ETV Bharat / sports

ರಾಹುಲ್​ ದ್ರಾವಿಡ್​ರಿಂದ ಸಚಿನ್​ -ಗಂಗೂಲಿ 2007ರ ಟಿ20 ವಿಶ್ವಕಪ್​ ಆಡಲಿಲ: ಕಾರಣ ಬಹಿರಂಗಪಡಿಸಿದ ರಜಪೂತ್​

author img

By

Published : Jun 29, 2020, 4:23 PM IST

2007ರಲ್ಲಿ ನಡೆದ ಈ ಟೂರ್ನಿಯಲ್ಲಿ ಮಹೇಂದ್ರ ಸಿಂಗ್‌ ಧೋನಿ ಭಾರತ ತಂಡದ ನಾಯಕರಾಗಿದ್ದರು. ಅವರ ನಾಯಕತ್ವದ ಭಾರತ ತಂಡ ಚೊಚ್ಚಲ ಟಿ20 ವಿಶ್ವಕಪ್‌ ಎತ್ತಿ ಹಿಡಿದಿತ್ತು. ಅದಲ್ಲದೆ, ರೋಹಿತ್‌ ಶರ್ಮಾ ಪ್ರತಿಭಾವಂತ ಆಟಗಾರ ಭಾರತ ತಂಡಕ್ಕೆ ಸಿಗುವಂತಾಯಿತು.

2007 T20 World Cup
ಸೌರವ್​ ಗಂಗೂಲಿ-ಸಚಿನ್​

ಮುಂಬೈ: ಭಾರತ ತಂಡದ ದಿಗ್ಗಜರಾದ ಸಚಿನ್​ ತೆಂಡೂಲ್ಕರ್​, ಸೌರವ್​ ಗಂಗೂಲಿ ಹಾಗೂ ರಾಹುಲ್​ ದ್ರಾವಿಡ್​ ಚೊಚ್ಚಲ ಟಿ20 ವಿಶ್ರಕಪ್​ನಲ್ಲಿ ಪಾಲ್ಗೊಳ್ಳದಿರುವುದಕ್ಕೆ ಕನ್ನಡಿಗ ರಾಹುಲ್​ ದ್ರಾವಿಡ್​ ಕಾರಣ ಎಂದು ಭಾರತ ತಂಡದ ಮಾಜಿ ಆಟಗಾರ ಲಾಲ್​ಚಂದ್​ ರಜಪೂತ್​ ಬಹಿರಂಗಪಡಿಸಿದ್ದಾರೆ.

ಖಾಸಗಿ ಕ್ರೀಡಾವೆಬ್​ಸೈಟ್​ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು , ದ್ರಾವಿಡ್​ , ಯುವ ಆಟಗಾರರಾದ ರೋಹಿತ್​ ಶರ್ಮಾ, ರಾಬಿನ್​ ಉತ್ತಪ್ಪ ಯೂಸುಫ್​ ಪಠಾಣ್​ ಅವರಂತಹ ಆಟಗಾರರಿಗೆ ಅವಕಾಶ ಒದಗಿಸಿಕೊಡುವ ಸಲುವಾಗಿ ಗಂಗೂಲಿ ಮತ್ತು ಸಚಿನ್​ರಿಗೆ ಚುಟುಕು ವಿಶ್ವಕಪ್​ನಲ್ಲಿ ಆಡದಿರುವಂತೆ ಮನವಿ ಮಾಡಿದ್ದರು ಎಂದು ರಜಪೂತ್​ ವಿವರಿಸಿದ್ದಾರೆ.

2007ರಲ್ಲಿ ನಡೆದ ಈ ಟೂರ್ನಿಯಲ್ಲಿ ಮಹೇಂದ್ರ ಸಿಂಗ್‌ ಧೋನಿ ಭಾರತ ತಂಡದ ನಾಯಕರಾಗಿದ್ದರು. ಅವರ ನಾಯಕತ್ವದ ಭಾರತ ತಂಡ ಚೊಚ್ಚಲ ಟಿ20 ವಿಶ್ವಕಪ್‌ ಎತ್ತಿ ಹಿಡಿದಿತ್ತು. ಅದಲ್ಲದೆ, ರೋಹಿತ್‌ ಶರ್ಮಾ ಪ್ರತಿಭಾವಂತ ಆಟಗಾರ ಭಾರತ ತಂಡಕ್ಕೆ ಸಿಗುವಂತಾಯಿತು.

ಈ ವಿಶ್ವಕಪ್​ ಜಯದ ಬಳಿಕ ಸಚಿನ್‌ ಹಲವು ವರ್ಷಗಳಿಂದ ಭಾರತ ತಂಡದಲ್ಲಿ ಆಡುತ್ತಿದ್ದೇನೆ. ಆದರೆ ಒಂದು ಬಾರಿಯೂ ನಾನು ವಿಶ್ವಕಪ್‌ ಗೆಲ್ಲಲು ಸಾಧ್ಯವಾಗಿಲ್ಲ ಎಂದು ನನ್ನ ಬಳಿ ಆಗಾಗ ಹೇಳಿಕೊಂಡು ಕೊರಗುತ್ತಿದ್ದರು ಎಂದು ಕೋಚ್​ ಲಾಲ್‌ಚಂದ್‌ ಅವರು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.