ETV Bharat / sports

2023 Cricket World Cup: ಆಯ್ಕೆಗೆ ಲಭ್ಯವಿರುವ ಅತ್ಯುತ್ತಮ ಭಾರತೀಯ ತಂಡ ಇದು: ಲಾಲ್‌ಚಂದ್ ರಜಪೂತ್

author img

By ETV Bharat Karnataka Team

Published : Sep 6, 2023, 8:59 PM IST

ಈಟಿವಿ ಭಾರತದ ಸಂಜಿಬ್ ಗುಹಾ ಅವರು ಭಾರತದ ಮಾಜಿ ಬ್ಯಾಟರ್ ಲಾಲ್‌ಚಂದ್ ರಜಪೂತ್ ಅವರೊಂದಿಗೆ 2023 ಕ್ರಿಕೆಟ್ ವಿಶ್ವಕಪ್‌ ಪ್ರಕಟಿಸಲಾದ 15 ಸದಸ್ಯರ ತಂಡದ ಬಗ್ಗೆ ಅಭಿಪ್ರಾಯವನ್ನು ಕೇಳಿದ್ದು, ಇದಕ್ಕೆ ಅವರು ನೀಡಿರುವ ಪ್ರತಿಕ್ರಿಯೆ ಹೀಗಿದೆ..

2023 Cricket World Cup
2023 Cricket World Cup

ಕೋಲ್ಕತ್ತಾ: ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಏಷ್ಯಾಕಪ್​ ನಡೆಯುತ್ತಿರುವ ಕಾರಣ ಕ್ಯಾಂಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮುಂಬರುವ 2023 ಕ್ರಿಕೆಟ್ ವಿಶ್ವಕಪ್‌ಗಾಗಿ 15 ಸದಸ್ಯರ ತಂಡವನ್ನು ಪ್ರಕಟಿಸಿತು. ಇದರಲ್ಲಿ 7 ಜನ ಹೊಸಬರಿಗೆ ಅವಕಾಶ ಸಿಕ್ಕರೆ, 8 ಜನ ವಿಶ್ವಕಪ್​ ಆಡಿದ ಅನುಭವವನ್ನು ಹೊಂದಿದ್ದಾರೆ. ಅನುಭವಿ ಮತ್ತು ಯುವ ಆಟಗಾರರನ್ನು ಒಳಗೊಂಡ ಪಡೆಯ ಬಗ್ಗೆ ಭಾರತದ ಮಾಜಿ ಆಟಗಾರ ಮತ್ತು ಮ್ಯಾನೇಜರ್ ಲಾಲ್‌ಚಂದ್ ರಜಪೂತ್ ಉತ್ತಮ ಆಯ್ಕೆ ಎಂದು ಶ್ಲಾಘಿಸಿದ್ದಾರೆ.

2023ರ ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ಬಿಸಿಸಿಐ ಆತಿಥ್ಯ ವಹಿಸಿದ್ದು, ಅಕ್ಟೋಬರ್​ 5 ರಿಂದ ಪಂದ್ಯಗಳು ಆರಂಭವಾಗಲಿದೆ. ನವೆಂಬರ್​ 19 ರಂದು ಗುಜರಾತ್​ನ ಅಹಮದಾಬಾದ್​ನಲ್ಲಿ ಫೈನಲ್​ ಪಂದ್ಯ ನಡೆಯಲಿದೆ. ಸದ್ಯ ಏಷ್ಯಾಕಪ್​ಗೆ 18 ಜನ ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿತ್ತು. ಅದರಿಂದ ತಿಲಕ್​ ವರ್ಮಾ, ಸಂಜು ಸ್ಯಾಮ್ಸನ್​ ಮತ್ತು ಪ್ರಸಿದ್ಧ್ ಕೃಷ್ಣ ಅವರನ್ನು ಬಿಟ್ಟು, 15 ಜನರ ತಂಡ ಪ್ರಕಟವಾಗಿದೆ.

2013ರಲ್ಲಿ ಮಹೇಂದ್ರ ಸಿಂಗ್​ ಧೋನಿ ನೇತೃತ್ವದಲ್ಲಿ ಭಾರತ ತಂಡ ಇಂಗ್ಲೆಂಡ್​ನಲ್ಲಿ ಐಸಿಸಿ ಚಾಂಪಿಯನ್ಸ್​ ಟ್ರೋಫಿಯನ್ನು ಜಯಿಸಿತ್ತು. ಈ ಪಂದ್ಯದಲ್ಲಿ ಭಾರತ ಇಂಗ್ಲೆಂಡ್​ ತಂಡವನ್ನು ಅವರ ತವರು ಮೈದಾನದಲ್ಲಿ ಐದು ರನ್​ನಿಂದ ಮಣಿಸಿತ್ತು. ಇದು ಭಾರತ ತಂಡ ಗೆದ್ದ ಕೊನೆಯ ಐಸಿಸಿ ಟ್ರೋಫಿ ಆಗಿದೆ. ನಂತರ 8 ಬಾರಿ ಐಸಿಸಿ ಟ್ರೋಫಿಗಳಲ್ಲಿ ಭಾಗವಹಿಸಿ ಫೈನಲ್​ ತನಕ ತಲುಪಿದರೂ ಗೆಲುವು ದಾಖಲಿಸಲಾಗಿಲ್ಲ. 10 ವರ್ಷಗಳಿಂದ ಭಾರತ ಐಸಿಸಿ ಟ್ರೋಫಿಯ ಬರದಲ್ಲಿದೆ. ಇದನ್ನು ಈ ವಿಶ್ವಕಪ್​ನಲ್ಲಿ ನೀಗಿಸಿಕೊಳ್ಳುತ್ತಾ ಎಂಬುದನ್ನು ಕಾದುನೋಡ ಬೇಕಿದೆ.

2023 Cricket World Cup
2023 ವಿಶ್ವಕಪ್​ಗೆ ಆಯ್ಕೆ ಆಗಿರುವ ಭಾರತ ತಂಡ

ವಿಶ್ವಕಪ್​ಗೆ ಪ್ರಕಟವಾಗಿರುವ ತಂಡದ ಬಗ್ಗೆ ಭಾರತದ ಮಾಜಿ ಬ್ಯಾಟರ್ ಲಾಲ್‌ಚಂದ್ ರಜಪೂತ್ ಈಟಿವಿ ಭಾರತ ಜೊತೆ ಮಾತನಾಡಿದ್ದಾರೆ. ಲಾಲ್‌ಚಂದ್ ರಜಪೂತ್ ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದರು. ಜಿಂಬಾಬ್ವೆ ಮತ್ತು ಅಫ್ಘಾನಿಸ್ತಾನದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ರಜಪೂತ್ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ)ಯ ಪದಾಧಿಕಾರಿಯೂ ಆಗಿದ್ದರು.

ಸಂದರ್ಶನ ಆಯ್ದ ಪ್ರಶ್ನೋತ್ತರಗಳು:

ಇಂದು ಪ್ರಕಟಿಸಲಾದ 15 ಸದಸ್ಯರ ತಂಡದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಲಾಲ್‌ಚಂದ್ ರಜಪೂತ್: ಪ್ರಸ್ತುತ ಏಷ್ಯಾಕಪ್​ ತಂಡದಿಂದ ಪ್ರಸಿದ್ಧ್​ ಕೃಷ್ಣ ಮತ್ತು ಮತ್ತು ತಿಲಕ್​ ವರ್ಮಾ ಅವರನ್ನು ಕೈಬಿಟ್ಟಿರುವುದು ನಿರೀಕ್ಷಿತ ಮಟ್ಟದಲ್ಲಿತ್ತು. ನನ್ನ ಪ್ರಕಾರ ತಿಲಕ್ ವರ್ಮಾ ಮತ್ತು ಪ್ರಸಿದ್ಧ್ ಕೃಷ್ಣ ವಯಸ್ಸಿನಲ್ಲಿ ಚಿಕ್ಕವರು ಅವರಿಗೆ ಇನ್ನೂ ಅವಕಾಶಗಳಿದೆ ತಂಡದಲ್ಲಿ ಆಡಲು. ಅಲ್ಲದೇ ಐದು ವೇಗಿಗಳನ್ನು ತಂಡದಲ್ಲಿ ಆಡಿಸುವ ಅವಶ್ಯಕತೆ ಇಲ್ಲ. ಇದೊಂದು ಉತ್ತಮ ತಂಡ. ನಾನು ಹೇಳುವಂತೆ ತೀವ್ರ ಅಥವಾ ಆಶ್ಚರ್ಯಕರವಾದದ್ದು ಏನೂ ಇಲ್ಲ. ಇದು ಲಭ್ಯವಿರುವ ಅತ್ಯುತ್ತಮ ತಂಡವಾಗಿದೆ.

ಏಷ್ಯಾಕಪ್​ ಪ್ರವಾಸಕ್ಕೆ ಆಯ್ಕೆ ಆದ ತಿಲಕ್ ವರ್ಮ ಅವರಿಗೆ ವಿಶ್ವಕಪ್​ಗೆ ಏಕೆ ಅವಕಾಶ ಸಿಗಲಿಲ್ಲ?

ಲಾಲ್‌ಚಂದ್ ರಜಪೂತ್: ಜನರು ತಿಲಕ್ ವರ್ಮಾ ಅವರಿಗೆ ಭರವಸೆ ನೀಡುತ್ತಿದ್ದಾರೆ, ಆದರೆ ಅವರನ್ನು ಆಯ್ಕೆ ತುರ್ತಾಗಿದೆ ಎಂದು ನಾನು ಭಾವಿಸುತ್ತೇನೆ. ಎರಡು ಪಂದ್ಯಗಳ ನಂತರ ನೀವು ಅವರಂತಹ ಹೊಸಬರನ್ನು ವಿಶ್ವಕಪ್‌ಗೆ ಆಯ್ಕೆ ಮಾಡಲು ಸಾಧ್ಯವಿಲ್ಲ.

ಕೆಎಲ್ ರಾಹುಲ್ ದೀರ್ಘಕಾಲದ ಗಾಯದಿಂದ ಹೊರಗುಳಿದ ನಂತರ ಅವರ ತಂಡದಲ್ಲಿ ಸ್ಥಾನ ಲಭಿಸಿದೆ.. ನಿಮ್ಮ ಅಭಿಪ್ರಾಯ ಏನು?

ಲಾಲ್‌ಚಂದ್ ರಜಪೂತ್: ನನ್ನ ಪ್ರಕಾರ ಕೆಎಲ್ ರಾಹುಲ್ ಉಳಿದ ಪಂದ್ಯಗಳನ್ನು ಆಡಲು ಶ್ರೀಲಂಕಾಕ್ಕೆ ಪ್ರಯಾಣಿಸುತ್ತಿದ್ದಾರೆ ಮತ್ತು ಅವರು ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳನ್ನು ಸಹ ಆಡಲಿದ್ದಾರೆ. ಅವರು ಗುಣಮಟ್ಟದ ಆಟಗಾರ. ಅವರಿಗೆ ಗಾಯವಾಗಿತ್ತು ಮತ್ತು ಈಗ ಅವರು ಫಿಟ್ ಆಗಿದ್ದಾರೆ.

ಬ್ಯಾಟಿಂಗ್ ಮತ್ತು ಬೌಲಿಂಗ್ ವಿಷಯದಲ್ಲಿ ನೀವು ಭಾರತೀಯ ತಂಡವನ್ನು ಹೇಗೆ ಮೌಲ್ಯಮಾಪನ ಮಾಡುತ್ತೀರಿ?

ಲಾಲಚಂದ್ ರಜಪೂತ್: ನನ್ನ ಪ್ರಕಾರ ಭಾರತದ ವೇಗದ ಬೌಲಿಂಗ್ ವಿಭಾಗ ತುಂಬಾ ಚೆನ್ನಾಗಿದೆ. ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದಾರೆ. ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಕಾಂಬೋ ಅತ್ಯುತ್ತಮವಾಗಿದೆ. ಅಲ್ಲದೆ, ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ಆಲ್‌ರೌಂಡ್ ಆಗಿ ಬೌಲಿಂಗ್ ಮಾಡಲಿದ್ದಾರೆ. ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಸ್ಪಿನ್ ವಿಭಾಗದಲ್ಲಿ ಉತ್ತಮವಾಗಿ ಕಾಣುತ್ತಾರೆ.

ಬ್ಯಾಟಿಂಗ್‌ನಲ್ಲಿ ತಂಡವು ಯುವಕರು, ಗುಣಮಟ್ಟ ಮತ್ತು ಅನುಭವದೊಂದಿಗೆ ಸಮತೋಲಿತವಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದವರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಗುಜರಾತ್ ಲಯನ್ಸ್ ತಂಡದ ನಾಯಕತ್ವದ ನಂತರ ಹಾರ್ದಿಕ್ ಪಾಂಡ್ಯ ಪ್ರಬುದ್ಧರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಕ್ರಿಕೆಟ್‌ನ ಎರಡೂ ಪ್ರಕಾರಗಳಲ್ಲೂ ಆಡಬಲ್ಲರು, ಅವರು ಇನ್ನಿಂಗ್ಸ್​ನಲ್ಲಿ ಫಿನಿಶರ್ ಆಗಿರುತ್ತಾರೆ. ಆರಂಭಿಕ ಯುವ ಬ್ಯಾಟರ್​ ಶುಭ್‌ಮನ್ ಗಿಲ್ ಸಹ ಉತ್ತಮ ಬ್ಯಾಟರ್​.

ನಿಮ್ಮ ಮಾರ್ಗದರ್ಶನದಲ್ಲಿ ಟಿ20 ವಿಶ್ವಕಪ್ ಗೆದ್ದ ತಂಡ ಮತ್ತು ಈ ತಂಡವನ್ನು ಹೇಗೆ ಹೋಲಿಸುತ್ತೀರಿ?

ಲಾಲ್‌ಚಂದ್ ರಜಪೂತ್ : 2007 ರ ಟಿ20 ತಂಡ ಮತ್ತು ಇದು ಏಕದಿನ ವಿಶ್ವಕಪ್​ ತಂಡ ಹೋಲಿಕೆ ಮಾಡಬಾರದು. ಇದು ಸಂಪೂರ್ಣವಾಗಿ ವಿಭಿನ್ನವಾಗಿದೆ. 2007 ರಲ್ಲಿ, ನಾವು ಯುವ ಮತ್ತು ಅನುಭವಿಗಳ ಮಿಶ್ರಣವನ್ನು ಹೊಂದಿದ್ದೆವು. ಈ ಬಾರಿಯೂ ಅದೇ ಆಗಿದೆ. ಈ ತಂಡದಲ್ಲಿ ಯುವ ಶುಬ್‌ಮನ್ ಗಿಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಮತ್ತು ಕುಲದೀಪ್ ಯಾದವ್ ಜೊತೆಗೆ ಅನುಭವಿಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಇದ್ದಾರೆ.

ಇದನ್ನೂ ಓದಿ: ಚೀನಾ ಓಪನ್​ನಲ್ಲಿ ಮುಗಿದ ಭಾರತ ಪ್ರವಾಸ.. ಮೊದಲ ಸುತ್ತಿನಲ್ಲಿ ಸೋಲು ಕಂಡ ಸಾತ್ವಿಕ್ - ಚಿರಾಗ್ ಜೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.