ETV Bharat / sports

ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಮುಂಬೈ ತಂಡದಲ್ಲಿ ಅವಕಾಶ ಪಡೆದ ಅರ್ಜುನ್ ತೆಂಡೂಲ್ಕರ್

author img

By

Published : Jan 2, 2021, 5:43 PM IST

arjun tendulkar
arjun tendulkar

ಇದೇ ಮೊದಲ ಬಾರಿಗೆ ಹಿರಿಯರ ತಂಡದಲ್ಲಿ ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ ಮಗ ಅರ್ಜುನ್​ ಅವಕಾಶ ಪಡೆದುಕೊಂಡಿದ್ದು, ಸೈಯ್ಯದ್​ ಮುಷ್ತಾಕ್​ ಅಲಿ ಟ್ರೋಫಿಯಲ್ಲಿ ಮುಂಬೈ ತಂಡದ ಪರ ಕಣಕ್ಕಿಳಿಯಲಿದ್ದಾರೆ.

ಮುಂಬೈ: ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರ ಪುತ್ರ ಅರ್ಜುನ್ ಇದೀಗ ಸೈಯ್ಯದ್​ ಮುಷ್ತಾಕ್​ ಅಲಿ ಟ್ರೋಫಿಯಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದಾರೆ. ಈ ಮೂಲಕ ಅವರು ಮುಂಬೈ ಹಿರಿಯರ ತಂಡದಲ್ಲಿ ಮಿಂಚು ಹರಿಸುವ ನಿರೀಕ್ಷೆ ಇದೆ. ಎಡಗೈ ವೇಗದ ಬೌಲರ್ ಹಾಗೂ ಬ್ಯಾಟ್ಸ್‌ಮನ್​ ಆಗಿರುವ ​ಅರ್ಜುನ್​​​ ಈಗಾಗಲೇ ಕೆಲವು ಟೂರ್ನಿಗಳಲ್ಲಿ ಅದ್ಭುತ ಪ್ರದರ್ಶನ ತೋರಿದ್ದು, ಇದರ ಆಧಾರದ ಮೇಲೆ ಮುಂಬೈ ಆಯ್ಕೆ ಸಮಿತಿ ಅವರಿಗೆ ಮಣೆ ಹಾಕಿದೆ.

arjun tendulkar
ಮುಂಬೈ ತಂಡದಲ್ಲಿ ಅರ್ಜುನ್​ ತೆಂಡೂಲ್ಕರ್​

ಸೈಯ್ಯದ್​ ಮುಷ್ತಾಕ್ ಅಲಿ ಟ್ರೋಫಿಗಾಗಿ ಮುಂಬೈ 22 ಸದಸ್ಯರ ತಂಡ ಪ್ರಕಟಗೊಳಿಸಿದ್ದು, ಮುಂಬೈ ತಂಡ E ಗ್ರೂಪ್​ನಲ್ಲಿ ಡೆಲ್ಲಿ, ಹರಿಯಾಣ, ಕೇರಳ, ಆಂಧ್ರ ಹಾಗೂ ಪಾಂಡಿಚೇರಿ ತಂಡಗಳೊಂದಿಗೆ ಸೆಣಸಾಟ ನಡೆಸಲಿದೆ. ಈ ಪಂದ್ಯಗಳು ಕ್ರಮವಾಗಿ ಜನವರಿ 11,13,15,17 ಹಾಗೂ 19ರಂದು ಅಹಮದಾಬಾದ್​ನಲ್ಲಿ ನಡೆಯಲಿವೆ.

ಈಗಾಗಲೇ ಟೀಂ ಇಂಡಿಯಾ ಅಂಡರ್​-19 ತಂಡ ಹಾಗೂ ಮುಂಬೈನ ಅನೇಕ ಪಂದ್ಯಗಳಲ್ಲಿ ಅರ್ಜುನ್ ತೆಂಡೂಲ್ಕರ್​ ಆಡಿದ್ದಾರೆ. ಇವರ​ ಜತೆಗೆ ಮುಂಬೈ ತಂಡದಲ್ಲಿ ತುಷಾರ್​ ದೇಶಪಾಂಡೆ, ಧವಲ್​ ಕುಲಕರ್ಣಿ, ಮಂಜ್ರೇಕರ್​ ಹಾಗೂ ಪ್ರಾಥಮೇಶ್​ ಢಾಕೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಮುಂಬೈ ತಂಡ: ಸೂರ್ಯಕುಮಾರ್​ ಯಾದವ್​(ಕ್ಯಾಪ್ಟನ್​), ಆದಿತ್ಯ ತಾರೆ( ಉಪನಾಯಕ), ಯಶಸ್ವಿ ಜೈಸ್ವಾಲ್​, ಸರ್ಫರಾಜ್​ ಖಾನ್​, ಸಿದ್ದೇಶ್ ಲಾಡ್​, ಶಿವಂ ದುಬೆ, ಶುಭಂ ರಣಜೆ, ಸುಜಿತ್​ ನಾಯ್ಕ, ಸಿರಾಜ್​ ಪಾಟೀಲ್​, ತುಷಾರ್​ ದೇಶಪಾಂಡೆ, ಧವಲ್​ ಕುಲಕರ್ಣಿ, ಮಂಜ್ರೇಕರ್​, ಪ್ರಥಮೇಶ್ ಢಾಕೆ, ಅರ್ಜುನ್​ ತೆಂಡೂಲ್ಕರ್​, ಆಕಾಶ್ ಪ್ರಕಾರ್, ಹಾರ್ದಿಕ್ ಥಾಮೊರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.