ಲಖನೌ(ಉತ್ತರಪ್ರದೇಶ): ಇಲ್ಲಿನ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ಕ್ರಿಕೆಟ್ ವಿಶ್ವಕಪ್ 2023 ಪಂದ್ಯವು ಕೊಂಚ ಸಮಯ ಮಳೆಯಿಂದಾಗಿ ಸ್ಥಗಿತಗೊಂಡಿತ್ತು. ಈ ವೇಳೆ ಡೇವಿಡ್ ವಾರ್ನರ್ ಗ್ರೌಂಡ್ಸ್ಮನ್ಗೆ ಸಹಾಯ ಮಾಡಿದ್ದು, ಎಲ್ಲರ ಮನಗೆದ್ದರು.
36ರ ಹರೆಯದ ವಾರ್ನರ್ ಈ ಹಿಂದೆ ಶ್ರೀಲಂಕಾದ ಪಾಥುಮ್ ನಿಸ್ಸಾಂಕಾ ಮತ್ತು ಕುಸಲ್ ಮೆಂಡಿಸ್ ಅವರ ಸಹ ಕ್ಯಾಚ್ ಹಿಡಿದಿದ್ದರು. ಶ್ರೀಲಂಕಾ ಸ್ಕೋರ್ 32.1 ಓವರ್ಗಳಿಗೆ 4 ವಿಕೆಟ್ ಕಳೆದುಕೊಂಡು 178 ರನ್ಗಳನ್ನು ಕಲೆ ಹಾಕಿದ್ದಾಗ ಕೆಲ ಸಮಯ ಮಳೆ ಸುರಿಯಿತು. ಆಗ ಚರಿತ್ ಅಸಲಂಕಾ ಅವರೊಂದಿಗೆ ಧನಂಜಯ್ ಡಿ ಸಿಲ್ವಾ ಕ್ರೀಸ್ನಲ್ಲಿದ್ದರು. ಆಗ ಗ್ರೌಂಡ್ಸ್ಮನ್ ಆಗಿ ಡೇವಿಡ್ ವಾರ್ನರ್ ಕಾಣಿಸಿಕೊಂಡರು.
![ICC Cricket World Cup David Warner helps to groundsman covers the field as rain disrupts the match ಆಸ್ಟ್ರೇಲಿಯಾ ಶ್ರೀಲಂಕಾ ಪಂದ್ಯಕ್ಕೆ ವರುಣ ಅಡ್ಡಿ ಗ್ರೌಂಡ್ಸ್ಮನ್ಗೆ ಸಹಾಯ ಮಾಡಿದ ವಾರ್ನರ್ ವಾರ್ನರ್ಗೆ ಪ್ರಶಂಸೆಯ ಸುರಿಮಳೆ ಏಕಾನಾ ಕ್ರಿಕೆಟ್ ಸ್ಟೇಡಿಯಂ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ಪಂದ್ಯ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಗ್ರೌಂಡ್ಸ್ಮನ್ ಕ್ರಿಕೆಟ್ ವಿಶ್ವಕಪ್ 2023 ಪಂದ್ಯ ಡೇವಿಡ್ ವಾರ್ನರ್ ಗ್ರೌಂಡ್ಸ್ಮನ್ಗೆ ಸಹಾಯ ಕೆಲ ಸಮಯ ಮಳೆ ಸುರಿಯಿತು](https://etvbharatimages.akamaized.net/etvbharat/prod-images/17-10-2023/19785694_warner.jpg)
ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ತನ್ನ ಇನ್ಸ್ಟಾಗ್ರಾಮ್ದಲ್ಲಿ ಡೇವಿಡ್ ವಾರ್ನರ್ ಗ್ರೌಂಡ್ಸ್ಮನ್ಗೆ ಸಹಾಯ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇನ್ನು, ಈ ವಿಡಿಯೋ ವೈರಲ್ ಆಗಿದ್ದು, ಡೇವಿಡ್ ವಾರ್ನರ್ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾದ ನಾಯಕ ದಸುನ್ ಶನಕಾ ಅವರು ಗಾಯದ ಕಾರಣ ವಿಶ್ವಕಪ್ನಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ಕುಸಲ್ ಮೆಂಡಿಸ್ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ಶನಕ ಹಿಂತಿರುಗಲು ಸಮಯ ಹಿಡಿಯಬಹುದಾಗಿದೆ. ಹೀಗಾಗಿ ಮೆಂಡಿಸ್ಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಮೊದಲ ವಿಕೆಟ್ಗೆ 125 ರನ್ಗಳನ್ನು ಕಲೆ ಹಾಕಿದ್ದರು. ಪಾಥುಮ್ ನಿಸ್ಸಾಂಕಾ 61 ರನ್ ಮತ್ತು ಕುಸಾಲ್ ಪೆರೆರಾ 78 ರನ್ ಗಳನ್ನು ಕಲೆ ಹಾಕುವ ಮೂಲಕ ಉತ್ತಮ ಆರಂಭ ನೀಡಿದ್ದರು. ಆದರೆ ಅವರ ವಿಕೆಟ್ ಬಿದ್ದ ಕೂಡಲೇ ಶ್ರೀಲಂಕಾ ತಂಡ ತತ್ತರಿಸಿತ್ತು. ಕಳೆದ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಕುಸಲ್ ಮೆಂಡಿಸ್ ಕೇವಲ 9 ರನ್ ಗಳಿಸಿ ಔಟಾದರು. ಇದಾದ ನಂತರ ಶ್ರೀಲಂಕಾ ತಂಡ ಲಯ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ ಬೃಹತ್ ಸ್ಕೋರ್ ಗಳಿಸಲು ವಿಫಲವಾಯಿತು. ಆಸ್ಟೇಲಿಯಾ ಪರ ಆಡಮ್ ಝಂಪಾ ನಾಲ್ಕು ವಿಕೆಟ್ ಪಡೆದು ಮಿಂಚಿದರು.
ಇನ್ನು ಶ್ರೀಲಂಕಾ ನೀಡಿದ್ದ ಗುರಿಯನ್ನು ಬೆನ್ನತ್ತಿದ್ದ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. 24ಕ್ಕೆ ಎರಡು ವಿಕೆಟ್ ಕಳೆದುಕೊಂಡು ಆಸ್ಟ್ರೇಲಿಯಾ ಸಂಕಷ್ಟಕ್ಕೆ ಸಿಲುಕಿತು. ಡೇವಿಡ್ ವಾರ್ನರ್ ಕೇವಲ 11 ರನ್ ಗಳಿಸಿದ್ರೆ, ಸ್ವೀವ್ ಸ್ಮಿತ್ ಖಾತೆ ತೆರೆಯದೇ ಪೆವಿಲಿಯನ್ ಹಾದಿ ಹಿಡಿದರು. ಬಳಿಕ ಬಂದ ಬ್ಯಾಟ್ಸ್ಮನ್ಗಳು ಜವಾಬ್ದಾರಿಯುತವಾಗಿ ಆಟವಾಡಿ ತಂಡದ ಗೆಲುವಿಗೆ ಕಾರಣರಾದರು. ಮಾರ್ಷ್ ಮತ್ತು ಜೋಶ್ ಇಬ್ಬರು ಅರ್ಧ ಶತಕ ಗಳಿಸಿ ತಂಡದ ಗೆಲುವಿಗೆ ಮುಖ್ಯ ಪಾತ್ರ ವಹಿಸಿದರು. ಶ್ರೀಲಂಕಾ ಪರ ದಿಲ್ಶನ್ ಮಧುಶಂಕ ಮೂರು ವಿಕೆಟ್ ಪಡೆದರು.
ಓದಿ: ಬೆನ್ನು ನೋವಿನ ಮಧ್ಯೆಯೂ ತಂಡದ ಗೆಲುವಿಗಾಗಿ ಆಡಮ್ ಹೋರಾಟ.. ಝಂಪಾ ಹೇಳಿದ್ದು ಹೀಗೆ..