ETV Bharat / sitara

ಅವರನ್ನು ಕೊನೆ ಬಾರಿ ನೋಡಿದ್ದು ಅಲ್ಲೇ...ರವಿ ಬೆಳಗೆರೆ ನಿಧನಕ್ಕೆ ಸುದೀಪ್ ಸಂತಾಪ

author img

By

Published : Nov 13, 2020, 10:35 AM IST

Sudeep Condolence to Ravi Belagere death
ರವಿ ಬೆಳಗೆರೆ ನಿಧನಕ್ಕೆ ಸುದೀಪ್ ಸಂತಾಪ

ಖ್ಯಾತ ಪತ್ರಕರ್ತ ರವಿ ಬೆಳಗೆರೆ ನಿಧನಕ್ಕೆ ನಟ ಸುದೀಪ್ ಸಂತಾಪ ವ್ಯಕ್ತಪಡಿಸಿದ್ದಾರೆ. ಬಿಗ್​ಬಾಸ್​ ವೇದಿಕೆಯ ಫೋಟೋಗಳನ್ನು ತಮ್ಮ ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿರುವ ಸುದೀಪ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

ತಮ್ಮ ಬರಹಗಳಿಂದ, ದಿಟ್ಟ ಮಾತುಗಳಿಂದ ಎಷ್ಟೋ ಯುವಜನತೆಗೆ ಸ್ಫೂರ್ತಿಯಾಗಿದ್ದ, ಖ್ಯಾತ ಪತ್ರಕರ್ತ ರವಿ ಬೆಳಗೆರೆ, ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ರವಿ ಬೆಳಗೆರೆಯಂಥ ಪತ್ರಕರ್ತನನ್ನು ಕಳೆದುಕೊಂಡು ಮಾಧ್ಯಮ ಲೋಕ ನಿಜಕ್ಕೂ ಅನಾಥವಾಗಿದೆ.

  • This pic on stage where i saw him last wil b treasured.
    The other,I'm sure is a moment, that the rest of the contestants will cherish.
    You wil be missed sir.
    Deepest Condolences to his family.
    Prayers for his soul to rest in peace.
    🙏🏼🪔 pic.twitter.com/cGIZYipAX8

    — Kichcha Sudeepa (@KicchaSudeep) November 13, 2020 " class="align-text-top noRightClick twitterSection" data=" ">

ರವಿ ಬೆಳಗೆರೆಯವರ ನಿಧನಕ್ಕೆ ನಟ ಸುದೀಪ್ ಕೂಡಾ ಸಂತಾಪ ವ್ಯಕ್ತಪಡಿಸಿದ್ದಾರೆ. ಬಿಗ್​ಬಾಸ್​​ ಸೀಸನ್​​​ 7 ರಲ್ಲಿ ರವಿ ಬೆಳಗೆರೆ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆದರೆ ಅನಾರೋಗ್ಯದ ಕಾರಣ ಸ್ಪರ್ಧೆಯಿಂದ ಅರ್ಧದಲ್ಲೇ ಹೊರ ಹೋಗಿದ್ದರು. ಬಿಗ್​​​ಬಾಸ್ ವೇದಿಯಲ್ಲಿ ಇತರ ಸ್ಪರ್ಧಿಗಳೊಂದಿಗೆ ರವಿ ಬೆಳಗೆರೆ ಇದ್ದ ಫೋಟೋವನ್ನು ತಮ್ಮ ಟ್ವಿಟ್ಟರ್​​​ನಲ್ಲಿ ಹಂಚಿಕೊಂಡಿರುವ ಸುದೀಪ್​ "ನಾನು ಅವರನ್ನು ಕೊನೆಯ ಬಾರಿಗೆ ನೋಡಿದ್ದು ಈ ವೇದಿಕೆಯಲ್ಲಿ. ಇದು ನನಗೂ ಸೇರಿದಂತೆ ಇತರ ಸ್ಪರ್ಧಿಗಳಿಗೂ ಅಮೂಲ್ಯ ಕ್ಷಣವಾಗಿತ್ತು. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಿಮ್ಮ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿಯನ್ನು ದೇವರು ನೀಡಲಿ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸರ್​​" ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.