ETV Bharat / sports

ಧೋನಿ ನಿವೃತ್ತಿ: ಇದ್ದ ಮೂವರು ವಿಕೆಟ್​ ಕೀಪರ್​​ಗಳಲ್ಲಿ ಯಾರು ಬೆಸ್ಟ್​​ ..!

author img

By

Published : Aug 17, 2020, 11:23 AM IST

ಟಿಮ್​​ ಇಂಡಿಯಾಗೆ ಮುಂದಿನ ವಿಕೆಟ್​ ಕೀಪರ್
ಟಿಮ್​​ ಇಂಡಿಯಾಗೆ ಮುಂದಿನ ವಿಕೆಟ್​ ಕೀಪರ್

ಭಾರತ ತಂಡಕ್ಕೆ ಮೂವರು ವಿಕೆಟ್‌ ಕೀಪರ್‌ಗಳ ಪೈಪೋಟಿ ಇದ್ದು, ಅದರಲ್ಲಿ ಕೆ.ಎಲ್​​. ರಾಹುಲ್ ಮುಂದಿನ ದಿನಗಳಲ್ಲಿ ತಮ್ಮ ಅತ್ಯುತ್ತಮ ಆಯ್ಕೆ. ತಂಡದಲ್ಲಿ ಈ ಸ್ಥಾನಕ್ಕಾಗಿ ಪ್ರಸ್ತುತ ರಾಹುಲ್ ಮತ್ತು ಪಂತ್ ನಡುವೆ ಪೈಪೋಟಿ ನಡೆಯಲಿದೆ ಎಂದು ನಯಾನ್ ಮೊಂಗಿಯಾ, ಎಂಎಸ್​ಕೆ ಪ್ರಸಾದ್ ಮತ್ತು ದೀಪ್ ದಾಸ್‌ ಗುಪ್ತಾ ಹೇಳಿದ್ದಾರೆ.

ಹೈದರಾಬಾದ್: ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ಯುವ ವಿಕೆಟ್‌ ಕೀಪರ್ ರಿಷಭ್ ಪಂತ್ ಮೇಲಿನ ಒತ್ತಡ ಸ್ವಲ್ಪ ಕಡಿಮೆಯಾಗಿದೆ. ಆದರೆ, ಭಾರತ ತಂಡಕ್ಕೆ ಮೂವರು ವಿಕೆಟ್‌ ಕೀಪರ್‌ಗಳ ಪೈಪೋಟಿ ಇದ್ದು, ಅದರಲ್ಲಿ ಕೆ.ಎಲ್​​. ರಾಹುಲ್ ಮುಂದಿನ ದಿನಗಳಲ್ಲಿ ತಮ್ಮ ಅತ್ಯುತ್ತಮ ಆಯ್ಕೆ. ತಂಡದಲ್ಲಿ ಈ ಸ್ಥಾನಕ್ಕಾಗಿ ಪ್ರಸ್ತುತ ರಾಹುಲ್ ಮತ್ತು ಪಂತ್ ನಡುವೆ ಪೈಪೋಟಿ ನಡೆಯಲಿದೆ ಎಂದು ನಯಾನ್ ಮೊಂಗಿಯಾ, ಎಂಎಸ್​ಕೆ ಪ್ರಸಾದ್ ಮತ್ತು ದೀಪ್ ದಾಸ್‌ ಗುಪ್ತಾ ಹೇಳಿದ್ದಾರೆ. ಸಂಜು ಸ್ಯಾಮ್ಸನ್ ಮೂರನೇ ಸ್ಥಾನದಲ್ಲಿದ್ದಾರೆ.

ಕೆ.ಎಲ್​​. ರಾಹುಲ್
ಕೆ.ಎಲ್​​. ರಾಹುಲ್

"ರಾಹುಲ್, 50 ಓವರ್‌ಗಳ ಫಾರ್ಮ್ಯಾಟ್‌ಗೆ ನನ್ನ ಮೊದಲ ಆಯ್ಕೆ . ನಾನು ನೋಡಿದ ಹಾಗೆ ವಿಕೆಟ್ ಹಿಂದೆ ಕೆಎಲ್ ಆಟ ಅಷ್ಟೇನು ಕೆಟ್ಟದ್ದಲ್ಲ. ಅವರು ವಿಕೆಟ್ ಕೀಪಿಂಗ್ ಪ್ರಾರಂಭಿಸಿದಾಗಿನಿಂದ ಅವರ ಬ್ಯಾಟಿಂಗ್ ಸುಧಾರಿಸುತ್ತಿದೆ. "ನೀವು ಪ್ರಸ್ತುತ ಫಾರ್ಮ್ ಅನ್ನು ನೋಡಿದರೆ ರಾಹುಲ್ ನನ್ನ ಮೊದಲ ಆಯ್ಕೆಯಾಗಿದೆ. ನಂತರ ನೀವು ರಿಷಭ್ ಪಂತ್​ಗೆ ಅವಕಾಶ ನೀಡಬಹುದು ಎಂದು ಭಾರತದ ಮಾಜಿ ವಿಕೆಟ್‌ಕೀಪರ್‌ಗಳಲ್ಲಿ ಒಬ್ಬರಾದ ನಯಾನ್ ಮೊಂಗಿಯಾ ಹೇಳಿದ್ದಾರೆ.

ದೀಪ್ ದಾಸ್‌ಗುಪ್ತಾ ಕೂಡ ಮೊಂಗಿಯಾ ಅವರ ಮಾತನ್ನು ಒಪ್ಪಿದ್ದಾರೆ, ರಾಹುಲ್ ಮತ್ತು ಪಂತ್‌ರನ್ನು ಬಳಸುವ ವಿಷಯದಲ್ಲಿ ತಂಡವು ಸ್ವರೂಪಕ್ಕೆ ಅನುಗುಣವಾಗಿ ನಮ್ಯತೆಯನ್ನು ಅಳವಡಿಸಿಕೊಳ್ಳಬಹುದು ಎಂದು ಒಪ್ಪಿಕೊಂಡರು. " ಟಿ 20 ಯಲ್ಲಿ, ಇಬ್ಬರೂ ಅಂತಿಮ 11 ರಲ್ಲಿ ಆಡಬಹುದು ಎಂದು ನಾನು ನಂಬುತ್ತೇನೆ. ಆದರೆ, ಒಂದು ಆಯ್ಕೆಯನ್ನು ಆರಿಸಬೇಕಾದರೆ, ಟಿ 20 ಯಲ್ಲಿ ಪ್ರಸ್ತುತ ಸಮಯಕ್ಕೆ ನಾನು ರಾಹುಲ್ ಅವರನ್ನು ಆಯ್ಕೆ ಮಾಡುತ್ತೇನೆ" ಎಂದು ಹೇಳಿದರು.

"ಈ ಯುವ ಆಟಗಾರನ ಮೇಲೆ ಸಾಕಷ್ಟು ಒತ್ತಡ ಹೇರಿದ ಧೋನಿಗೆ ಪಂತ್‌ ಅವರನ್ನು ಹೆಚ್ಚಾಗಿ ಹೋಲಿಸಲಾಗುತ್ತಿತ್ತು. ಒತ್ತಡದಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಈಗ ಅವರು ಮುಕ್ತವಾಗಿ ಆಡಬಹುದು. ಆಟಗಾರನಾಗಿ ಪ್ರಬುದ್ಧರಾಗುವ ಅಗತ್ಯವಿದೆ ಎಂದು ದಾಸ್‌ಗುಪ್ತಾ ಹೇಳಿದ್ದಾರೆ. "

"ಆದಾಗ್ಯೂ, ಒನ್​ ಡೇ ಮ್ಯಾಚ್​​ಗಳಲ್ಲಿ, ತಂಡದ ಆಡಳಿತ ಮತ್ತು ಆಯ್ಕೆದಾರರು ಅವರೊಂದಿಗೆ ಮಾತನಾಡಬಹುದು, ಅವರು 2023 ರ ವಿಶ್ವಕಪ್ ತನಕ ದೀರ್ಘಕಾಲದವರೆಗೆ ಅದನ್ನು ಮುಂದುವರಿಸುವ ಮೂಲಕ ಐದನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಯಸುತ್ತಾರೆಯೇ ಎಂದು ಕಂಡುಕೊಳ್ಳಬೇಕು.

ಸ್ವಲ್ಪ ಸಮಯದವರೆಗೆ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಪ್ರಸಾದ್, ರಿಷಭ್‌ಗಿಂತ ರಾಹುಲ್ ಅವರ ಸ್ಥಾನ ಉತ್ತಮವಾಗಿದೆ ಎಂದಿದ್ದಾರೆ. "ನೀವು ಭಾರತದ ಕೊನೆಯ ನ್ಯೂಜಿಲ್ಯಾಂಡ್​​ ಸರಣಿಯನ್ನು ನೋಡಿದರೆ, ರಾಹುಲ್ ನನ್ನ ಮೊದಲ ಆಯ್ಕೆಯಾಗುತ್ತಾರೆ ಮತ್ತು ಸಂಜು ಮೂರನೇ ಆಯ್ಕೆಯಾಗಿದ್ದಾರೆ ಎಂದು ಅವರು ಹೇಳಿದರು.

ಮಹೀ ಸ್ಥಾನದಲ್ಲಿ ರಿಷಭ್ ಉಳಿಯಲಿದ್ದಾರೆ ಎಂದು ಪ್ರಸಾದ್ ಹೇಳಿದ್ದಾರೆ. "ಭಾರತೀಯ ಕ್ರಿಕೆಟ್ ವರ್ಷಗಳಲ್ಲಿ ನಾವು ಪಂತ್ ಅವರ ಅತ್ಯುತ್ತಮ ಮತ್ತು ಕೆಟ್ಟ ಆಟವನ್ನು ನೋಡಿದ್ದೇವೆ. ಅವರು ಭಾರತೀಯ ಕ್ರಿಕೆಟ್‌ಗೆ ದೀರ್ಘಕಾಲ ಸೇವೆ ಸಲ್ಲಿಸುವಂತಹ ಆಟಗಾರರಾಗಿದ್ದಾರೆ, ಸಿಕ್ ಅವಕಾಶಗಳನ್ನು ಸರಿಯಾಗಿ ಸದುಯೋಗ ಪಡೆದುಕೊಳ್ಳಬೇಕು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.