಲಿ 18 ರನ್‌ಗಳ ವೇಗದ ಇನ್ನಿಂಗ್ಸ್ ಆಡಿದರು.

ನಿನ್ನೆ ರಾತ್ರಿ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೊಲ್ಕತ್ತಾ ನೀಡಿದ್ದ ದೊಡ್ಡ ಮೊತ್ತದ ಟಾರ್ಗೆಟ್​​ ಬೆನ್ನಟ್ಟಿದ ಬೆಂಗಳೂರು ತಂಡ ಆರಂಭದಲ್ಲೇ ನೆಲಕಚ್ಚಿತು. ಆರಂಭಿಕರಾದ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಮೊದಲ ಎರಡು ಓವರ್‌ಗಳಲ್ಲಿ 30 ರನ್ ಗಳಿಸಿ ಮಿಂಚಿನ ಆಟ ಪ್ರದರ್ಶಿಸುತ್ತಿದ್ದರು. ಆದರೆ, ಸುಯಶ್ ಶರ್ಮಾ ಎಸೆದ ಮೂರನೇ ಓವರ್​​ನ ಎರಡನೇ ಬಾಲ್​ನಲ್ಲಿ ಡುಪ್ಲೆಸಿಸ್ (17) ರಿಂಕು ಸಿಂಗ್ ಕೈಗೆ ಕ್ಯಾಚಿತ್ತು ನಿರ್ಗಮಿಸಿದರು.

ನಂತರ ಬಂದ ಶಹಬಾಜ್ ಅಹ್ಮದ್ (2) ಅವರನ್ನೂ ಸುಯಶ್ ಎಲ್​ಬಿಗೆ ಕೆಡವಿದರು. ಬಳಿಕ ಗ್ಲೆನ್​ ಮ್ಯಾಕ್ಸ್‌ವೆಲ್ (5) ಅವರನ್ನು ವರುಣ್ ಚಕ್ರವರ್ತಿ ಪೆವಿಲಿಯನ್​ಗೆ ಕಳುಹಿಸಿದರು. ಈ ನಡುವೆ ಕ್ರೀಸ್​ಗೆ ಬಂದ ಮಹಿಪಾಲ್ ಲೊಮ್ರೋರ್ (34) ತಂಡಕ್ಕೆ ಆಸರೆಯಾದರು. ಮತ್ತೊಂದೆಡೆ, 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದ ಕೊಹ್ಲಿ (54) ರಸೆಲ್ ಎಸೆತದಲ್ಲಿ ಕ್ಯಾಚಿತ್ತರು. ಇದರಿಂದ ಬೆಂಗಳೂರು 12.1 ಓವರ್​​ಗಳಲ್ಲಿ 5 ವಿಕೆಟ್ ಕಳೆದುಕೊಂಡು 115 ರನ್​ಗಳಿಗೆ ಕುಸಿದು ಸಂಕಷ್ಟಕ್ಕೆ ಸಿಲುಕಿತು.

ಸುಯಶ್ ಪ್ರಭುದೇಸಾಯಿ (10) ಮತ್ತು ವನಿಂದು ಹಜರಂಕಾ (5) ಕೂಡ ಬೇಗ ಔಟಾದರು. 22 ರನ್​ ಗಳಿಸಿ ಆಟವಾಡುತ್ತಿದ್ದ ದಿನೇಶ್ ಕಾರ್ತಿಕ್ ಸಹ ಔಟಾಗಿದ್ದರಿಂದ ಬೆಂಗಳೂರು ಸೋಲಿನ ಸುಳಿಗೆ ಸಿಲುಕಿತು. ಡೇವಿಡ್ ವಿಲ್ಲಿ (11) ಮತ್ತು ವೈಶಾಖ್ ವಿಜಯ್ ಕುಮಾರ್ (13) ಅಜೇಯರಾಗಿ ಉಳಿದರೂ ತಂಡಕ್ಕೆ ಗೆಲುವು ತಂದುಕೊಡಲು ಆಗಿಲ್ಲ. ಬೆಂಗಳೂರು ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿ ಸೋಲನ್ನೊಪ್ಪಿಕೊಂಡಿತು.

ಓದಿ: ಐಪಿಎಲ್​ನಿಂದ ರೋಹಿತ್ ಶರ್ಮಾ ಸ್ವಲ್ಪ ವಿರಾಮ ತೆಗೆದುಕೊಳ್ಳಬೇಕು: ಸುನಿಲ್ ಗವಾಸ್ಕರ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.